ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು
ಚನ್ನಪಟ್ಟಣ:ಜು/30/20/ಗುರುವಾರ. ನಾಳೆ (ಜುಲೈ:30 ರ ಶುಕ್ರವಾರ) ವರಮಹಾಲಕ್ಷ್ಮಿ ದೇವಿಯ ಹಬ್ಬ. ಹಿಂದೂ ಭಕ್ತಾದಿಗಳು ಇರುವೆಲ್ಲೆಡೆಯೂ ಸಡಗರ, ಸಂಭ್ರಮ ಹಾಗೂ ಅವರವರ ಅಂತಸ್ತಿಗೆ ತಕ್ಕಂತೆ ದೇವಿಗೆ ಅಲಂಕರಿಸಿ, ನಗದು, ಒಡವೆ, ವಸ್ತ್ರಾಧಿಗಳನ್ನು ಇಟ್ಟು ಪೂಜಿಸುವ ಸಂಪ್ರದಾಯ ನಡೆದುಬಂದಿದೆಯಾದರೂ ಆಡಂಬರದ ಪೂಜೆ ಎನ್ನುವುದು ಮಾತ್ರ ಒಂದರೆದಶಕದಿಂದೀಚೆಗೆ ಎಲ್ಲೆಡೆ ವ್ಯಾಪಿಸಿದೆ. ಹಬ್ಬದ ಪ್ರಯುಕ್ತ ಗ್ರಾಹಕರು ಖರೀದಿಗೆ ಇಂದೇ ಮುಗಿಬಿದ್ದಿದ್ದಾರೆ.
*ಪೇಟೆ ತುಂಬೆಲ್ಲಾ ಹೂವುಹಣ್ಣುಹಂಪಲು*
ನಗರದ ಅಂಚೆಕಛೇರಿ ರಸ್ತೆ, ಮಹಾತ್ಮಗಾಂಧಿ ರಸ್ತೆ, ಜಯಚಾಮರಾಜೇಂದ್ರ ರಸ್ತೆ, ರೈಲ್ವೇ ನಿಲ್ದಾಣ ರಸ್ತೆ, ಬೆಂಗಳೂರು ಮೈಸೂರು ಹೆದ್ದಾರಿ ಬದಿ ಹಾಗೂ ಡಿ ಟಿ ರಾಮು ವೃತ್ತ ಸೇರಿದಂತೆ ನಗರದೆಲ್ಲೆಡೆಯೂ ತರಹೇವಾರಿ ಹೂ ಗುಚ್ಛಗಳು, ಬಹುತೇಕ ಎಲ್ಲಾ ರೀತಿಯ ಅಲಂಕಾರಿಕ ಹೂವು, ಬಾಳೆ ಕಂದುಗಳು, ಬಳೆಯ ಅಂಗಡಿಗಳು ಮತ್ತು ಹಣ್ಣುಗಳ ಜೊತೆಗೆ ಪ್ಲಾಸ್ಟಿಕ್ ನಿಂದ ಮಾಡಿದ ಹೂವು ಹಣ್ಣುಗಳು ಮಾರುಕಟ್ಟೆಗೆ ಬಂದಿವೆ.
*ಗಿರವಿ, ಸೀರೆ, ಪೂಜಾ ಅಂಗಡಿಗಳ ಬಳಿ ಗ್ರಾಹಕರು*
ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಕೆಲವರು, ಅಕ್ಕಪಕ್ಕದ ಮನೆಯವರ ಪೂಜೆಯನ್ನು ನೋಡಿ, ದೇವಿಯ ವಿಗ್ರಹವನ್ನು ವಿಜೃಂಭಣೆಯಿಂದ ಪೂಜಿಸುವ ಮೂಲಕ ಆಚರಿಸುತ್ತಿದ್ದಾರೆ ! ನಾವು ಅವರಿಗಿಂತ ಹೆಚ್ಚಿನ ರೀತಿಯಲ್ಲಿ ಪೂಜಿಸಬೇಕೆಂದು ಪೂಜಿಸುವ ಹೊಟ್ಟಕಿಚ್ಚಿನ ಪೂಜೆಗಳೇ ಹೆಚ್ಚಾಗಿವೆ ಎಂದರೆ ತಪ್ಪಾಗಲರಾದು. ಆದ್ದರಿಂದ ಗಿರವಿ ಇಟ್ಟಿರುವ ಒಡವೆಗಳನ್ನು ಬಿಡಿಸಲು ಗಿರವಿ ಅಂಗಡಿಗಳ ಮುಂದೆ, ದೇವಿಗೆ ಉಡಿಸಲು ವಸ್ತ್ರ ಖರೀದಿ, ಅಲಂಕರಿಸಲು ಪೂಜಾ ಸಾಮಾಗ್ರಿಗಳ ಅಂಗಡಿಗಳ ಮುಂದೆ ಭಕ್ತ ಜನರು ಮುಗಿಬಿದ್ದಿದ್ದರು.
*ಭಕ್ತಿಯೇ ಎಲ್ಲಾ, ಕೊರೊನಾ ಭಯವೇ ಇಲ್ಲ*
ಪೂಜಾ ಸಾಮಗ್ರಿಗಳನ್ನು ಕೊಳ್ಳುವ ಜನರಲ್ಲೇನಕರಿಗೆ, ಕಡ್ಡಾಯ ಮಾಸ್ಕ್ ಧರಿಸಬೇಕೆನ್ನುವುದಾಗಲಿ, ಜನರಿಂದ ಜನಕ್ಕೆ ಅಂತರ ಕಾಯ್ದುಕೊಳ್ಳಬೇಕೆಂಬುವ ಮನಸ್ಥಿತಿಯಾಗಲಿ ಇಲ್ಲದಿರುವುದು, ಕೊರೊನಾ ಸೋಂಕಿನ ಬಗ್ಗೆ ನಮಗೆ ಭಯವಿಲ್ಲಾ ಎಂಬುದನ್ನು ಸಾರುವಂತಿತ್ತು. ಪೋಲೀಸರು ಮತ್ತು ಕೋವಿಡ್ ಗೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳುವಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ್ವಿಶತಕ ಮುಟ್ಟುತ್ತಿರುವ ಸೋಂಕಿತರು ಸಹಸ್ರ ಗಡಿ ದಾಟುವ ಸಮಯ ದೂರವಿಲ್ಲ.
*ಪತ್ರಿಕೆಯ ಕಳಕಳಿ*
ನಿಮ್ಮ ಭಕ್ತಿ, ನಿಮ್ಮ ಹಣ, ಭಕ್ತಿಯಿಂದ ಪೂಜಿಸಿ, ಕೊರೊನಾ ದಿಂದ ಜನರಷ್ಟೇ ಅಲ್ಲಾ, ದೇಶದ ಆರ್ಥಿಕತೆಯೇ ಬುಡಮೇಲಾಗುವ ಸ್ಥಿತಿ ಎದುರಾಗಿದೆ. ಅಂತಹದರಲ್ಲಿ, ಆಡಂಬರದ ಪೂಜೆ ಬೇಡ, ಬಾಗಿನ, ಕುಂಕುಮ ಎಂದು ಆಹ್ವಾನಿಸುವುದು ಬೇಡ, ನೀವು ಹೋಗದಿರುವುದು ಸಹ ಅಷ್ಟೇ ಕ್ಷೇಮ. *(ಹೆಚ್ಚು ಹಣ, ಒಡವೆ ಇಟ್ಟು ಪ್ರದರ್ಶಿಸಿದರೆ ನಾಳೆ ನೀವು ಕಂಬಿಯ ಹಿಂದೆ, ಪ್ರದರ್ಶನಕ್ಕಿಟ್ಟಿದ್ದು ಸರ್ಕಾರದ ಬೊಕ್ಕಸಕ್ಕೆ ಹೋದರು ಆಶ್ಚರ್ಯ ಪಡಬೇಕಾಗಿಲ್ಲ.)* ನಿಮ್ಮ ನಿಮ್ಮ ಮನೆಯಲ್ಲಿ ಆಡಂಬರವಿಲ್ಲದೆ ಭಕ್ತಿಯಿಂದ ಪೂಜಿಸಿ, ಶ್ರೀಮಂತರಾಗಲು ದುಡಿಮೆಯನ್ನು ಮಾಡಿ. ಕೊರೊನಾ ಓಡಿಸಲು ಪಣತೊಡಿ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು