ಅನೈತಿಕ ತಾಣವಾದ ತರಕಾರಿ ಮಾರುಕಟ್ಟೆ. ಆದಾಯವೂ ಇಲ್ಲ, ಸ್ವಚ್ಚತೆಯೂ ಇಲ್ಲ
ಚನ್ನಪಟ್ಟಣ:ಆ/26/20/ಬುಧವಾರ. ನಗರಸಭೆಯ ಆಡಳಿತ ಕಛೇರಿಯ ಕೂಗಳತೆಯಲ್ಲಿ, ರೈಲ್ವೇ ನಿಲ್ದಾಣ ಮತ್ತು ಜೆ ಸಿ ರಸ್ತೆಯ ನಡುವೆ ಇರುವ ಕರಬಲ ಮೈದಾನದಲ್ಲಿ ಎರಡು ಬಾರಿ ನಿರ್ಮಿಸಿರುವ 150 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿದ್ದು ಬಹುತೇಕ ಮಳಿಗೆಗಳು ಖಾಲಿ ಇವೆ. ಬೆರಳೆಣಿಕೆಯಷ್ಟು ಮಳಿಗೆಗಳಲ್ಲಿ ಮಾತ್ರ ತರಕಾರಿ ವ್ಯಾಪಾರ ನಡೆಯುತ್ತಿದ್ದು ಅವುಗಳ ಬಾಡಿಗೆಯೂ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
*ನೋಡಲಾರದ ಅನೈತಿಕ ಜಾಗದ ಅಂಗಡಿಗಳು* ಖಾಲಿ ಇರುವ ಕೆಲ ಅಂಗಡಿಗಳ ಬಾಗಿಲು ಮುರಿದಿದ್ದು, ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಾಗಿ ಸ್ಥಳೀಯರೇ ದೂರುತ್ತಾರೆ. ಪ್ರತಿ ಅಂಗಡಿಗಳ ಮುಂದೆ ರಾಶಿ ರಾಶಿ ಕಸ ಬಿದ್ದಿದೆ. ಅದರಲ್ಲೂ ಹೆಂಡದ ಟೆಟ್ರಾ ಪ್ಯಾಕ್ ಗಳು, ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್ ಮತ್ತು ನೀರಿನ ಬಾಟಲಿಗಳಿಂದ ತುಂಬಿ ಹೋಗಿದೆ.
*ಮದ್ಯ ವ್ಯಸನಿಗಳ ತಾಣ*
ಇನ್ನೂ ವಿಚಿತ್ರ ಎಂದರೆ ಬೆಳಿಗ್ಗೆಯೇ ಮದ್ಯ ಸೇವನೆಗೆ ವ್ಯಸನಿ (ಡ್ರಿಂಕ್ಸ್ ಗೆ ಅಡಿಕ್ಟ್) ಆಗಿರುವ ಅನೇಕರು, ಒಬ್ಬಂಟಿಯಾಗಿ, ಗುಂಪಾಗಿ ಡ್ರಿಂಕ್ಸ್ ಮಾಡಲು ಸೇರುತ್ತಿರುವುದು ವಿಚಿತ್ರವಾದರೂ ಸತ್ಯ. ಬೆಳಿಗ್ಗೆ ಆರು ಗಂಟೆಗೆ ಶುರುವಿಟ್ಟುಕೊಳ್ಳುವ ಇವರು ಇಂದು ಬೆಳಿಗ್ಗೆ 9:00 ಗಂಟೆಗೆ ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಅನೇಕ ವ್ಯಸನಿಗಳು ಕಾಣಸಿಕ್ಕರು. ಕ್ಯಾಮೆರಾ ಕೈಗೆ ಬರುತ್ತಿದ್ದಂತೆಯೇ ಮದ್ಯವನ್ನು ಎತ್ತಿಕೊಂಡೇ ಓಡಿ ಹೋದರು. ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಬೇಕಾದ ಬಾರ್ ಗಳು ಬೆಳಿಗ್ಗೆಯೇ ಆರಂಭವಾಗಿವೆಯೇ ಎಂಬ ಅನುಮಾನವೂ ಕಾಡುತ್ತಿದೆ.
*ಮಲಮೂತ್ರಗಳ ತವರು*
ಮಲ ಅಥವಾ ಮೂತ್ರಕ್ಕೆ ಅವಸರವಾದವರು ಸಾರ್ವಜನಿಕ ಶೌಚಾಲಯಗಳನ್ನು ಹುಡುಕಿಕೊಂಡು ಹೋಗುವ ಗೊಡವೆಗೆ ಹೋಗದೆ, ಪ್ಲಾಸ್ಟಿಕ್ ಬಾಟಲಿ ಹಿಡಿದು ಅಲ್ಲಿಯೇ ಎಲ್ಲವನ್ನೂ ಮುಗಿಸಿ ನಿರಾಳವಾಗಿ ಹೋಗುವುದು ಸಹ ಕಂಡುಬರುತ್ತದೆ. ಅಲ್ಲಿದ್ದ ಶೌಚಾಲಯವನ್ನು ರಿಪೇರಿ ಮಾಡುತ್ತಿರುವುದು ಸಹ ಒಂದು ಕಾರಣ ಇರಬಹುದೇನೋ ?.
*ಕಸದ ರಾಶಿ*
ಇಡೀ ಮಾರುಕಟ್ಟೆಯ ಕಸವನ್ನು ಅಲ್ಲಿಯೇ ಸಂಪೂರ್ಣವಾಗಿ ಗುಡ್ಡೆ ಹಾಕಿದ್ದು, ಅದನ್ನು ಎತ್ತು ಹಾಕುವ ಬದಲು ಅಲ್ಲಿಂದಲ್ಲೇ ಬೆಂಕಿ ಹಾಕುವ ಮೂಲಕ ಸುಡಲಾಗುತ್ತಿದೆ. ಹಸಿ ಕಸ, ಒಣ ಕಸದ ಜೊತೆಗೆ ಅತ್ಯಧಿಕ ಪ್ಲಾಸ್ಟಿಕ್ ಸಹ ಇರುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಅಲ್ಲಿನ ವ್ಯಾಪಾರಿಗಳು ಮತ್ತು ಸ್ಥಳೀಯರು ತುತ್ತಾಗುವುದರಲ್ಲಿ ಅನುಮಾನವೆ ಇಲ್ಲ.
*ರಸ್ತೆಯ ಅತಿಕ್ರಮಣ*
ವ್ಯಾಪಾರ ನಡೆಸುತ್ತಿರುವ ಬೆರಳೆಣಿಕೆಯಷ್ಟು ಅಂಗಡಿಗಳ ಮಾಲೀಕರು ಸಹ ಅಂಗಡಿಯ ಹೊರಗೆ ವ್ಯಾಪಾರ ಮಾಡುತ್ತಿದ್ದು, ಮೊದಲೇ ಕಿರಿದಾದ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನಗಳು ಓಡಾಡಲು ಸಹ ಕಷ್ಟ ಪಡುವಂತಾಗಿದ್ದು ಪೋಲಿಸರಾಗಲಿ, ನಗರಸಭೆಯವರಾಗಲಿ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳದಿರುವುದು ಅವರ ಬೇಜಾವಾಬ್ದಾರಿ ತನವನ್ನು ತೋರುತ್ತದೆ.
ಈ ವಿಷಯದಲ್ಲಿ ಅಧಿಕಾರಿಗಳು ಅಂದಿನ ವಿಷಯಕ್ಕೆ ಸಂಬಂಧಿಸಿದಂತೆ ಹಾರಿಕೆಯ ಉತ್ತರ, ಸಿಬ್ಬಂದಿಗಳ ಕೊರತೆ, ಕಸ ಸಂಗ್ರಹದ ನಂತರ ಹಾಕಲು ಜಾಗವಿಲ್ಲ ಎಂಬ ಸಬೂಬುಗಳನ್ನು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆಯೇ ವಿನಹ ಶಾಶ್ವತವಾದ ಪರಿಹಾರವನ್ನು ಮಾತ್ರ ಹುಡುಕಿಕೊಳ್ಳದಿರುವುದು ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕೆಲಸಕ್ಕೆ ಕನ್ನಡಿ ಹಿಡಿದಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು