Tel: 7676775624 | Mail: info@yellowandred.in

Language: EN KAN

    Follow us :


ನಗರದ ಕಸದಲ್ಲಿ ನಾಯಿಗಳ ಅಲೆದಾಟ, ಕೋವಿಡ್ ನೆಪದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ. ಪ್ರಾಣಹಾನಿ, ಅನಾರೋಗ್ಯ ಕಟ್ಟಿಟ್ಟಬುತ್ತಿ

Posted date: 19 Aug, 2020

Powered by:     Yellow and Red

ನಗರದ ಕಸದಲ್ಲಿ ನಾಯಿಗಳ ಅಲೆದಾಟ, ಕೋವಿಡ್ ನೆಪದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ. ಪ್ರಾಣಹಾನಿ, ಅನಾರೋಗ್ಯ ಕಟ್ಟಿಟ್ಟಬುತ್ತಿ

ಚನ್ನಪಟ್ಟಣ:ಆ/19/20/ಬುಧವಾರ. ನಗರದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಕಸ ಹಾಕುವುದಕ್ಕೆ ನಿಗದಿತ ಜಾಗವೇ ಇಲ್ಲ. ಅಲ್ಲೊಂದು ಇಲ್ಲೊಂದು ಜಾಗ ಇದ್ದರೂ ಸಹ ನಗರಸಭೆಯ ಕಾರ್ಮಿಕರು ಕಸ ಎತ್ತುವ ಮೊದಲೇ ಅರ್ಧ ರಸ್ತೆಗೆ ಬಂದಿರುತ್ತದೆ. ಎಂದಿಗಿಂತಲೂ ಹೆಚ್ಚಾಗಿರುವ ನಾಯಿಗಳ ಹಿಂಡು ಕಸದ ರಾಶಿಯಲ್ಲಿ ಆಹಾರವನ್ನು ಅರಸುತ್ತಾ ಕಚ್ಚಾಡುತ್ತಿವೆ. ಈಗಾಗಲೇ ಹಲವಾರು ಕಡೆ ನಾಯಿಗಳಿಂದ ಕಚ್ಚಿಸಿಕೊಂಡವರು ಕೆಲವರಾದರೆ, ಬೈಕ್ ಗೆ ಅಡ್ಡ ಬಂದು ಕೈಕಾಲು ಮುರಿದುಕೊಂಡ ಸವಾರರೇ ಹೆಚ್ಚಿದ್ದಾರೆ. ಅಂತೂ ಕಸದ ಗಬ್ಬು ವಾಸನೆಯಿಂದ ಅನಾರೋಗ್ಯ ಪೀಡಿತರಾಗುವವರೆಗೂ, ನಾಯಿಗಳಿಂದ ಪ್ರಾಣ ಕಳೆದುಕೊಳ್ಳುವವರೆಗೂ ನಗರಸಭೆಯ ಅಧಿಕಾರಿಗಳು‌ ಕಾರ್ಯೋನ್ಮುಖರಾಗುವುದಿಲ್ಲ ಎಂಬ ಶಪಥ ಮಾಡಿರಬಹುದೆನೋ‌ ಎಂಬ ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದೆ.


ನಿಗದಿತ ಜಾಗವೂ ಇಲ್ಲ. ಡಬ್ಬವೂ ಇಲ್ಲ.

ನಗರಸಭೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕಸ ವಿಂಗಡಣೆ, ಅವುಗಳಿಗೊಂದು ಡಬ್ಬ, ಮನೆಮನೆ ತ್ಯಾಜ್ಯ ಶೇಖರಣೆ, ಬೀದಿ ಬದಿಯಲ್ಲೊಂದು ದೊಡ್ಡ ಡಬ್ಬ ಹೀಗೆ ಎಲ್ಲವೂ ಇದ್ದು ಕಸ ಮಾತ್ರ ನಗರದ ಬಹುತೇಕ ಎಲ್ಲಾ ರಸ್ತೆಯ ಬದಿಗಳಲ್ಲೇ ಎರಚಾಡುತ್ತಿದೆ. ನಗರದ ಯಾವ ಬೀದಿಯಲ್ಲೂ ಸಹ ಪಾದಚಾರಿಗಳು ಮೂಗು ಮುಚ್ಚದೆ ನಡೆದುಕೊಂಡು ಹೋಗುವ ಸಾಹಸ ಮಾಡಲಾಗುತ್ತಿಲ್ಲ. ಪ್ರತಿ ಕಸದ ರಾಶಿಯಲ್ಲೂ ಸಹ ನಾಯಿಗಳ ಹಿಂಡು ಗಿಜಗುಡುತ್ತಿವೆ.


ಮಾಂಸದ ತ್ಯಾಜ್ಯವೇ ಹೆಚ್ಚು

ನಗರದ ಬಹುತೇಕ ರಸ್ತೆಗಳ ಬದಿಯಲ್ಲಿ ಬಿದ್ದಿರುವ ಕಸ ಹಾಗೂ ನಗರದೊಳಗಿನ ಶೆಟ್ಟಿಹಳ್ಳಿ ಕೆರೆ, ನಗರದ ಹೊರ ವಲಯದ ಕೆರೆಗಳು ಹಾಗೂ ಹೆದ್ದಾರಿಯ ಬದಿಯಲ್ಲಿ ಬಿದ್ದಿರುವ ಎಲ್ಲಾ ಕಸದ ರಾಶಿಗಳಲ್ಲೂ ಮಾಂಸದ ತ್ಯಾಜ್ಯವೇ ಹೆಚ್ಚಿದೆ. ಇದುವರೆಗೂ ಮಾಂಸದ ಅಂಗಡಿಗಳಿಗೆ ಒಂದು ನಿಯಮವನ್ನು ರೂಪಿಸಲು ನಗರಸಭೆಗೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿಯೇ ಸರಿ. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬಿಸಾಡುವ ಈ ಮಾಂಸದ ತ್ಯಾಜ್ಯವನ್ನು ತಿನ್ನಲು ನಾಯಿಗಳು ಕಚ್ಚಾಡಿ ರಸ್ತೆಗೆ ಬರುತ್ತವೆ. ಇದರಿಂದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡರೆ, ದೊಡ್ಡ ವಾಹನಗಳಿಗೆ ಸಿಲುಕುವ ನಾಯಿಗಳ ಪ್ರಾಣ ಹರಣವಾಗುತ್ತಿವೆ. ಮಳೆಗಾಲವಾದ್ದರಿಂದ ಹಳಸಿದ ಮಾಂಸದ ತ್ಯಾಜ್ಯ ಮತ್ತು ಸತ್ತ ನಾಯಿಗಳ ದುರ್ವಾಸನೆ ಎರಡೂ ಸಹ ಮಾನವ ಮತ್ತು ಸೂಕ್ಷ್ಮ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ.


ಹೇಳಿಕೆಗಳಿಗಷ್ಟೇ ಸೀಮಿತವಾಗುತ್ತಿರುವ ಅಧಿಕಾರಿಗಳು

ಯಾವುದೇ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಅದಕ್ಕೆ ಒಂದು ಹೇಳಿಕೆ, ಸಬೂಬು ಅಥವಾ ಸಿಬ್ಬಂದಿಗಳ ಕೊರತೆ ಹೇಳಿ ತಪ್ಪಿಸಿಕೊಳ್ಳುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಆ ಸಮಸ್ಯೆಯ ಬಗ್ಗೆ ಒಂದು ನಿರ್ಧಿಷ್ಟ ಕ್ರಮ ಕೈಗೊಂಡು ಅದಕ್ಕೊಂದು ಇತಿಶ್ರೀ‌ ಹಾಡುವ ಕೆಲಸವನ್ನು ಯಾವ ಅಧಿಕಾರಿಗಳು ಮಾಡದಿರುವುದು ಸಾರ್ವಜನಿಕರ ದುರದೃಷ್ಟಕರ ಎನ್ನಬಹುದು. ಒಂದು ಸಮಸ್ಯೆಗೆ ಒಂದು ಹೇಳಿಕೆ ಮುಂದೆ ನೋಡೋಣಾ ಎಂಬ ಅಧಿಕಾರಿ ವರ್ಗ ಇರುವವರೆಗೂ ಹಾಗೂ ಸಾರ್ವಜನಿಕರಿಗೆ ಅರಿವು ಬರುವವರೆಗೂ ಈ ಸಂಕಷ್ಟಗಳು ಕಟ್ಟಿಟ್ಟ ಬುತ್ತಿಯಾಗಿಯೇ ಉಳಿಯುವದರಲ್ಲಿ ಸಂದೇಹವೇ ಇಲ್ಲ.


ಜನ ಬದಲಾಗದೆ, ಅಧಿಕಾರಿಗಳಿಂದ ಬದಲಾಗುವುದು ಕಷ್ಟ ಕಮೀಷನರ್

ನಾವು ಮನೆಮನೆಗೆ ಕಸ ವಿಂಗಡಿಸಿ ಕೊಡಲು ಡಬ್ಬಗಳನ್ನು ನೀಡಿದ್ದೇವೆ. ಮನೆಗೆ ತೆರಳಿ ‌ಕಸ ಸಂಗ್ರಹಿಸಲು ಹೋದಾಗ ಕಸ ಕೊಡುವವರು ಕಡಿಮೆ. ಮಧ್ಯಾಹ್ನದ ನಂತರ ಕಸ ತಂದು ರಸ್ತೆ ಬದಿಗೆ ಸುರಿಯುತ್ತಾರೆ. ನಾಯಿಗಳನ್ನು ಹಿಡಿದು ಹೊರಗೆ ಬಿಡಲು ಅಥವಾ ಪ್ರಾಣ ತೆಗೆಯಲು ಪ್ರಾಣಿ ದಯಾಸಂಘ ದವರು ಒಪ್ಪಿಗೆ ನೀಡುತ್ತಿಲ್ಲ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಒಂದೇ ದಾರಿ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು. ಅಧಿಕಾರಿಗಳು, ಕಾರ್ಮಿಕರ ಜೊತೆಗೆ ಸಾರ್ವಜನಿಕರು ಸಹಕರಿಸಬೇಕು. ನಮ್ಮ ನಗರ, ನಮ್ಮ ಸೌಂದರ್ಯ ಎನ್ನುವ ಪರಿಕಲ್ಪನೆ ಅವರಿಗೆ ಬರದ ಹೊರತು ಅಧಿಕಾರಿಗಳು ಮತ್ತು ಕಾರ್ಮಿಕರಿಂದಲೇ ಎಲ್ಲವೂ ಸಾಧ್ಯವಾಗದು ಎಂಬುದನ್ನು ಮನಗಾಣಬೇಕು ಎಂದು ತಮ್ಮ ಅಸಹಾಯಕತೆ ಯನ್ನು ತೋಡಿಕೊಂಡರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑