ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ರಾಮನಗರ:ಮೇ/೩೦/೨೦/ಶನಿವಾರ. ಜಾನಪದ ಲೋಕದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ೧೧೦ ಜಾನಪದ ಕಲಾವಿದರಿಗೆ ದಿನಸಿ ಕಿಟ್ಗಳನ್ನು ಇಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ಕೊರೊನಾ ಲಾಕ್ಡೌನ್ ನಿಂದ ನಮ್ಮ ಬಡ ಜಾನ ಪದ ಕಲಾವಿದರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೋ ತಿಳಿಯದು. ಲಾಕ್ಡೌನ್ ಘೋಷಣೆ ಯಾದ ದಿನದಿಂದ ನನ್ನ ಮನಸ್ಸಿನಲ್ಲಿ ಅವರ ಬಗ್ಗೆಯೇ ಚಿಂತೆ ಮೂಡಿತ್ತು. ತಕ್ಷಣ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿಯವರನ್ನು ಸಂಪರ್ಕಿಸಿ ಜಾನಪದ ಕಲಾವಿದರಿಗೆ ಸಹಾಯ ಹಸ್ತ ನೀಡಬೇಕು ಎಂದು ತಿಳಿಸಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ನಾನು ಟಿ ಎಸ್ ನಾಗಾಭರಣ ಮತ್ತು ಕಪ್ಪಣ್ಣ ಹಾಗೂ ಇತರೆ ಪ್ರಮುಖರು ಅವರನ್ನು ಭೇಟಿ ಮಾಡಿ, ಜಾನಪದ ಕಲಾವಿದರು ಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡಬೇಕು, ಕನಿಷ್ಠ ಅವರಿಗೆ ಎರಡು ಸಾವಿರ ರೂ ಹಣ ಕೊಡಬೇಕು ಎಂದು ಹೇಳಿದಾಗ, ಅವರು ನಮ್ಮನ್ನು ಮುಖ್ಯಮಂತ್ರಿ ಗಳ ಬಳಿ ಕರೆದುಕೊಂಡು ಹೋಗಿ ನಿವೇದನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ಆಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಕಲಾವಿದರ ಸಮಸ್ಯೆಯನ್ನು ಗಮನಿಸಿ, ನಾವು ಕೊಟ್ಟ ಕೋರಿಕೆ ಪತ್ರದ ಮೇಲೆ ಎರಡು ಕೋಟಿಗೆ ಮಂಜೂರಾತಿ ನೀಡಿದರು. ಅದು ಹಣಕಾಸು ಇಲಾಖೆ ಯಲ್ಲಿ ಇನ್ನೂ ತೊಯ್ದಾಡುತ್ತಿದೆ. ಶೀಘ್ರದಲ್ಲಿಯೇ ಅದು ಕಾರ್ಯಗತವಾಗುವ ಭರವಸೆ ಇದೆ ಎಂದರು.
ದಾನಿಗಳಿಂದ ಈ ದಿನಸಿ ಕಿಟ್ ತಕ್ಷಣ ನನ್ನ ಮನಸ್ಸಿಗೆ ಬಂದಿದ್ದು, ಜಾನಪದ ಪರಿಷತ್ತಿನ ರೂವಾರಿ ಹೆಚ್. ಎಲ್ ನಾಗೇಗೌಡರ ಮಗಳು, ಶಾಂತಮ್ಮ ಚಿನ್ನಸ್ವಾಮಿ. ಅವರು ನಮ್ಮ ಮನವಿಗೆ ಸ್ಪಂದಿಸಿ ಬಡ ಜಾನಪದ ಕಲಾವಿದರಿಗೆ ಸಹಾಯ ಮಾಡಲು ೫೦ ಸಾವಿರ ರೂ ಧನ ಸಹಾಯ ಮಾಡಿದರು. ಆಮೇಲೆ ಆದಿ ಚುಂಚನಗಿರಿ ಮಠಾಧೀಶ ರಾದ ಶ್ರೀ ನಿರ್ಮಲಾನಂದ ನಾಥಸ್ವಾಮೀಜಿಯವರಿಗೆ ಕೋರಿಕೆ ಮಂಡಿಸಿದಾಗ ಅವರು ಸಹಕಾರ ಹಸ್ತ ನೀಡಿದರು. ಜಾನಪದ ಪರಿಷತ್ತಿನಿಂದ ಒಂದಷ್ಟು ಹಣ ಹಾಕಿ ಇಂದು ಈ ೧೧೦ ಜನರಿಗೆ ದಿನಸಿ ಕಿಟ್ ಕೊಡುತ್ತಿದ್ದೇವೆ ಎಂದರು.
ಜಾನಪದ ಕಲಾವಿದರ ನೋವು, ಜಾನಪದ ಪರಿಷತ್ತಿನ ನೋವು ಎಂದು ತಿಳಿದು ಈ ಕೆಲಸ ಮಾಡಲಾಗಿದೆ. ಇದರಿಂದ ಈ ಲೋಕ ಕಟ್ಟಿದ ಹೆಚ್.ಎಲ್ ನಾಗೇಗೌಡರ ಆತ್ಮಕ್ಕೆ ತೃಪ್ತಿಯಾಗಿದೆ. ಜಾನಪದ ಕಲಾವಿದರ ನೋವುಗಳಿಗೆ ನಾಗೇಗೌಡರು ಮಮ್ಮಲ ಮರುಗುತ್ತಿದ್ದರು. ಹಾಗಾಗಿ ಈ ಕೆಲಸ ಸಾರ್ಥಕವಾಗಿದೆ ಎಂದು ಅವರು ಹೇಳಿದರು. ಸಂದರ್ಭದಲ್ಲಿ ಅವರು ಕಲಾವಿದರಿಗೆ ದಿನಸಿ ಕಿಟ್ ವಿತರಿಸಿದರು.
ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜಾನಪದ ಕಲಾವಿರಿಗೂ ದಿನಸಿ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಇದರಿಂದ ಅವರಿಗೆ ಕೆಲವು ದಿವಸಗಳು ತೊಂದರೆ ಇಲ್ಲದೆ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆದಷ್ಟು ಆಹಾರ ಪದಾರ್ಥವನ್ನು ಮಿತವಾಗಿ ಬಳಸಿ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಶಾಂತಮ್ಮ ಚಿನ್ನಸ್ವಾಮಿ ಯವರು, ನಮ್ಮ ತಂದೆ ನಾಗೇಗೌಡರು ಜಾನಪದ ಕಲಾವಿದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರು ಕಟ್ಟಿದ ಈ ಲೋಕದಲ್ಲಿ ಇಂತಹ ಒಂದು ಸಾರ್ಥಕ ಕೆಲಸ ಆಗುತ್ತಿರುವುದು ನನಗೆ ಹೆಮ್ಮೆ ತಂದಿದೆ. ಕಲಾವಿದರುಗಳಾದ ನೀವು ಆರೋಗ್ಯದ ಕಡೆ ಹೆಚ್ಚು ಒತ್ತು ಕೊಡಿ ಎಂದು ಶುಭ ಹಾರೈಸಿದರು.
ಸಂದರ್ಭದಲ್ಲಿ ರಾಮನಗರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸು.ತ ರಾಮೇಗೌಡ ಉಪ ಸ್ಥಿತರಿದ್ದರು.ಜಾನಪದ ಲೋಕದ ಮುಖ್ಯ ಆಡಳಿ ತಾಧಿಕಾರಿ ಸಿ.ಎನ್ ರುದ್ರಪ್ಪ ಅವರು ಸ್ವಾಗತ ಬಯಸಿದರು. ಕಲಾವಿದರಾದ ಪ್ರತಾಪ್ ಅವರು ನಿರೂಪಣೆ ಮಾಡಿದರು. ಲೋಕದ ಸಿಬ್ಬಂದಿ ಚೈತ್ರ ಅವರು ಸ್ವಾಗತ ಬಯಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು