ನಗರಸಭೆ ಗೆ ಸೇರಿದ ನಿವೇಶನದಲ್ಲಿ ಸ್ಲಂ ಬೋರ್ಡ್ ನವರಿಂದ ಅಕ್ರಮ ಕಟ್ಟಡ. ಶೀಘ್ರ ನೆಲಸಮ ಮಾಡುವಂತೆ ಪೌರಾಯುಕ್ತ ಆದೇಶ
ಚನ್ನಪಟ್ಟಣ:ಅ/13/20/ಮಂಗಳವಾರ. ನಗರದ ಸಿಎಂಸಿ ಲೇಔಟ್ ನಲ್ಲಿನ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ (ಸ್ಲಂ ಬೋರ್ಡ್) ಯವರು ಬಡವರಿಗೆ ಮನೆ ನಿರ್ಮಿಸಲು ರಾತ್ರೋರಾತ್ರಿ ಫಿಲ್ಲರ್ ನಿಲ್ಲಿಸಿದ್ದು, ನಗರಸಭೆಯ ಅಧಿಕಾರಿಗಳಿಗೆ ಪೀಕಲಾಟಕ್ಕಿಟ್ಟುಗೊಂಡಿದ್ದರೆ, ಇದನ್ನೆ ನೆಪವಾಗಿಟ್ಟುಕೊಂಡಿರುವ ಖಾತೆದಾರರು ನಮಗೂ ಮನೆ ನಿರ್ಮಿಸಲು ಖಾತಾ, ಇ-ಖಾತಾ ಮಾಡಿ ಮನೆ ನಿರ್ಮಿಸಿಕೊಳ್ಳಲು ಪರವಾನಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಎಂಸಿ ಲೇಔಟ್ ಗೆ ಸಂಬಂಧಿಸಿದ ದೂರು ಲೋಕಾಯುಕ್ತ ಕೋರ್ಟ್ ನಲ್ಲಿದ್ದು, ಸದ್ಯ ಯಾವುದೇ ವ್ಯಕ್ತಿಗೂ ಮನೆ ನಿರ್ಮಿಸಲು ನಗರಸಭೆಯು ಪರವಾನಗಿ ನೀಡುತ್ತಿಲ್ಲ. ಸ್ಲಂ ಬೋರ್ಡ್ ನವರು ನಿರ್ಮಿಸಲು ಹೇಗೆ ಪರವಾನಗಿ ನೀಡಿದರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅದರಲ್ಲೂ ನಗರಸಭೆಗೆ ಸೇರಿದ ಜಾಗದಲ್ಲಿ ಸ್ಲಂ ಬೋರ್ಡ್ ನವರು ಮನೆ ನಿರ್ಮಿಸುತ್ತಿದ್ದಾರೋ ಅಥವಾ ಬೇರೆ ಬಲಾಢ್ಯರ ಕಪಿ ಮುಷ್ಟಿಗೆ ಸಿಲುಕಿ ನಿರ್ಮಿಸುತ್ತಿದ್ದಾರೋ ಎಂಬುದನ್ನು ನಗರಸಭೆಯ ಅಧಿಕಾರಿಗಳು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಈ ಮೊದಲು ಸಿಎಂಸಿ ಲೇಔಟ್ ನಲ್ಲಿ ನಗರಸಭೆಗೆ ಸಂಬಂಧಿಸಿದ ಖಾತೆಗಳಲ್ಲಿ ಹಲವಾರು ದೋಷಾರೋಪಗಳಾಗಿವೆ. ಒಂದೇ ನಿವೇಶನ ನಾಲ್ಕೈದು ಮಂದಿಗೆ ನೋಂದಣಿಯಾಗಿರುವ ಉದಾಹರಣೆಗಳಿವೆ. ಎಷ್ಟೋ ಬಡವರು ನಿವೇಶನ ಇದ್ದೂ ಮನೆ ನಿರ್ಮಿಸಲಾಗದೆ ಬಳಲುತ್ತಿದ್ದಾರೆ. ಕೆಲವು ಮಂದಿ ಈ ನಿವೇಶನ ನಮ್ಮದೋ ಅಥವಾ ಬೇರೆಯವರದೋ ಎಂದು ಖರೆ ಮಾಡಿಕೊಳ್ಳು ಹೆಣಗುತ್ತಿದ್ದಾರೆ. ಇಂತಹ ಸಿಎಂಸಿ ಲೇಔಟ್ ನಲ್ಲಿ ನಗರಸಭೆಯವರಿಗೆ ಗೊತ್ತಿಲ್ಲದೆ, ಬಲಾಢ್ಯರ ಒತ್ತಡದಿಂದ ನಗರಸಭೆಯ ಅಧಿಕಾರಿಗಳಿಗೂ ಗೊತ್ತಾಗದೆ, ಸ್ಲಂ ಬೋರ್ಡ್ ನವರು ಮನೆ ನಿರ್ಮಿಸಲು ಹೊರಟಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಲಂ ಬೋರ್ಡ್ ನವರು ನಮ್ಮ ಬಳಿ ಯಾವುದೇ ಪರವಾನಗಿ ಪಡೆದಿಲ್ಲ. ಇದನ್ನು ಪ್ರಶ್ನಿಸಿ ಈಗಾಗಲೇ ಪತ್ರ ಬರೆದಿದ್ದೇವೆ. ಈಗ ಫಿಲ್ಲರ್ ಹಾಕಿ ಮನೆ ನಿರ್ಮಿಸಲು ಹೊರಟಿರುವುದು ನಗರಸಭೆಯ ಜಾಗವಾಗಿದ್ದು, ಶೀಘ್ರವಾಗಿ ತೆರವುಗೊಳಿಸಿ ಸಮತಟ್ಟು ಮಾಡಬೇಕೆಂದು ಸ್ಲಂ ಬೋರ್ಡ್ ನ ಇಂಜಿನಿಯರ್ ಗಳಿಗೆ ತಿಳಿಸಿದ್ದೇನೆ.
*ಶಿವನಂಕಾರಿಗೌಡ, ಪೌರಾಯುಕ್ತರು, ಚನ್ನಪಟ್ಟಣ ನಗರಸಭೆ*
ಸ್ಲಂ ಬೋರ್ಡ್ ಹಲವಾರು ದಾಖಲೆಗಳನ್ನು ಕಲೆಹಾಕಿ ಮನೆಗಳನ್ನು ನಿರ್ಮಿಸಿ ಮುಂದಿನ ಅಭಿವೃದ್ಧಿಗಾಗಿ ನಗರಸಭೆಗೆ ವಹಿಸಿಕೊಡುತ್ತದೆ. ಈಗ ನಿರ್ಮಿಸುತ್ತಿರುವ ಎಲ್ಲಾ ಮನೆಗಳ ದಾಖಲೆಗಳು ಸರಿಯಾಗಿವೆ. ಶೆಟ್ಟಿಹಳ್ಳಿ ಕೆರೆಯ ಬದಿಯಲ್ಲಿನ 13 ಮನೆಗಳ ಕಾಮಗಾರಿಯನ್ನು ನಿಲ್ಲಿಸಿದ್ದೇವೆ. ನಗರಸಭೆಯ ಜಾಗದಲ್ಲಿ ನಿರ್ಮಿಸಲೊರಟಿರುವ ಮೂರು ಮನೆಗಳನ್ನು ಗುತ್ತಿಗೆದಾರರಿಗೆ ದಿಕ್ಕು ತಪ್ಪಿಸಿ ನಿರ್ಮಾಣ ಮಾಡಲು ಯಾರು ಹೇಳಿದ್ದಾರೋ ಗೊತ್ತಿಲ್ಲ. ಈ ವಿಷಯ ಗೊತ್ತಾದ ತಕ್ಷಣ ಕೆಲಸವನ್ನು ನಿಲ್ಲಿಸಲಾಗಿದೆ. ಶೀಘ್ರವಾಗಿ ತೆರವುಗೊಳಿಸಿ ನಗರಸಭೆಯ ಜಾಗವನ್ನು ಯಥಾಸ್ಥಿತಿಯಲ್ಲಿ ನಗರಸಭೆಗೆ ನೀಡುತ್ತೇವೆ.
*ಶಶಿಕುಮಾರ್ ಎಇ ಸ್ಲಂ ಬೋರ್ಡ್*
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು