Tel: 7676775624 | Mail: info@yellowandred.in

Language: EN KAN

    Follow us :


ಖಡಕ್, ಪ್ರಾಮಾಣಿಕ ಎಂದು ಹೆಸರು ಗಳಿಸಿದ ತಹಶಿಲ್ದಾರ್ ಸುದರ್ಶನ್ ಎತ್ತಂಗಡಿ ! ತಡೆಯಾಜ್ಞೆ ಕೋರಿ ಕೋರ್ಟಿಗೆ

Posted date: 28 Jul, 2020

Powered by:     Yellow and Red

ಖಡಕ್, ಪ್ರಾಮಾಣಿಕ ಎಂದು ಹೆಸರು ಗಳಿಸಿದ ತಹಶಿಲ್ದಾರ್ ಸುದರ್ಶನ್ ಎತ್ತಂಗಡಿ ! ತಡೆಯಾಜ್ಞೆ ಕೋರಿ ಕೋರ್ಟಿಗೆ

ಚನ್ನಪಟ್ಟಣ:ಜು/೨೮/೨೦/ಮಂಗಳವಾರ. ತಾಲ್ಲೂಕಿನ ಖಡಕ್ ಅಧಿಕಾರಿ, ಪ್ರಾಮಾಣಿಕ ಅಧಿಕಾರಿ, ಜನಪರ, ರೈತಪರ ಹಾಗೂ ಸರ್ಕಾರಿ ಆಸ್ತಿಯ ಬಗ್ಗೆ ಅತಿಯಾದ ಕಳಕಳಿಯುಳ್ಳ‌ ಅಧಿಕಾರಿ ಎಂದು ವರ್ಷದೊಳಗೆ ತಾಲ್ಲೂಕಿನ ಆಚೆಗೂ ಹೆಸರು ಗಳಿಸಿದ್ದ ಕೆಎಎಸ್ ಅಧಿಕಾರಿ ಬಿ ಕೆ ಸುದರ್ಶನ್ ರವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


ತಾಲ್ಲೂಕಿನ ನೂತನ ತಹಶಿಲ್ದಾರ್ ಆಗಿ ತಾಲ್ಲೂಕಿನವರೇ ಆದ ಗೋವಿಂದಳ್ಳಿ ಗ್ರಾಮದ ನಾಗೇಶ್ ಎಂಬುವವರು ನಿನ್ನೆ ಸಂಜೆಯೇ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಈ ಮೊದಲು ವಿಧಾನಸೌಧ ದಲ್ಲಿ ಕೆಲಸ ನಿರ್ವಹಿಸಿ ನಂತರ ಮಂಡ್ಯ ತಾಲ್ಲೂಕಿನ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದುದಾಗಿ ತಿಳಿದುಬಂದಿದೆ.


ಕಳೆದ ವರ್ಷ ಜುಲೈ 15 ರಂದು ಅಂದಿನ ತಹಶಿಲ್ದಾರ್ ಯೋಗಾನಂದ ರವರು ವರ್ಗಾವಣೆಗೊಂಡ ಜಾಗಕ್ಕೆ ಮೂಡಬಿದಿರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುದರ್ಶನ್ ರವರು ಜುಲೈ 22 ರಂದು ಅಧಿಕಾರ ವಹಿಸಿಕೊಂಡಿದ್ದರು. ಒಂದು ವರ್ಷ ಪೂರೈಸಿದ ಬೆನ್ನಲ್ಲೆ ವರ್ಗಾವಣೆ ಮಾಡಿರುವುದರಿಂದ ಸುದರ್ಶನ್ ರವರು ತಡೆಯಾಜ್ಞೆ ಗೆ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.


ಕಳೆದ ಹದಿನಾರು ವರ್ಷಗಳಿಂದ ಆಗದ ಕೆರೆ, ಕುಂಟೆ, ಕಾಲುವ, ರಸ್ತೆ, ಗೋಮಾಳ ಸೇರಿದಂತೆ ಅನೇಕ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುದರ್ಶನ್ ರವರು ತಾಲ್ಲೂಕಿನ ಜನಸಾಮಾನ್ಯರ ಹೀರೋ ಆಗಿ ಮಿಂಚಿದ್ದರು. ತಹಶಿಲ್ದಾರ್ ಎಂದರೆ ಗ್ರಾಮ ಲೆಕ್ಕಾಧಿಕಾರಿಯಿಂದ ಬಡ್ತಿ ಹೊಂದಿ ತಹಶಿಲ್ದಾರ್ ಆಗಿ ಕೆಲಸ ಮಾಡಲಾಗುವುದಿಲ್ಲ. ಆತ ಕೆಎಎಸ್ ಪರೀಕ್ಷೆ ಬರೆದು ಬಂದವರಾದರೆ ಮಾತ್ರ ಕಾನೂನು ರೀತ್ಯಾ ಕೆಲಸ ಮಾಡಲು ಸಾಧ್ಯ. ಅಂತಹ ಕೆಲಸವನ್ನು ಸುದರ್ಶನ್ ಮಾಡಿದ್ದಾರೆ ಎಂದು ಅನೇಕ ರೈತ ಮುಖಂಡರ ಮತ್ತು ಜನಸಾಮಾನ್ಯರ ತೀರ್ಮಾನವಾಗಿತ್ತು.


ಶೆಟಿಹಳ್ಳಿ ಕೆರೆ ಒತ್ತುವರಿಯಲ್ಲಿ ತಹಶಿಲ್ದಾರ್ ಸುದರ್ಶನ್ ಮತ್ತು ಜೆಡಿಎಸ್ ಪಕ್ಷದ ಮುಖಂಡರೊಬ್ಬರಿಗೆ ನೇರವಾದ ಸವಾಲಾಗಿತ್ತು. ಕ್ಷಣಾರ್ಧದಲ್ಲಿ ತೆರವು ಆಗಬೇಕಾಗಿದ್ದ ಒತ್ತುವರಿಗೆ ತಡೆಯಾಜ್ಞೆ ತಂದು ಆ ಕೆಲಸವನ್ನು ನಿಲ್ಲಿಸಿದ ಅಪಕೀರ್ತಿ ಆ ಮುಖಂಡರಿಗೆ ಸಲ್ಲುತ್ತದೆ. ಆ ಕೆರೆಯ ಒತ್ತುವರಿ ಬಗ್ಗೆ ಅನೇಕ ಕನಸುಗಳನ್ನಿಟ್ಟಿದ್ದ ತಾಲ್ಲೂಕಿನ ಜನತೆ ಅಂದು ಬಹಳ ನಿರಾಶರಾಗಿದ್ದರು. ಆದರೆ ಛಲಬಿಡದ ತಹಶಿಲ್ದಾರ್ ರವರು ಮೇಲ್ಮನವಿ ಸಲ್ಲಿಸಿರುವುದಾಗಿ ಹೇಳಿಕೆ ನೀಡಿದ್ದರು.


ಚನ್ನಪಟ್ಟಣ ತಾಲ್ಲೂಕು ರಾಜಕೀಯದಲ್ಲಿ ಹೇಗೆ ಅಡಜಂಬರವಿದೆಯೋ ಅದೇ ರೀತಿ ಅಧಿಕಾರಿಗಳನ್ನು ಸಹ ಅವರ ಕೈಗೊಂಬೆಯಾಗಿ ಮಾಡಿಕೊಳ್ಳಲು ಯತ್ನಿಸುತ್ತಲೇ ಇರುತ್ತಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಗೆ ನಮ್ಮ ತಾಲ್ಲೂಕಿನಲ್ಲಿ ಜಾಗವಿಲ್ಲಾ ಎಂಬುದು ಮತ್ತೆ ಸಾಬೀತಾಗಿದೆ. ಈ ಮೊದಲು ಕೆಲಸ ನಿರ್ವಹಿಸಿದ ಮತ್ತೋರ್ವ ಕೆಎಎಸ್ ಅಧಿಕಾರಿ ಯೋಗಾನಂದ ರವರು ಸಹ ಹೋಗುವಾಗ ನೀಡಿದ ಹೇಳಿಕೆ ಹೀಗಿತ್ತು. ಸರ್ ನನಗೆ ಕೈಕಾಲು ಅಷ್ಟೇ ಅಲ್ಲಾ ಬಾಯಿಯನ್ನು ಸಹ ಕಟ್ಟಿಹಾಕಿಬಿಟ್ಟರು. ಇಂತಹ ಸಂದರ್ಭದಲ್ಲಿ ಜನತೆಯ ಪರವಾಗಿ ಕೆಲಸ ಮಾಡಲಾಗುವುದಿಲ್ಲ ಎಂದು ಹೇಳಿದ್ದು ಇನ್ನೂ ಹಸಿಯಾಗೇ ಇದೆ.


ಅಧಿಕಾರ ಸ್ವೀಕರಿಸಿರುವ ನೂತನ ತಹಶಿಲ್ದಾರ್ ನಾಗೇಶ್ ರವರು ಮಾತನಾಡಿ ನನಗೆ ಸರ್ಕಾರ ಚನ್ನಪಟ್ಟಣದಲ್ಲಿ ಕಾರ್ಯನಿರ್ವಹಿಸಿ ಎಂದು ಆದೇಶ ಮಾಡಿದೆ. ಹಾಗಾಗಿ ಇಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಈಗಾಗಲೇ ಕೋವಿಡ್ ಗೆ ಸಂಬಂಧಿಸಿದ ಹಾಗೆ ಇಂದು ಕೆಲಸ ನಿರ್ವಹಿಸಿದ್ದೇನೆ ಎಂದು ತಿಳಿಸಿದರು. ನವೀನ ತಹಶಿಲ್ದಾರ್ ನಾಗೇಶ್ ರವರೇ ಮುಂದುವರೆಯುತ್ತಾರಾ ಅಥವಾ ತಡೆಯಾಜ್ಞೆ ತಂದು ಸುದರ್ಶನ್ ರವರೇ  ಮುಂದುವರೆಯುತ್ತಾರಾ ಎಂದು ತಾಲ್ಲೂಕಿನ ಜನತೆ ಎದುರು ನೋಡುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑