ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ
ಮೋರಿಗೆ ಕಸ ಸುರಿಯಲು ಹೋಗುತ್ತಿರುವ ವ್ಯಕ್ತಿ
ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ನಗರದ ಹೆದ್ದಾರಿಯ ಸಾತನೂರು ವೃತ್ತದ ಬಳಿ ಇರುವ ದೊಡ್ಡ ಮೋರಿಯೊಂದು ಕಟ್ಟಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೇ, ಹೆದ್ದಾರಿಯ ಮೇಲೆ ಮಂಡಿಯುದ್ದ ಗಟಾರದ ನೀರು ಹರಿಯುತ್ತಿದ್ದು, ಅದನ್ನು ಸರಿಪಡಿಸಲೋಸುಗ ಬಸ್ ನಿಲ್ದಾಣದಿಂದ ಸಾತನೂರು ವೃತ್ತದ ವರೆಗೆ ಒಂದು ಬದಿ ರಸ್ತೆಯನ್ನು ಮುಚ್ಚಿ, ಒಂದೇ ಬದಿ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಮಾಡಿ ಮೋರಿ ಸರಿಪಡಿಸುವ ಕಾರ್ಯವನ್ನು ರಾಜ್ಯ ಹೆದ್ದಾರಿ ಯ ಇಂಜಿನಿಯರ್ ಗಳು ಇಂದು ಕೈಗೆತ್ತಿಕೊಂಡರು.
ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಿಂದ ಬರುವ ಎಲ್ಲಾ ರೀತಿಯ ನೀರು ಇದೇ ಮೋರಿಯಲ್ಲಿ ಬರುತ್ತದೆ. ಅಂಬೇಡ್ಕರ್ ಭವನ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ನಡುವೆ ಈ ಕಾಲುವೆ ಇದ್ದು, ರೇಷ್ಮೆ ಗೂಡಿನ ಮಾರುಕಟ್ಟೆಯ ಬಳಿಯೇ ಹರಿದು ಶೆಟ್ಟಿಹಳ್ಳಿ ಕೆರೆ ಸೇರುತ್ತದೆ. ಇವುಗಲಕ ನಡುವೆ ಹೆದ್ದಾರಿ ಇದ್ದು ಹೆದ್ದಾರಿಯ ಮಧ್ಯದಲ್ಲಿ ಮೋರಿ ಕಟ್ಟಿಕೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು.
ಮೋರಿಯಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯವನ್ನು ತೆಗೆಯುತ್ತಿರುವ ಕಾರ್ಮಿಕರು
ಮೋರಿ ಕಟ್ಟಿಕೊಳ್ಳಲು ಕಾರಣವೇನು ಗೊತ್ತೇ ?
ಮದೀನ ಚೌಕದ ಬಳಿ ಪಶು ಮಾಂಸದಂಗಡಿಗಳು ಹೆಚ್ಚಾಗಿ ಇವೆ. ಇವುಗಳ ಜೊತೆಯಲ್ಲಿ ಮೀನಿನ ಅಂಗಡಿಗಳು, ಕೋಳಿ ಮಾಂಸದಂಗಡಿಗಳು ಸಾಕಸ್ಟಿವೆ. ಮದಿನಾ ಚೌಕದ ಬಳಿ ಯೇ ಈ ಎಲ್ಲಾ ಕಸವನ್ನು ಹಾಕಲಾಗುತ್ತದೆ. ಹಲವಾರು ಮಂದಿ ರಸ್ತೆಯ ಬದಿಯಲ್ಲಿ ಹಾಕುವ ಬದಲು, ಮೋರಿಗೆ ತಂದು ಸುರಿಯುತ್ತಾರೆ. ಇದಕ್ಕೆ ಕಲಶವಿಟ್ಟಂತೆ ಅತಿಯಾದ ಪ್ಲಾಸ್ಟಿಕ್ ಚೀಲಗಳು ಮತ್ತು ಕೊಳೆಯದ ತೆಳುವಾದ ಪ್ಲಾಸ್ಟಿಕ್ ಕವರ್ ಗಳು, ಚೀಲಗಳಲ್ಲಿ ಕಟ್ಟಿ ಹಾಕುವ ಮಾಂಸದ ತ್ಯಾಜ್ಯಗಳೆಲ್ಲವೂ ಸೇರಿ ಕೊಂಡು ಮೋರಿ ಕಟ್ಟಿಕೊಳ್ಳಲು ಕಾರಣ ಎಂದು ಹೆದ್ದಾರಿಯ ಇಂಜಿನಿಯರ್ ಗಳು ಹೇಳುತ್ತಾರೆ.
ನಗರಸಭೆಯೇ ಕಾರಣ ?
ನಗರಸಭೆಯ ಮಂದಿ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಮಾಡದಿರುವುದು, ಪ್ಲಾಸ್ಟಿಕ್ ನಿಷೇಧಿಸಿದರಿವುದು, ಮಿಗಿಲಾಗಿ ಕಸ ವಿಂಗಡಿಸಿ, ಅದಕ್ಕೊಂದು ಮುಕ್ತಿ ನೀಡಲು ಸರಿಯಾದ ಕ್ರಮ ಕೈಗೊಳ್ಳದಿರುವುದು ಮೋರಿಗಳು ಕಟ್ಟಲು ಕಾರಣವಾಗಿವೆ. ಎಲ್ಲಾ ಮೋರಿಗಳನ್ನು ಬಾಕ್ಸ್ ಮೋರಿಗಳನ್ನಾಗಿ ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದರೇ ಮೋರಿಗಳು ಕಟ್ಟಿಕೊಳ್ಳುವುದಿಲ್ಲ ಎಂಬುದು ಸಾಮಾನ್ಯ ತಿಳುವಳಿಕೆಯಾದರು ಅಧಿಕಾರಿಗಳಿಗೆ ಇದು ಹೊಳೆಯಲಿಲ್ಲವೋ ! ಅಥವಾ ಜಾಣಗುರುಡೋ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದ್ದು ಅವರೇ ಉತ್ತರಿಸಬೇಕಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು