ಮುಗಿಲು ಮುಟ್ಟುವತ್ತ ಕಸದ ಗುಡ್ಡೆ! ಅಣ್ಣೇಗೌಡ ಬಿಲ್ಡಿಂಗ್ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ ?
ಚನ್ನಪಟ್ಟಣ:೦೯/೨೦/ಮಂಗಳವಾರ. ನಗರಸಭೆಯ ಕೂಗಳತೆ ದೂರದಲ್ಲಿರುವ ಹಲವಾರು ಜನಪಯೋಗಿ ವಸ್ತುಗಳ ಮಾರುಕಟ್ಟೆ ಎಂದೇ ಅನಾದಿ ಕಾಲದಿಂದಲೂ, ಜನಮಾನಸದಲ್ಲಿ ಉಳಿದುಕೊಂಡು ಬಂದಿರುವ ಎಂಜಿ ರಸ್ತೆ ಮತ್ತು ಜೆಸಿ ರಸ್ತೆಯ ಕೂಡುವಿಕೆ ಬಳಿಯ, ನಿಂಬೆ ಹಣ್ಣು ವೃತ್ತದಲ್ಲಿರುವ ನಿಡಘಟ್ಟ ಅಣ್ಣೇಗೌಡ ರ ಬಿಲ್ಡಿಂಗ್ ನ ಹಿಂಭಾಗದಲ್ಲಿ ಕಾಡಿನ ಗಿರಿಯಂತೆ ಬೆಳೆದು ನಿಂತಿದೆ ಕಸದ ರಾಶಿ.
ಕನಿಷ್ಠ ಇಪ್ಪತ್ತು ಟ್ರ್ಯಾಕ್ಟರ್ ನಷ್ಟು ಕಸ ಅಲ್ಲಿರಬಹುದು ಎಂದು ಅಣ್ಣೇಗೌಡ ಬಿಲ್ಡಿಂಗ್ ನ ವ್ಯಾಪಾರಸ್ಥರು ಅಂದಾಜಿಸಿ ಹೇಳುತ್ತಾರೆ. ಆದರೆ ಅಂಗಡಿಗಳ ಮಾಲೀಕರಾಗಲಿ, ಸುತ್ತಲೂ ವಾಸಿಸುತ್ತಿರುವ ನಿವಾಸಿಗಳಾಗಲಿ, ದಿನನಿತ್ಯ ವ್ಯಾಪಾರ ವಹಿವಾಟಿಗಾಗಿ ಬರುವ ಸಹಸ್ರಾರು ಮಂದಿ ಗ್ರಾಹಕರಾಗಲಿ ಈ ಕಸದ ರಾಸಿಯ ಬಗ್ಗೆ ಚಕಾರ ಎತ್ತದಿರುವುದು ನಗರಸಭೆಯವರಿಗೆ ವರದಾನವಾಗಿರಬಹುದು.
ಈ ಕಸದ ರಾಸಿಯು ಅಂಗಡಿಮುಂಗಟ್ಟುಗಳ ಕಸವೋ ? ಅಥವಾ ನಗರಸಭೆಯ ಮಂದಿಯೇ ಇಲ್ಲಿ ಕಸ ತಂದು ಸುರಿದಿರಬಹುದೇ ! ಎಂಬ ಅನುಮಾನವು ಈ ಕಸದ ಗುಡ್ಡೆಯನ್ನು ನೋಡಿದಾಗ ಅನುಮಾನ ಮೂಡುವುದು ಸಹಜ.
ಆದರೆ ಇಷ್ಟೊಂದು ಕಸ ಗುಡ್ಡೆಯಾದರೂ ನಗರಸಭೆಯ ಸಿಬ್ಬಂದಿಗಳಿಗಾಗಲಿ, ಆರೋಗ್ಯ ಅಧಿಕಾರಿಗಳಿಗಾಗಲಿ, ಪೌರಾಯುಕ್ತ ಶಿವನಂಕಾರಿಗೌಡರಿಗಾಗಲಿ ಗೋಚರಿಸದಿರುವುದು ಅವರ ಸೂಕ್ಷ್ಮಾಂಗಗಳು ಕೆಲಸ ನಿರ್ವಹಿಸುತ್ತಿದ್ದಾವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಿದೆ.
ಮೊದಲು ಅಣ್ಣೇಗೌಡ ರ ಕುಟುಂಬದವರೇ ಎರಡು ತಿಂಗಳಿಗೊಮ್ಮೆ ತೆಗೆದುಕೊಂಡು ಹೋಗುತ್ತಿದ್ದರು.
ಕಳೆದ ಏಳೆಂಟು ತಿಂಗಳಿಂದ ಅವರು ತುಂಬಿಕೊಂಡು ಹೋಗುತ್ತಿಲ್ಲ. ನಗರಸಭೆಯವರಿಗೆ ಮತ್ತು ಮಾಜಿ ಸದಸ್ಯರಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಈ ವಾಸನೆಯಿಂದ ಇಲ್ಲಿ ವಾಸಿಸುವುದೇ ಕಷ್ಟವಾಗಿದೆ.
*ಕೃಷ್ಣಪ್ಪ. ಸ್ಥಳೀಯ ನಿವಾಸಿ*
ಅಣ್ಣೇಗೌಡ ಬಿಲ್ಡಿಂಗ್ ನಲ್ಲಿ ಬಾಡಿಗೆಗೆ ಇರುವ ಅಂಗಡಿಗಳ ಕಸದ ಜೊತೆಗೆ ಅಕ್ಕಪಕ್ಕದ ಅಂಗಡಿಗಳ ಕಸವೂ ಇಲ್ಲಿಯೇ ಜಮೆ ಆಗುತ್ತಿದೆ. ಮಾಲೀಕರಾಗಲಿ, ನಗರಸಭೆಯವರಾಗಲಿ ಕಸವನ್ನು ತೆರವು ಮಾಡುತ್ತಿಲ್ಲ. ಮಳೆ ಬಂದಾಗಂತು ಗಬ್ಬು ನಾರುತ್ತಿದೆ. ಕೊರೊನಾ ಗಿಂತಲೂ ಭಯಾನಕ ರೋಗ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.
*ನಾಗರಾಜು, ವ್ಯಾಪಾರಿ*
ಅಲ್ಲಿರುವ ಸಂಪೂರ್ಣ ಕಸವು ಅಣ್ಣೇಗೌಡ ಬಿಲ್ಡಿಂಗ್ ನಲ್ಲಿರುವ ಅಂಗಡಿಗಳು ಮತ್ತು ಗೋಡೌನ್ ದಾಗಿದ್ದು, ಅಲ್ಲಿಗೆ ಯಾವುದೇ ದೊಡ್ಡ ವಾಹನಗಳು ಹೋಗಲಾಗುತ್ತಿಲ್ಲ. ಇಂದು ಪರಿಶೀಲಿಸಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ.
*ವರಲಕ್ಷ್ಮಿ. ಆರೋಗ್ಯಾಧಿಕಾರಿ. ನಗರಸಭೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು