ಪುಟ್ಟಣ್ಣ ಗೆಲುವು ಯೋಗೇಶ್ವರ್ ಗೂ ಅನಿವಾರ್ಯ. ಕ್ಷೇತ್ರ ಉಳಿಸಿಕೊಳ್ಳುವತ್ತ ಜೆಡಿಎಸ್ ತಂತ್ರ
ಚನ್ನಪಟ್ಟಣ/ಅ/29/20/ಗುರುವಾರ. ನಿನ್ನೆ ದಿನ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ, ರಾಮನಗರ ಜಿಲ್ಲಾದ್ಯಂತ ಶೇಕಡ 92 ರಷ್ಟು ಮತದಾನವಾಗಿದ್ದು, ಮೂರು ಬಾರಿ ಅನಾಯಾಸವಾಗಿ ಗೆದ್ದು ಬೀಗುತ್ತಿದ್ದ ಪುಟ್ಟಣ್ಣ ನವರ ಗೆಲುವು ಈ ಬಾರಿ ಕೊಂಚ ಹಿನ್ನಡೆಯಾಗಬಹುದೆಂದು ರಾಜಕೀಯ ಚಾಣಾಕ್ಷರ ಅಭಿಪ್ರಾಯವಾಗಿದೆ.
*ಪುಟ್ಟಣ್ಣನವರ ಗೆಲುವು ತುಸು ತ್ರಾಸ*
ಈ ಬಾರಿಯೂ ಪುಟ್ಟಣ್ಣನವರೇ ಗೆಲ್ಲುತ್ತಾರೆ ಎಂದು ಬಹುತೇಕ ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರಾದರೂ, ಜೆಡಿಎಸ್ ನ ಮೂರು ಮತ್ತು ನಾಲ್ಕನೇ ಹಂತದ ಅತಿ ನಿಷ್ಠಾವಂತ ಕಾರ್ಯಕರ್ತರು ಮಾತ್ರ ಯಾರ ಮಾತನ್ನೂ ಕೇಳದೆ, ಆಮಿಷಕ್ಕೊಳಪಟ್ಟರೂ ಸಹ ತಮ್ಮ ಮತವನ್ನು ಜೆಡಿಎಸ್ ಅಭ್ಯರ್ಥಿ ಎ ಪಿ ರಂಗನಾಥ ರವರಿಗೆ ಹಾಕಿರುವುದರಿಂದ ಪುಟ್ಟಣ್ಣನವರಿಗೆ ಈ ಮೊದಲ ಚುನಾವಣೆಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಪೈಪೋಟಿ ಇರುವುದಂತು ಸತ್ಯ.
*ಕಾಂಗ್ರೆಸ್ ಮತಗಳು ಪುಟ್ಟಣ್ಣ ನವರ ಪಾಲು !*
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಪ್ರಬಲ ನಾಯಕ ಹೆಚ್ ಡಿ ಕುಮಾರಸ್ವಾಮಿ ಯವರ ಇತ್ತೀಚಿನ ಬಹಿರಂಗ ಜಗಳ ತಾರಕ್ಕಕ್ಕೇರಿದೆ. ಇದರಿಂದ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಖಾಡಕ್ಕಿಳಿಯದೇ ಅಂತರ ಕಾಯ್ದುಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ, ಎಂಬುವುದರ ಅರಿವಿನ ಜೊತೆಗೆ ಪಕ್ಷದ ಮತಗಳು ಪುಟ್ಟಣ್ಣ ನವರಿಗೆ ಹೋದರೂ ಸರಿಯೇ ! ರಂಗನಾಥ ಎನ್ನುವುದಕ್ಕಿಂತ ಜೆಡಿಎಸ್ ಗೆಲುವು ಸಾಧಿಸಬಾರದು, ಎಂಬುದು ಡಿಕೆಶಿ ಮತ್ತು ಜೆಡಿಎಸ್ ವಿರೋಧಿ ಕಾಂಗ್ರೆಸ್ ನವರಾದಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
*ಪುಟ್ಟಣ್ಣ ಗೆದ್ದರೆ ಯೋಗೇಶ್ವರ್ ಗೆ ಪಟ್ಟ ?!*
ಕಳೆದ ಸಾರ್ವತ್ರಿಕ ಚುನಾವಣೆಯಿಂದ ಹಂತಹಂತವಾಗಿ ಸೋಲಿನ ಕಹಿಯನ್ನು ಉಂಡ ಸಿಪಿವೈ ಗೆ ಕಲಾವಿದ ಎಂಬ ಪಟ್ಟ ಕೈ ಹಿಡಿಯಿತ್ತಾದರೂ ಮುಡಿಗೇರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎರಡು ಪಕ್ಷಗಳ ನಾಯಕರಿಗಿಂತ ಹೆಚ್ಚು ತೊಡಗಿಸಿಕೊಂಡವರು ಸಿಪಿವೈ ಮಾತ್ರ. ಈ ಹಿಂದಿನ ಚುನಾವಣೆಗಳಲ್ಲೂ ಸಹ ಪುಟ್ಟಣ್ಣ ನ ಗೆಲುವಿನ ಹಿಂದೆ ಸಿಪಿವೈ ಇದ್ದರಾದರೂ ಇಂದಿನ ಚುನಾವಣೆಯಲ್ಲಿ ತಮ್ಮದೇ ಪಕ್ಷದವರು ಎನ್ನುವುದರ ಜೊತೆಗೆ ಪುಟ್ಟಣ್ಣ ನ ಗೆಲುವಲ್ಲಿ, ತಮ್ಮ ಗೆಲುವನ್ನು ಕಾಣಲು ಹೊರಟಿರುವುದಂತೂ ಬಹಿರಂಗ ಸತ್ಯ.
*ಚನ್ನಪಟ್ಟಣ ಪುಟ್ಟಣ್ಣ ನ ಪಾಲು ! ಬೆಂಗಳೂರು ಜೆಡಿಎಸ್ ಪಾಲೇ ?*
ಪುಟ್ಟಣ್ಣ ನವರು ಸ್ಥಳೀಯರಾಗಿದ್ದು, ಪಕ್ಷಕ್ಕಿಂತಲೂ ಶಿಕ್ಷಕರ ಮೇಲೆ ಹೆಚ್ಚು ನಂಬಿಕೆ ಇಟ್ಟವರು. ಬಹುತೇಕ ಶಿಕ್ಷಕರು ಸಹ ಪುಟ್ಟಣ್ಣ ಪರ ಬಹಿರಂಗ ಪ್ರಚಾರ ಮಾಡುವ ಮೂಲಕ ಗೆಲುವಿಗೆ ಸಾಥ್ ನೀಡಿದ್ದಾರೆ. ಆದರೆ ಬೆಂಗಳೂರಿನ ಶಿಕ್ಷಕರನ್ನು ಜೆಡಿಎಸ್ ಪಕ್ಷದೊಡಗೂಡಿ ತನ್ನದೇ ಹಲವು ಆಯಾಮಗಳಿಂದ ಎ ಪಿ ರಂಗನಾಥ ರವರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂದು ಪಕ್ಷಾತೀತವಾದ ನಂಬಲರ್ಹ ಮೂಲಗಳು ಮಾಹಿತಿ ನೀಡಿವೆ.
ಸದ್ಯ ಮತಗಳು ಕತ್ತಲಕೋಣೆಯಲ್ಲಿ ಅಡಗಿದ್ದು ಮುಂದಿನ ತಿಂಗಳ ಎರಡನೇ ತಾರೀಖಿನ ಸೋಮವಾರ ಮಧ್ಯಾಹ್ನದ ವೇಳೆಗೆ ತಿಳಿಯಲಿದ್ದು, ವಿಜಯಲಕ್ಷ್ಮಿ ಯಾರ ಕೊರಳಿಗೆ ಜಯಮಾಲೆ ಹಾಕುತ್ತಾಳೆ ಎಂದು ಕಾದುನೋಡುವ ತಂತ್ರಕ್ಕೆ ಎಲ್ಲರೂ ಶರಣಾಗಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು