ನಗರದ ಸಾತನೂರು ವೃತ್ತ ಮತ್ತು ಕಾವೇರಿ ನೀರು ಸರಬರಾಜು ಕಛೇರಿಯ ಬಳಿ ರಸ್ತೆಗುಂಡಿಯಲ್ಲಿ ನಿಂತ ನೀರು, ಪ್ರಯಾಣಿಕರಿಗೆ ಕಿರಿಕಿರಿ
ಚನ್ನಪಟ್ಟಣ:ಅ/10/20/ಶನಿವಾರ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಈ ಮೊದಲೇ ಕಟ್ಟಿಕೊಂಡಿರುವ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುವ ನೀರು ಒಂದೆಡೆಯಾದರೆ, ಕಾವೇರಿ ನೀರು ಸರಬರಾಜು ಪೈಪುಗಳು ಒಡೆದು ರಸ್ತೆಗೆ ನೀರು ಹರಿದು ಗುಂಡಿಗಳಾಗುತ್ತಿರುವುದು ಮತ್ತೊಂದೆಡೆ. ಇವುಗಳಿಂದ ಪರಿತಪಿಸುತ್ತಿರುವುದು ಮಾತ್ರ ವಾಹನಗಳ ಚಾಲಕರು ಮತ್ತು ಪಾದಚಾರಿಗಳು.
ನಗರದ ಸುಪ್ರಸಿದ್ಧ ಸಾತನೂರು ಸರ್ಕಲ್ ಬಳಿಯ ರಸ್ತೆಯಲ್ಲಿ. ಸಾತನೂರು ರಸ್ತೆ ಮತ್ತು ಹೆದ್ದಾರಿಯ ಮೂಲಕ, (ಅಂಬೇಡ್ಕರ್ ಭವನದ ಪಕ್ಕದ ರಸ್ತೆ) ನಿಜಾಮಿ ವೃತ್ತದ ಕಡೆಯಿಂದ ನಗರದೊಳಗೆ ಹೋಗುವ ಈ ದಾರಿಯಲ್ಲಿ ಹಳ್ಳಗಳಾಗಿದ್ದು, ಮಳೆಯ ನೀರು ನಿಂತು ಪ್ರಯಾಣಿಕರು ಮತ್ತು ಸ್ಥಳೀಯ ಅಂಗಡಿಗಳಿಗೆ ಕಿರಿಕಿರಿಯಾಗುತ್ತಿದೆ. ಪಾದಚಾರಿಗಳಂತೂ ಭಯದಿಂದ ನಡೆದುಕೊಂಡು ಹೋಗಬೇಕಾದ ಸ್ಥಿತಿ ಒದಗಿದೆ.
ಹೆದ್ದಾರಿಯ ಬದಿಯೇ ಇರುವ ಈ ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ಸದಾ ಇರುತ್ತಾರೆ. ಗಂಟೆಯಲ್ಲಿ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಇಂತಹ ರಸ್ತೆಯಲ್ಲಿ ನೀರು ನಿಂತು ವಾಹನಗಳು ಸಂಚರಿಸುವಾಗ ಸುತ್ತಲೂ ನೀರು ಚಿಮ್ಮಿ ಅದೆಷ್ಟೋ ಸಂದರ್ಭದಲ್ಲಿ ಜಗಳಗಳು ಆಗಿರುವುದುಂಟು. ಈ ರಸ್ತೆಯು ನೇರ ಪಿಡಬ್ಲ್ಯೂಇ ಇಲಾಖೆಗೆ ಸಂಪರ್ಕ ರಸ್ತೆಯಾಗಿದ್ದು ಎಲ್ಲಾ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಹ ಕಣ್ಮುಚ್ಚಿ ಓಡಾಡುತ್ತಿದ್ದಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
*ಕಾವೇರಿ ನೀರು ಸರಬರಾಜು ಬಳಿಯೂ ಇದೇ ಗೋಳು*
ನಗರದ ಸಾತನೂರು ರಸ್ತೆಯ ಕಾವೇರಿ ವಾಟರ್ ಸಪ್ಲೈ ಮತ್ತು ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಆಳವಾದ ಗುಂಡಿಗಳಾಗಿದ್ದು, ಎಲ್ಲಾ ರೀತಿಯ ವಾಹನಗಳ ಸವಾರರು ಚಾಲನೆ ಮಾಡಲು ಪರಿತಪಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸವಾರರಂತೂ ಜೀವ ಕೈಲಿಡಿದು ಹೋಗಬೇಕಾದ ಸ್ಥಿತಿ ಇದೆ.
ಮೊದಲೇ ಪಾದಚಾರಿ ರಸ್ತೆಯೇ ಮಾಯವಾಗಿರುವ ಈ ದೊಡ್ಡ ರಸ್ತೆಯಲ್ಲಿ ಹಳ್ಳಕೊಳ್ಳದ ನೀರು ಮೈಮೇಲೆ ಹಾರುವುದು ಎಂಬ ಭಯದಿಂದ ಪಾದಚಾರಿಗಳು ಅತಿ ಎಚ್ಚರಿಕೆಯಿಂದ ಸಾಗಬೇಕಾಗಿದೆ. ಕಾವೇರಿ ವಾಟರ್ ಸಪ್ಲೈ ನ ಪೈಪು ಆಗಾಗ್ಗೆ ಒಡೆದು ಇಲ್ಲಿ ನೀರು ನಿಲ್ಲುತ್ತದೆ. ವಾಟರ್ ಸಪ್ಲೈ ಕಛೇರಿಗೆ ಹೊಂದಿಕೊಂಡಂತೆ ಈ ಅವಘಡ ಸಂಭವಿಸಿದ್ದರೂ ಸಹ ಎಚ್ಚರಿಕೆ ವಹಿಸದಿರುವುದು ಅಧಿಕಾರಿಗಳ ಬೇಜಾವಾಬ್ದಾರಿಯನ್ನು ತೋರಿಸುತ್ತದೆ.
ರಸ್ತೆಯ ಗುಂಡಿಗಳನ್ನು ಮುಚ್ಚದೆ ಹಾಗೂ ಪೈಪುಗಳು ಒಡೆದ ತಕ್ಷಣ ಅದನ್ನು ಶಾಶ್ವತವಾಗಿ ಸರಿಪಡಿಸದಿರುವ ಕಾರಣ ಇಷ್ಟೆಲ್ಲಾ ಅವಾಂತರಗಳಾಗುತ್ತಿವೆ. ಇದು ಮಳೆಗಾಲವಾದ್ದರಿಂದ ಪ್ರಯಾಣಿಕರಿಗೆ ಅತಿಯಾದ ಕಿರಕಿರಿಯಾಗುತ್ತಿದೆ. ಶೀಘ್ರವಾಗಿ ಎಚ್ಚೆತ್ತುಕೊಂಡು ಸರಿಪಡಿಸದಿದ್ದರೆ ಅಧಿಕಾರಿಗಳಿಗೆ ಪ್ರಯಾಣಿಕರಿಂದಲೇ ತಕ್ಕ ಶಾಸ್ತಿಯಾಗುವುದು ಶತ:ಸಿದ್ದ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು