Tel: 7676775624 | Mail: info@yellowandred.in

Language: EN KAN

    Follow us :


ಮುಗಿಲು ಮುಟ್ಟುವತ್ತ ಕಸದ ಗುಡ್ಡೆ! ಅಣ್ಣೇಗೌಡ ಬಿಲ್ಡಿಂಗ್‌ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ ?

Posted date: 09 Jun, 2020

Powered by:     Yellow and Red

ಮುಗಿಲು ಮುಟ್ಟುವತ್ತ ಕಸದ ಗುಡ್ಡೆ! ಅಣ್ಣೇಗೌಡ ಬಿಲ್ಡಿಂಗ್‌ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ ?

ಚನ್ನಪಟ್ಟಣ:೦೯/೨೦/ಮಂಗಳವಾರ. ನಗರಸಭೆಯ ಕೂಗಳತೆ ದೂರದಲ್ಲಿರುವ ಹಲವಾರು ಜನಪಯೋಗಿ ವಸ್ತುಗಳ ಮಾರುಕಟ್ಟೆ ಎಂದೇ ಅನಾದಿ ಕಾಲದಿಂದಲೂ, ಜನಮಾನಸದಲ್ಲಿ ಉಳಿದುಕೊಂಡು ಬಂದಿರುವ ಎಂಜಿ ರಸ್ತೆ ಮತ್ತು ಜೆಸಿ ರಸ್ತೆಯ ಕೂಡುವಿಕೆ ಬಳಿಯ, ನಿಂಬೆ ಹಣ್ಣು ವೃತ್ತದಲ್ಲಿರುವ ನಿಡಘಟ್ಟ ಅಣ್ಣೇಗೌಡ ರ ಬಿಲ್ಡಿಂಗ್ ನ ಹಿಂಭಾಗದಲ್ಲಿ ಕಾಡಿನ ಗಿರಿಯಂತೆ ಬೆಳೆದು ನಿಂತಿದೆ ಕಸದ ರಾಶಿ.


ಕನಿಷ್ಠ ಇಪ್ಪತ್ತು ಟ್ರ್ಯಾಕ್ಟರ್ ನಷ್ಟು ಕಸ ಅಲ್ಲಿರಬಹುದು ಎಂದು ಅಣ್ಣೇಗೌಡ ಬಿಲ್ಡಿಂಗ್ ನ ವ್ಯಾಪಾರಸ್ಥರು ಅಂದಾಜಿಸಿ ಹೇಳುತ್ತಾರೆ. ಆದರೆ ಅಂಗಡಿಗಳ ಮಾಲೀಕರಾಗಲಿ, ಸುತ್ತಲೂ ವಾಸಿಸುತ್ತಿರುವ ನಿವಾಸಿಗಳಾಗಲಿ, ದಿನನಿತ್ಯ ವ್ಯಾಪಾರ ವಹಿವಾಟಿಗಾಗಿ ಬರುವ ಸಹಸ್ರಾರು ಮಂದಿ ಗ್ರಾಹಕರಾಗಲಿ ಈ ಕಸದ ರಾಸಿಯ ಬಗ್ಗೆ ಚಕಾರ ಎತ್ತದಿರುವುದು ನಗರಸಭೆಯವರಿಗೆ ವರದಾನವಾಗಿರಬಹುದು.


ಈ ಕಸದ ರಾಸಿಯು ಅಂಗಡಿಮುಂಗಟ್ಟುಗಳ ಕಸವೋ ? ಅಥವಾ ನಗರಸಭೆಯ ಮಂದಿಯೇ ಇಲ್ಲಿ ಕಸ ತಂದು ಸುರಿದಿರಬಹುದೇ ! ಎಂಬ ಅನುಮಾನವು ಈ ಕಸದ ಗುಡ್ಡೆಯನ್ನು ನೋಡಿದಾಗ ಅನುಮಾನ ಮೂಡುವುದು ಸಹಜ.

ಆದರೆ ಇಷ್ಟೊಂದು ಕಸ ಗುಡ್ಡೆಯಾದರೂ ನಗರಸಭೆಯ ಸಿಬ್ಬಂದಿಗಳಿಗಾಗಲಿ, ಆರೋಗ್ಯ ಅಧಿಕಾರಿಗಳಿಗಾಗಲಿ, ಪೌರಾಯುಕ್ತ ಶಿವನಂಕಾರಿಗೌಡರಿಗಾಗಲಿ ಗೋಚರಿಸದಿರುವುದು ಅವರ ಸೂಕ್ಷ್ಮಾಂಗಗಳು ಕೆಲಸ ನಿರ್ವಹಿಸುತ್ತಿದ್ದಾವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಿದೆ.


ಮೊದಲು ಅಣ್ಣೇಗೌಡ ರ ಕುಟುಂಬದವರೇ ಎರಡು ತಿಂಗಳಿಗೊಮ್ಮೆ ತೆಗೆದುಕೊಂಡು ಹೋಗುತ್ತಿದ್ದರು.

ಕಳೆದ ಏಳೆಂಟು ತಿಂಗಳಿಂದ ಅವರು ತುಂಬಿಕೊಂಡು‌ ಹೋಗುತ್ತಿಲ್ಲ. ನಗರಸಭೆಯವರಿಗೆ ಮತ್ತು ಮಾಜಿ ಸದಸ್ಯರಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಈ ವಾಸನೆಯಿಂದ ಇಲ್ಲಿ ವಾಸಿಸುವುದೇ ಕಷ್ಟವಾಗಿದೆ.

*ಕೃಷ್ಣಪ್ಪ. ಸ್ಥಳೀಯ ನಿವಾಸಿ*


ಅಣ್ಣೇಗೌಡ ಬಿಲ್ಡಿಂಗ್ ನಲ್ಲಿ ಬಾಡಿಗೆಗೆ ಇರುವ ಅಂಗಡಿಗಳ ಕಸದ ಜೊತೆಗೆ ಅಕ್ಕಪಕ್ಕದ ಅಂಗಡಿಗಳ ಕಸವೂ ಇಲ್ಲಿಯೇ ಜಮೆ ಆಗುತ್ತಿದೆ. ಮಾಲೀಕರಾಗಲಿ, ನಗರಸಭೆಯವರಾಗಲಿ ಕಸವನ್ನು ತೆರವು ಮಾಡುತ್ತಿಲ್ಲ. ಮಳೆ ಬಂದಾಗಂತು ಗಬ್ಬು ನಾರುತ್ತಿದೆ. ಕೊರೊನಾ ಗಿಂತಲೂ ಭಯಾನಕ ರೋಗ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

*ನಾಗರಾಜು, ವ್ಯಾಪಾರಿ*


ಅಲ್ಲಿರುವ ಸಂಪೂರ್ಣ ಕಸವು ಅಣ್ಣೇಗೌಡ ಬಿಲ್ಡಿಂಗ್ ನಲ್ಲಿರುವ ಅಂಗಡಿಗಳು ಮತ್ತು ಗೋಡೌನ್ ದಾಗಿದ್ದು, ಅಲ್ಲಿಗೆ ಯಾವುದೇ ದೊಡ್ಡ ವಾಹನಗಳು ಹೋಗಲಾಗುತ್ತಿಲ್ಲ. ಇಂದು ಪರಿಶೀಲಿಸಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ.

*ವರಲಕ್ಷ್ಮಿ. ಆರೋಗ್ಯಾಧಿಕಾರಿ. ನಗರಸಭೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑