ನಗರದ ಕಸವೆಲ್ಲಾ ಖಾಲಿ ನಿವೇಶನಗಳಲ್ಲಿ, ನಿವೇಶನಗಳ ಮಾಲೀಕರ ಮೇಲೆ ಕ್ರಮಕೈಗೊಂಡರೆ ಪರಿಹಾರ ಸಾಧ್ಯ
ಚನ್ನಪಟ್ಟಣ:ಆ/20/20/ಗುರುವಾರ. ನಗರವೆಲ್ಲವೂ ಕಸದ ರಾಶಿಯಿಂದ ತುಂಬಿಹೋಗುತ್ತಿದ್ದು, ಗೊಂಬೆ (ಬೊಂಬೆ) ನಗರಿ ಎಂಬ ಹಿರಿಮೆಗೆ ಪಾತ್ರವಾಗಿದ್ದ ಚನ್ನಪಟ್ಟಣ ನಗರ ಗಬ್ಬು ನಗರವಾಗಿ, ಅನಾರೋಗ್ಯ ಪೀಡಿತರ ನಗರವಾಗಿ, ರೂಪುಗೊಳ್ಳುತ್ತಿರುವುದು ಚನ್ನಪಟ್ಟಣಕ್ಕೆ ಇದ್ದ ಹಿರಿಮೆಯ ಎಲ್ಲಾ ರೆಕ್ಕೆಗಳನ್ನು ಕತ್ತರಿಸಿ ಹಾಕಿದಂತಾಗಿದೆ. ಕಸದ ರಾಶಿ ಹೀಗೆ ಮುಂದುವರೆದರೆ, ಈ ಅಪಾತ್ರಕ್ಕೆ ಗುರಿಯಾದ ನಗರಗಳಲ್ಲಿ ರಾಜ್ಯದ ಮೊದಲ ನಗರಿಯಾಗುವ ಎಲ್ಲಾ ಗುಣಾವಗುಣಗಳು ಕಂಡುಬರುತ್ತಿವೆ.
*ಖಾಲಿ ನಿವೇಶನಗಳ ಮಾಲೀಕರಿಗೆ ನೋಟೀಸ್ ನೀಡಿ*
ನಗರದ ಎಲ್ಲಾ ಕಡೆಯೂ ಖಾಸಗಿ ಯವರ ಖಾಲಿ ನಿವೇಶನಗಳಿದ್ದು, ಬಹುತೇಕ ಮನೆಯ ಮಹಾನ್ ನಾಗರೀಕರೂ ಆ ಖಾಲಿ ನಿವೇಶನದಲ್ಲಿಯೇ ಕಸ ತಂದು ಸುರಿದು ಹೋಗುತ್ತಿರುವುದು ಸತ್ಯ ಸಂಗತಿ. ಆ ಮಾಲೀಕರು ಎಲ್ಲೋ ಇದ್ದು, ಕಾಂಪೌಂಡ್ ಹಾಕಿಸದೆ, ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿರುವುದರಿಂದ ಕಸ ಎಸೆದು ಹೋಗುವ ಅನಾಗರಿಕರಿಗೆ ಅನುಕೂಲವಾಗಿದೆ. ಇಂತಹ ನಿವೇಶನಗಳ ಮಾಲೀಕರನ್ನು ಹುಡುಕಿ ನೋಟೀಸ್ ಜಾರಿ ಮಾಡಿದರೆ ಮಾಲೀಕರ ಜೊತೆಗೆ ಕಸ ಸುರಿಯುವವರು ಸಹ ಎಚ್ಚರಗೊಳ್ಳುತ್ತಾರೆ.
*ಸರ್ಕಾರಿ ನಿವೇಶನಗಳಿಗೂ ನೋಟೀಸ್ ನೀಡಿ*
ಖಾಸಗಿ ನಿವೇಶನಗಳ ಜೊತೆಗೆ ಸರ್ಕಾರ ಒಡೆತನದ ಖಾಲಿ ನಿವೇಶನಗಳನ್ನು ಗುರುತು ಪತ್ತೆ ಮಾಡಿ ಆಯಾಯ ಇಲಾಖೆಯ ಮುಖ್ಯಸ್ಥರಿಗೂ ನೋಟೀಸ್ ಜಾರಿ ಮಾಡಬೇಕಾಗಿದೆ. ಯಾವ ಇಲಾಖೆಗೆ ಅದು ಖಾತೆಯಾಗಿದೆಯೋ ಆ ಇಲಾಖೆಯ ಮುಖ್ಯ ಅಧಿಕಾರಿಯೇ ಆ ನಿವೇಶನದ ಜವಾಬ್ದಾರಿ ಹೊತ್ತು ಅದನ್ನು ಆ ಇಲಾಖೆಯ ವತಿಯಿಂದಲೇ ಸ್ವಚ್ಛಗೊಳಿಸುವ ಜವಾಬ್ದಾರಿ ಹೊರಿಸುವ ಕೆಲಸವನ್ನು ನಗರಸಭೆಯ ಅಧಿಕಾರಿಗಳು ಮಾಡಿದರೆ ಮನೆ, ಅಂಗಡಿಗಳು ಮತ್ತು ಮಾಂಸದ ತ್ಯಾಜ್ಯವೂ ಸಹ ನಗರಸಭೆಯ ಆಟೋಗಳಿಗೆ ತಲುಪುವ ಮಾರ್ಗ ಸುಲಭವಾಗುತ್ತದೆ.
*ರಾಜಕಾರಣಿಗಳಿಗೆ ಕಣ್ಣು, ಕಿವಿ ಮೂಗು ಇಲ್ಲವೇ ?*
ಸದ್ಯ ನಗರಸಭೆಯಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಇಲ್ಲದಿರುವುದನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಕಣ್ಣು, ಕಿವಿ, ಮೂಗು ಇಲ್ಲವೆ ? ನಗರಸಭೆಯ ಮಾಜಿ ಜನ ಪ್ರತಿನಿಧಿಗಳು ಅಧಿಕಾರ ಇದ್ದರೆ ಮಾತ್ರ ಕೆಲಸ ಮಾಡಬೇಕೆ ? ಅಥವಾ ಎಲ್ಲಾ ಅಂಗಗಳು ಇದ್ದೂ ಆ ಅಂಗಗಳು ಕೆಲಸ ನಿರ್ವಹಿಸುತ್ತಿಲ್ಲವೇ ? ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಶಾಸಕ, ಮೇಲ್ಮನೆ ಸದಸ್ಯ, ಆಡಳಿತದಾಧಿಕಾರಿಗಳು ಎಲ್ಲವೂ ಇದ್ದು ನಗರ ಗಬ್ಬು ನಾರುತ್ತಿರುವುದು ಮಾತ್ರ ಬೊಂಬೆ ನಗರಿಗರ ದುರ್ದೈವ.
*ಕಸ ಸುರಿಯಲು ಜಾಗವೇ ಇಲ್ಲ. ಪೌರಾಯುಕ್ತ*
ನಗರದಲ್ಲಿ ಕಸವು ದಿನೆದಿನೇ ಹೆಚ್ಚಾಗುತ್ತಲೇ ಇದೆ. ಇದನ್ನು ಶಾಶ್ವತವಾಗಿ ಒಂದೆಡೆ ಸುರಿಯಲಾಗಲಿ, ವಿಂಗಡಿಸಲಾಗಲಿ ಸೂಕ್ತ ಸ್ಥಳ ಇಲ್ಲ. ಕಣ್ವ ಬಳಿಯ ಜಾಗ ಇನ್ನೂ ಹಸ್ತಾಂತರವಾಗಿಲ್ಲ. ಎಲೆಕೇರಿ ಬಳಿಯ ಜಾಗದಲ್ಲಿ ಎಲ್ಲವೂ ಸಾಧ್ಯವಿಲ್ಲ. ಅಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರು ಸಹ ಕಸ ವಿಂಗಡಣೆ ಮಾಡಿ ಕೊಡುವುದಿಲ್ಲ ಮತ್ತು ಅವರ ಮನೆ ಮುಂದೆ ಆಟೋ ಬಂದಾಗ ಕಸ ಕೊಡದೆ ಬೀದಿ ಬದಿಯಲ್ಲೇ ಸುರಿಯುತ್ತಾರೆ. ಈ ಎಲ್ಲಾ ಅಂಶಗಳನ್ನು ಸಂಬಂಧಿಸಿದ ಹಿರಿಯ ಮತ್ತು ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಯುಕ್ತ ಶಿವನಂಕಾರಿಗೌಡ ಪತ್ರಿಕೆಗೆ ಮಾಹಿತಿ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು