ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು
ಚನ್ನಪಟ್ಟಣ:ಮೇ:೧೨/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಂದ ನಂತರ ಕೊರೊನಾ ಸೋಂಕು ತಗುಲಿದ ಕೆಲ ಕಿಡಿಗೇಡಿ ಮುಸ್ಲಿಂ ರು ಹಣ್ಣು, ಹಾಲು, ತರಕಾರಿ ಉಡುಪು ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ತೋರಿದ ವಿಕೃತಿಯಿಂದ ಅನೇಕ ಸಣ್ಣ ಸಣ್ಣ ವ್ಯಾಪಾರಸ್ಥ ಮುಸ್ಲಿಮರು ಇಂದು ನಷ್ಟ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.
ಸದ್ಯ ತಾಲ್ಲೂಕು ಮತ್ತು ಕೇಂದ್ರಾಡಳಿತ ಪ್ರದೇಶವಾದ ನಗರದ ಡಿ ಟಿ ರಾಮು ವೃತ್ತ, ಸಾತನೂರು ವೃತ್ತ, ಅಂಚೆ ಕಛೇರಿ ರಸ್ತೆ, ಎಂ ಜಿ ಮತ್ತು ಜೆ ಸಿ ರಸ್ತೆಗಳಲ್ಲಿ, ತಳ್ಳು ಗಾಡಿಗಳು ಮತ್ತು ಆಟೋಗಳಲ್ಲಿ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿರುವುದು ಇಂದಿಗೂ ಕಂಡು ಬರುತ್ತಿದೆಯಾದರು ವ್ಯಾಪಾರಸ್ಥರ ಮೊಗದಲ್ಲಿ ಕೊರೊನಾ ಗಿಂತ ಮೊದಲಿದ್ದ ನಗು ಮತ್ತು ವ್ಯಾಪಾರ ಎರಡು ಇಲ್ಲವಾಗಿರುವುದು ಗೋಚರಿಸುತ್ತಿದೆ.
ಕೊರೊನಾ ಬಂದ ನಂತರ ಬೇರೆಲ್ಲಾ ಸಮುದಾಯದವರು ಮುಸ್ಲಿಂ ಸಮುದಾಯದವರ ಬಳಿ ತಿನ್ನುವ ಪದಾರ್ಥಗಳನ್ನು ಖರೀದಿಸುವುದನ್ನು ಕಡಿಮೆ ಮಾಡಿರುವುದರಿಂದ ವ್ಯಾಪಾರದಿಂದಲೇ ತಮ್ಮ ದಿನನಿತ್ಯದ ಬದುಕನ್ನು ಕಟ್ಟಿಕೊಂಡಿರುವ ಮುಸ್ಲಿಮ್ ವ್ಯಾಪಾರಿಗಳ ಬದುಕು ಇಂದು ಅತಂತ್ರ ಸ್ಥಿತಿಯಲ್ಲಿದೆ. ತಿಳುವಳಿಕೆಯುಳ್ಳ ಅನೇಕರು ಇಂದಿಗೂ ಅವರ ಬಳಿ ಖರೀದಿಸುತ್ತಿರುವುದು ಸಂತೋಷದಾಯಕವಾದರು ಅಗತ್ಯ ವಸ್ತುಗಳನ್ನು ಎಲ್ಲಾ ಸಮುದಾಯದವರು ಅವರ ಬಳಿ ಖರೀದಿಸಿ ಅವರ ಬದುಕಿಗೆ ನೆರವಾಗಬೇಕಾಗಿದೆ.
ಇಲ್ಲಿ ವ್ಯವಸ್ಥೆಯೇ ಕೆಟ್ಟದ್ದಾಗಿದೆ, ಯಾರನ್ನೂ ದೂರಲಾಗುತ್ತಿಲ್ಲ, ನಮಗೆ ನಂಬಿಕೆಯಷ್ಟೇ ಮುಖ್ಯ, ಸ್ಥಳೀಯವಾಗಿ ಯಾರೂ ಸಹ ಇಂತಹ ಕುಕೃತ್ಯ ಎಸಗುತ್ತಿಲ್ಲ, ಎಸಗುವುದಿಲ್ಲ. ಎಲ್ಲರೂ ನಮ್ಮವರೆಂದು ಗುರುತಿಸಿ ಸಹಾಯ ಹಸ್ತ ಚಾಚಬೇಕಿದೆ.
ನಿಜಾಮ್ ಫೌಜದಾರ್, ಕಾಂಗ್ರೆಸ್ ಮುಖಂಡರು
ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರು ಕೆಟ್ಟವರು ಇರುತ್ತಾರೆ, ಕೆಟ್ಟವರನ್ನು ಗುರುತಿಸಿ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಅವರನ್ನು ಸರಿದಾರಿಗೆ ತರಬೇಕು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಸಮುದಾಯವನ್ನೇ ಅನುಮಾನಿಸುವುದು ತಪ್ಪು. ಎಲ್ಲಾ ಸಮುದಾಯದವರು ಅವರ ಬಳಿ ದಿನನಿತ್ಯದ ವಸ್ತುಗಳನ್ನು ಖರೀದಿಸುವ ಮೂಲಕ ಬಡ ಮುಸ್ಲಿಂ ವ್ಯಾಪಾರಸ್ಥರಿಗೆ ನೆರವಾಗಬೇಕು.
ವಾಸೀಲ್ ಅಲಿಖಾನ್. ಎಪಿಎಂಸಿ ನಿರ್ದೇಶಕರು.
ಮಾನವ ಧರ್ಮ ಎಲ್ಲರಿಗೂ ಒಂದೇ, ಯಾರೋ ಅಧರ್ಮಿಗಳು ಮಾಡಿದ ಕುಕೃತ್ಯಕ್ಕೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಮುಸ್ಲಿಂ ಸಮುದಾಯದ ದೊಡ್ಡ ದೊಡ್ಡ ಪ್ರಮಾಣದ ವ್ಯಾಪಾರಸ್ಥರಿಗೆ ಹೊಡೆತ ಬೀಳುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಈ ಹೊಡೆತ ಬೀಳುತ್ತಿದ್ದು, ಅವರ ಬಳಿ ಎಲ್ಲರೂ ಖರೀದಿಸುವ ಮೂಲಕ ಮಾನವ ಧರ್ಮ ದೊಡ್ಡದು ಎಂದು ಸಾರಬೇಕಿದೆ.
ಉಜ್ಮಾ ಇಶ್ರತ್, ನಗರಸಭೆ ಮಾಜಿ ಸದಸ್ಯೆ.
ಕೊರೊನಾ ಬರುವ ಮೊದಲು ಬೇಧ ಭಾವ ಇಲ್ಲದೆ ಎಲ್ಲರೂ ಖರೀದಿಸುತ್ತಿದ್ದರು, ಕೊರೊನಾ ನಂತರ ಹಿಂದುಮುಂದು ನೋಡುತ್ತಿದ್ದು, ಮೊದಲಿನ ವ್ಯಾಪಾರ ನಡೆಯುತ್ತಿಲ್ಲ. ಹಣ್ಣುಗಳನ್ನು ಶೇಖರಿಸಿಡಲಾಗುವುದಿಲ್ಲ. ಕೊಳೆತು ಹೋಗುತ್ತಿದ್ದು ದಿನದ ಖರ್ಚಿಗೂ ಹಣ ಸಿಗುತ್ತಿಲ್ಲ. ಆದರೆ ಇತ್ತೀಚಿಗೆ ಬಹುತೇಕ ಎಲ್ಲರೂ ಬಂದು ಖರೀದಿಸುತ್ತಿರುವುದು ಸಂತೋಷದಾಯಕ.
ಅಲೀಂ ಮತ್ತು ಅಫೀರ್, ಹಣ್ಣು ವ್ಯಾಪಾರಸ್ಥರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು