ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ
ಚನ್ನಪಟ್ಟಣ; ಮೇ/೧೨/೨೦/ಮಂಗಳವಾರ. ದಿನೆದಿನೇ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತ ಕಷ್ಟಪಟ್ಟು ಏನೇ ಬೆಳೆದರೂ ಅವನಿಗೆ ತಕ್ಕ ಬೆಲೆ ದಕ್ಕದೆ, ತನ್ನ ಕಷ್ಟವನ್ನು ತಾನೇ ಅಳೆದು ತೂಗಿ, ಆ ಎಲ್ಲಾ ಬೆಳೆಯನ್ನು, ರಸ್ತೆಗೆ ಚಲ್ಲಿಯೋ, ಮಾರುಕಟ್ಟೆಯಲ್ಲಿಯೇ ಬಿಟ್ಟೋ ಬಂದು ಬಿಡುತ್ತಾನೆ. ಇನ್ನೂ ಉಳಿದಿದ್ದು ಮಾತ್ರ ಕೊನೆಯ ಪಯಣ. ಅಂತಹ ಒಂದು ಘಟನೆ ತಾಲ್ಲೂಕಿನ ಅಂಕುಶನಹಳ್ಳಿ ರೈತ ಸುರೇಶ್ ರವರಿಂದ ನಡೆದಿದ್ದು ರೈತನ ಗೋಳು ಕೇಳೋರು ಯಾರು ಎಂಬಂತಾಗಿದೆ.
ಸುರೇಶ್ ಮೂಲ ಕೃಷಿಕನಾಗಿದ್ದು ತನ್ನ ಎರಡು ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿದ್ದರು. ಅಧ್ವಾನದ ವಿದ್ಯುತ್, ಸ್ವಲ್ಪ ಸ್ವಲ್ಪವೇ ಜಿನುಗುವ ಬೋರ್ ವೆಲ್ ನೀರಿನಲ್ಲಿಯೂ ಸಹ ಉತ್ತಮ ಬೆಳೆ ಬೆಳೆದಿದ್ದರು. ಅದೇ ಸೊಪ್ಪಿನಲ್ಲಿ, ರೇಷ್ಮೆ ಹುಳುಗಳನ್ನು ಮೇಯಿಸಿ ಗೂಡು ಮಾರಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಕಳೆದ ದಿನ ತಾನು ಕಷ್ಟಪಟ್ಟು ಬೆಳೆದ ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ ಕೇವಲ ೧೮೦ ರೂಪಾಯಿಗೆ ಹರಾಜು ಕೂಗಿದರು ಎಂಬ ಕಾರಣಕ್ಕೆ ನೊಂದ ರೈತ ತನ್ನ ಹೊಲಕ್ಕೆ ಬಂದು ಆಳೆತ್ತರ ಬೆಳೆಸಿದ್ದ ರೇಷ್ಮೆ ಫಸಲನ್ನು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡಿದ್ದಾರೆ.
ಕೇವಲ ಲಾಕ್ಡೌನ್ ಅಲ್ಲದೇ ಬಹುತೇಕ ಸಮಯದಲ್ಲಿ ಸಹ ರೈತನ ಬೆಳೆಗೆ ಬೆಲೆ ಸಿಗುವುದೇ ಇಲ್ಲ, ಇನ್ನೂ ವೈಜ್ಞಾನಿಕ ಬೆಲೆಯಂತೂ ದೂರದ ಮಾತು. ಇವುಗಳ ನಡುವೆ ಅತಿವೃಷ್ಟಿ, ಅನಾವೃಷ್ಟಿ, ವಿದ್ಯುತ್ ನ ಕಣ್ಣಾಮುಚ್ಚಾಲೆ, ಸಹಸ್ರಾರು ಅಡಿಯಿಂದ ಬೋರ್ ವೆಲ್ ಮೂಲಕ ಜಿನುಗುವ ನೀರು ಇವೆಲ್ಲಾ ಕಷ್ಟಗಳ ನಡುವೆಯೇ ಅವನ ಬದುಕು ಸಾಗಬೇಕಿದೆ. ಒಂದು ಕಿಲೋ ರೇಷ್ಮೆ ಗೂಡು ಬೆಳೆಯಲು ಕನಿಷ್ಠ ೨೫೦ ರೂಪಾಯಿ ಖರ್ಚು ತಗುಲುತ್ತದೆ. ಅದೂ ಸಿಗದಿದ್ದಾಗ ಆತ ಜೀವ ಮತ್ತು ಜೀವನದ ಆಸೆಯನ್ನೇ ತೊರೆಯುತ್ತಾನೆ. ಇಂದು ಇಂದಿನ ರೈತನ ದುಸ್ಥಿತಿಯಾಗಿದೆ.
ತಾಲ್ಲೂಕಿನಲ್ಲಿ ನಾಲ್ಕು ಸಾವಿರ ಮಂದಿ ರೇಷ್ಮೆ ಬೆಳೆಗಾರರುದ್ದಾರೆ, ಲಾಕ್ಡೌನ್ ಸಮಯದಲ್ಲಿ ಬೆಲೆ ಇಳಿಕೆಯಾಗಿದೆ, ಅದು ರೈತನಿಗೆ ಹೊಡೆತವೇ ಸರಿ. ಅದಕ್ಕಾಗಿ ರೇಷ್ಮೆ ಫಸಲನ್ನೇ ಹಾಳುಗೆಡವಿರುವುದು ಸರಿಯಲ್ಲ. ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ.
*ಮಂಜುನಾಥ ರೇಷ್ಮೆ ಇಲಾಖೆಯ ಉಪ ನಿರ್ದೇಶಕರು*
ಇದೊಂದು ಚೈನ್ ಲಿಂಕ್ ಇದ್ದಂತೆ, ಲಾಕ್ಡೌನ್ ಆಗಿರುವುದರಿಂದ ರೀಲರ್ ಗಳು ಉತ್ಪಾದಿಸಿರುವ ರೇಷ್ಮೆ ಎಳೆಯನ್ನು ಖರೀದಿಸುವವರಿಲ್ಲ. ಇಂತಹ ಸಮಯದಲ್ಲಿ ಬೆಲೆ ಕುಸಿತಗೊಂಡಿದೆ. ವೈಜ್ಞಾನಿಕವಾಗಿ ಏನು ಬೆಂಬಲ ನೀಡಲು ಸಾಧ್ಯವಿದೆಯೋ ಅದನ್ನು ನೀಡಲು ತೀರ್ಮಾನಿಸುತ್ತೇವೆ.
ಬಸವರಾಜು ಉಪನಿರ್ದೇಶಕರು ರೇಷ್ಮೆ ಬಿತ್ತನೆ ಕೋಠಿ
ಕಳೆದ ಎಂಟು ತಿಂಗಳುಗಳಿಂದ ರೇಷ್ಮೆ ಬೆಲೆ ಕುಸಿತಗೊಂಡಿದ್ದು, ನಷ್ಟ ಅನುಭವಿಸಿದ್ದೇನೆ. ಎಷ್ಟೋ ಬೆಳೆಗಳಲ್ಲಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಜೀವನ ಹೇಗೆ ಸಾಗಿಸಬೇಕೆಂಬ ಚಿಂತೆ ಕಾಡತೊಡಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ.
ಸುರೇಶ್ ಅಂಕುಶನಹಳ್ಳಿ, ನಷ್ಟ ಅನುಭವಿಸಿದ ರೈತ
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು