ಕೋಳಿ ಮತ್ತು ಘನ ತ್ಯಾಜ್ಯದ ಗುಂಡಿಯಾದ ಹೊಂಗನೂರು ಕೆರೆ
ಚನ್ನಪಟ್ಟಣ:ಸೆ/04/20/ಶುಕ್ರವಾರ. ತಾಲ್ಲೂಕಿನ ಕಮರ್ಷಿಯಲ್ ಏರಿಯಾ ಎಂದೇ ಗುರುತಿಸಿಕೊಂಡಿರುವ ಕೆಲವೇ ಗ್ರಾಮಗಳಲ್ಲಿ ಹೊಂಗನೂರು ಗ್ರಾಮವೂ ಒಂದು. ಆ ಗ್ರಾಮದಲ್ಲಿ ನಗರ ಹೊರತುಪಡಿಸಿದರೆ ಹೆಚ್ಚು ಫಿಲೇಚರಿಗಳು ಅಂದರೆ ರೇಷ್ಮೆ ನೂಲು ಸಿದ್ದಪಡಿಸುವ ಕಾರ್ಖಾನೆಗಳಲ್ಲಿ ಅಗ್ರ ಸ್ಥಾನ ಹೊಂದಿದೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಗ್ರಾಮಕ್ಕೆ ಹೊಂದಿಕೊಂಡ ಬೃಹತ್ ಕೆರೆ ಯೊಂದಿದ್ದು, ಅದು ಸಂಪೂರ್ಣವಾಗಿ ಕಸದ ಗುಂಡಿಯಾಗಿ ಪರಿವರ್ತಿತವಾಗಿರುವುದು ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಆಡಳಿತಕ್ಕೆ ಕಪ್ಪು ಚುಕ್ಕೆಯಾಗುತ್ತಿದೆ.
ನಗರದ ಗಡಿ ಭಾಗದಲ್ಲಿ ಇರುವ ಹೊಂಗನೂರು, ಗ್ರಾಮವಾದರೂ ಸಹ ವ್ಯಾಪಾರ ದೃಷ್ಟಿಯಿಂದ ಚಾಲ್ತಿಯಲ್ಲಿದೆ. ಅಲ್ಲದೆ ಈ ಊರಿನ ನಡುವೆ ಶ್ರೀ ಕ್ಷೇತ್ರ ಕಬ್ಬಾಳು, ಮುತ್ತತ್ತಿ ಹೆಸರಿನ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಪುರಾಣ ಪ್ರಸಿದ್ಧ ಹಲಗೂರು ಹಾಗೂ ಒಂದು ಕಾಲದಲ್ಲಿ ತನ್ನದೇ ಛಾಪು ಹೊತ್ತಿದ್ದ ವಿಧಾನಸಭಾ ಕ್ಷೇತ್ರ ಸಾತನೂರಿಗೆ ತೆರಳುವ ಸಂಪರ್ಕ ರಸ್ತೆಗಳು ಈ ಗ್ರಾಮದ ನಡುವೆಯೇ ಹಾದು ಹೋಗಿರುವುದು ವಿಶೇಷವೇ ಸರಿ.
ಇಂತಹ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಏರಿಯ ಸುತ್ತಲೂ ಹಾಗೂ ನೀರಿಗೆ ಕೋಳಿ ಮತ್ತು ಇನ್ನಿತರ ಮಾಂಸದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಕುತ್ತಿದ್ದು, ಕೆರೆಯ ಸೂಕ್ಷ್ಮ ಜೀವಿಗಳು ನಾಶವಾಗುವುದರ ಜೊತೆಗೆ ನೀರು ಕಲುಷಿತಗೊಳ್ಳುತ್ತಿದೆ. ನೀರು ಕಲುಷಿತವಾಗುವುದರಿಂದ ವ್ಯವಸಾಯಕ್ಕೆ ಬಳಸಲು ಸಹ ಯೋಗ್ಯವಾಗದೆ, ಆ ನೀರನ್ನು ಬಳಸಿ ಬೆಳೆಯುವ ಬೆಳೆಯು ಸಹ ವಿಷವಾಗಿ ಪರಿಣಮಿಸುತ್ತಿದೆ.
ಇನ್ನೂ ಘನ ತ್ಯಾಜ್ಯ ಹಾಗೂ ಫಿಲೇಚರಿಗಳ ಕಸವೂ ಸಹ ಅಲ್ಲಲ್ಲಿ ಕಂಡು ಬರುತ್ತಿದೆ. ಕೆರೆಗೆ ಹೊಂದಿಕೊಂಡಂತೆ ಒಂದು ವೈನ್ ಶಾಪ್ ಮತ್ತು ದೇವಾಲಯಗಳು ಸಹ ಇವೆ. ಇತ್ತೀಚೆಗೆ ಅಲ್ಲಿ ಮೀನಿನ ಮರಿಗಳನ್ನು ಬಿಟ್ಟಿದ್ದು, ಅದು ತಿನ್ನಲು ಯೋಗ್ಯವಲ್ಲ ಎಂಬ ವದಂತಿಗಳು ಸಾರ್ವಜನಿಕರಲ್ಲಿ ಹರಿದಾಡಿದ್ದು ಇನ್ನೂ ಜನಮಾನಸದಲ್ಲಿದೆ. ಕಸ ನೀರಿನೊಳಗೆ ಸೇರಿದ್ದರಿಂದ ಗಬ್ಬು ವಾಸನೆ ಹರಡಿಕೊಂಡು ಸಾಂಕ್ರಾಮಿಕ ರೋಗ ಹರಡಲು ಬಹು ಮುಖ್ಯ ಕಾರಣವಾಗಿದೆ.
ಇತ್ತೀಚೆಗೆ ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ಎಚ್ಚೆತ್ತ ಗ್ರಾಮ ಪಂಚಾಯತಿಯವರು ಕೆರೆಯ ಸಮೀಪ ಒಂದು ಬ್ಯಾನರ್ ಅಳವಡಿಸಿ, ನೀವು ಸಿಸಿ ಟಿವಿ ಕಣ್ಗಾವಲಿನಲ್ಲಿದ್ದೀರಿ, ಕೆರೆಯ ಅಂಗಳ ಮತ್ತು ಕೆರೆಯ ಸುತ್ತ ಕಸ ಹಾಕಬಾರದು. ಹಾಕಿದರೆ 5,000 ರೂಪಾಯಿ ದಂಡ ಹಾಕಲಾಗುತ್ತದೆ ಎಂಬ ಬೋರ್ಡ್ ತಗುಲಿ ಹಾಕಿದ್ದು ಅದೂ ಸಹ ಚಿಂದಿಯಾಗಿದೆ. ಬೋರ್ಡ್ ಹಾಕಿದ ನಂತರ ಟನ್ ಗಟ್ಟಲೆ ಕಸ ಬಿದ್ದಿದ್ದು ಇದುವರೆಗೂ ಒಬ್ಬರಿಗೂ ದಂಡ ವಿಧಿಸದೇ ಇರುವುದು ಗ್ರಾಮ ಪಂಚಾಯತಿಯ ಕಣ್ಣಾಮುಚ್ಚಾಲೆ ಆಟವನ್ನು ಬೆತ್ತಲುಗೊಳಿಸುತ್ತಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು