Tel: 7676775624 | Mail: info@yellowandred.in

Language: EN KAN

    Follow us :


ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

Posted date: 21 Aug, 2020

Powered by:     Yellow and Red

ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

ಚನ್ನಪಟ್ಟಣ:ಆ/21/20/ಶುಕ್ರವಾರ. ಅದ್ದೂರಿ ಆಚರಣೆಗೆ ಹೆಸರಾದ ಹಬ್ಬ ಗೌರಿ ಗಣೇಶನ ಹಬ್ಬ. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೇರಿಸುವ ಸಲುವಾಗಿ  ಬಾಲಗಂಗಾಧರ ತಿಲಕರು ಹುಟ್ಟು ಹಾಕಿದ ಗೌರಿಗಣೇಶ ಹಬ್ಬವೂ ವರ್ಷ ವರ್ಷವೂ ಭಕ್ತಿಯ ಜೊತೆಗೆ ಆಡಂಬರವಾಗಿ, ಅದ್ದೂರಿಯಾಗಿ ಆಚರಣೆಯಾಗುತ್ತಾ ಬಂದಿದೆ. ಆದರೆ ಕೊರೊನಾ ಹಬ್ಬಿರುವುದರಿಂದ ಹಬ್ಬ ವು ಕಳೆ ಕಳೆದುಕೊಂಡಿದ್ದು ಭಕ್ತಾಧಿಗಳು,  ವ್ಯಾಪಾರಿಗಳು ನಿರಾಸೆಗೊಂಡಿದ್ದಾರೆ.


ಇಂದು ದೇಶದಾದ್ಯಂತ ಗೌರಿ ಗಣೇಶ ಹಬ್ಬ ಆಚರಣೆಯಾಗುತ್ತಿದೆ. ಇಂದು ಗೌರಿ ಹಾಗೂ ಗಣೇಶ ಇಬ್ಬರೂ ಕೈಲಾಸದಿಂದ ಭೂಮಿಗೆ ಬರುತ್ತಾರೆ, ಇಲ್ಲಿನ ಭಕ್ತರಿಂದ ಪೂಜೆಗೆ ಒಳಗಾಗಿ ನಾಳೆ ಹಿಂದಿರುಗುತ್ತಾರೆ ಎಂಬ ನಂಬಿಕೆ ಇದೆ.

ಗೌರಿ ಹಾಗೂ ಗಣೇಶನ ಹಬ್ಬ ಆಚರಣೆಗೆ ಈ ಸಾರಿ ಕೋವಿಡ್-೧೯ ಒಂದು ರೀತಿಯಲ್ಲಿ ಕಂಟಕವಾಗಿದೆ. ಅನೇಕ ಕಂಟಕ ನಿವಾರಕ ವಿಘ್ನೇಶ್ವರ ಎಂದು ಹೇಳುವ ಸಂದರ್ಭಲ್ಲಿ ಅವನ ಹಬ್ಬಕ್ಕೆ ಒಂದು ರೀತಿಯಲ್ಲಿ ಕಂಟಕ ಬಂದಿದೆ.


ರಾಷ್ಟ್ರ ಹಾಗು ರಾಜ್ಯದ ಆಡಳಿತ ಅವನು ಮುಕ್ತವಾಗಿ ಬಂದು ನಿರ್ಗಮಿಸುವುದಕ್ಕೆ ಕಟ್ಟುಪಾಡು ಹಾಕಿ ಕೂರಿಸಿದೆ. ವಿಘ್ನೇಶ್ವರನನ್ನು ಕೂರಿಸಿದರೆ ಮನೆಯಲ್ಲಿಯೇ ಕೂರಿಸಿ, ಮನೆಯಲ್ಲಿಯೇ ವಿಸರ್ಜಿಸಬೇಕು.

ಹೊರಗೆ ಗಣೇಶನನ್ನು ಕೂರಿಸಿದರೆ, ೪ ಅಡಿ  ಎತ್ತರದ ಗಣೇಶನನ್ನೇ ಕೂರಿಸಬೇಕು, ವಿಸರ್ಜನೆಯ ಹೊಣೆಯೂ ಸಹ ಕೂರಿಸಿದವರದೇ ಆಗಿದೆ. ಮಾಸ್ಕ್ ಕಟ್ಟಿಕೊಂಡು ಭಕ್ತರು ಗಣೇಶನನ್ನು ದರ್ಶಿಸಬೇಕು, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ. ಸ್ಯಾನಿಟೈಸರ್ ಹಾಕಿಕೊಂಡ ಕೈಯಿಂದ ಪ್ರಸಾದ ಸೇವಿಸುವುದು, ತೀರ್ಥ ಸೇವಿಸುವುದು ಹೇಗೆ ಈ ರೀತಿಯ ಗೊಂದಲಗಳು.


ತರಕಾರಿ ಹಾಗೂ ಹಣ್ಣಿನ ಬೆಲೆ ಸ್ವಲ್ಪ ನಿಯಂತ್ರಣದಲ್ಲಿದೆ. ಆದರೆ ಹೂವಿನ ಬೆಲೆಯಂತೂ ಕೆ.ಜಿಗೆ ೩೫೦ ರಿಂದ ೬೦೦ ರೂ ವರೆಗೂ ಮಾರಾಟ ವಾಗುತ್ತಿದೆ.

ಇನ್ನು ದವಸ ದಾನ್ಯಗಳ ಬೆಲೆಯು ಮೊದಲಿನಿಂದಲೂ ಏರಿಕೆಯ ದರಲ್ಲಿಯೇ ಇರುವುದು ಗುಟ್ಟಿನ ವಿಷಯ ಏನೂ ಅಲ್ಲ. ಕೋವಿಡ್-೧೯ ರ ಭಯವಿದ್ದರೂ ಸಹ ಹಲವರು ಮಾಸ್ಕ್ ಹಾಕಿ ಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ಕೊರೊನಾ ಹೆಗಲು ಏರಿ, ಸರಿ ಸುಮಾರು ೫ ತಿಂಗಳು ಆಗುತ್ತಿವೆ. ಆದರೂ ಸಹ ಅದರ ಪ್ರವರ ನಿಂತಿಲ್ಲ. ಜನರು ಅದನ್ನು ಹೊಂದಿಕೊಂಡು ಹೋಗುವ ದಾರಿಯಲ್ಲಿ ಇರುವುದು ಕಂಡು ಬರುತ್ತಿದೆ.


ಹಬ್ಬದ ಭರಾಟೆಯಂತೂ ಯಥಾಸ್ಥಿತಿಯಲ್ಲಿ ನಡೆದುಕೊಂಡು ಹೋಗುತ್ತಿದೆ.

ನಮ್ಮ ಜನ ಯಾವುದಕ್ಕೆ ಕೊರತೆ ಉಂಟು ಮಾಡಿದರೂ ಸಹ ಹಬ್ಬ ಹರಿದಿನಗಳಿಗೆ ಹೇಗೋ ಹಣ ಒದಗಿಸಿಕೊಂಡು ಅವುಗಳನ್ನು ದಿವಿನಾಗಿಯೇ ಮಾಡುತ್ತಾರೆ. ಇದು ಅವರ ಭಾಗಕ್ಕೆ ಹೊಣೆಯಾಗಿ ಪರಿಣಮಿಸಿ ಈ ರೀತಿಯ ಅನುಕರಣೆ ನಡೆಯುತ್ತಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑