ರಾಮಾಪ್ರಮೇಯ ಹೆಸರಿನ ಉದ್ಯಾನವನ ಅಧೋಗತಿಯತ್ತ. ನಗರಸಭೆ ಸಂಪೂರ್ಣ ಅನುತ್ತೀರ್ಣ
ಚನ್ನಪಟ್ಟಣ:ಅ/31/20/ಶನಿವಾರ.
ಚನ್ನಪಟ್ಟಣ ನಗರದ ಮಳೂರು ಬಳಿಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಅಪ್ರಮೇಯ ಉದ್ಯಾನವನದ ದುಸ್ಥಿತಿ ಇದು. ನಗರದಾದ್ಯಂತ ಬೆರಳೆಣಿಕೆ ಉದ್ಯಾನವನಗಳಿದ್ದು, ಎಲ್ಲಾ ಉದ್ಯಾನಗಳ ಸ್ಥಿತಿಯೂ ಶೋಚನೀಯವಾಗಿದೆ.
ಈ ಉದ್ಯಾನವನವನ್ನು ನಗರಸಭೆಯೇ ಅಭಿವೃದ್ಧಿ ಪಡಿಸಿದ್ದು, ಅವರೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಹಲವಾರು ಕಾರಣ ಮತ್ತು ಸಬೂಬು ಹೇಳುವ ಇವರು ಇನ್ನು ಮುಂದೆ ಹೀಗಾಗದಂತೆ ಉದ್ಯಾನವನ್ನು ಸ್ವಚ್ಛಗೊಳಿಸಿ, ನಾಗರೀಕರಿಗೆ ಅನುವು ಮಾಡಿಕೊಡುತ್ತೇವೆ ಎನ್ನುತ್ತಾರೆ.
ಉದ್ಯಾನವನದ ಮುಂದೆ ಒಂದು ಕಲ್ಯಾಣಿಯಿದ್ದು, ಆ ಕಲ್ಯಾಣಿಗೆ ನೇರವಾಗಿ ನಗರದ ಚರಂಡಿ ನೀರು ಸೇರುತ್ತಿರುವುದರಿಂದ ಅದು ಸಹ ಗಬ್ಬು ನಾರುತ್ತಿದೆ. ಕಲ್ಯಾಣಿಯ ಮುಂದೆ ಕಸದ ರಾಶಿಯೇ ಬಿದ್ದಿದ್ದು ಅದರ ಕೆಟ್ಟ ರಸವೂ ಕಲ್ಯಾಣಿಗೆ ಸೇರುತ್ತಿದೆ. ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಚರಂಡಿ ನಿರ್ಮಿಸಿ ಕಲ್ಯಾಣಿಗೆ ಕೊಳಚೆ ನೀರು ಹರಿಯದಂತೆ ತಡೆಗಟ್ಟುವ ಮೂಲಕ ಜಲಮೂಲ ಹಾಗೂ ಪುರಾತನ ಕೊಳವನ್ನು ರಕ್ಷಿಸಬೇಕಾಗಿದೆ.
ಈ ಉದ್ಯಾನವನದಲ್ಲಿ ನೀರಿಗಾಗಿ ಬೋರ್ ವೆಲ್ ಇದೆ, ಅದರ ಪೈಪುಗಳು ತುಕ್ಕು ಹಿಡಿಯುತ್ತಿವೆ. ಯಂತ್ರಗಳಿರುವ ಡಬ್ಬ ತೆರೆದಿದ್ದು ಅಪಾಯ ಕಾದಿದೆ. ತಡೆಗೋಡೆಯ ಸರಳುಗಳು ತುಕ್ಕು ಹಿಡಿಯುತ್ತಿವೆ. ಸ್ಪನ್ ಸಿಲ್ಕ್ ಮಿಲ್ ಗೆ ಹೊಂದಿಕೊಂಡಿರುವ ತಡೆಗೋಡೆಯು ಶಿಥಿಲಗೊಂಡಿದೆ. ಹುಲ್ಲು ಹಾಸುಗಳು ಒಣಗಿ ನಿಂತಿವೆ. ಅಲಂಕಾರಿಕ ಸಸ್ಯಗಳು ಮರಗಳಂತೆ ಬೆಳೆದು ಏನಿವೆ ಎಂದು ಗೊತ್ತಾಗದಂತಿವೆ. ಕೆಲವು ಮರಗಳು ಒಣಗಿ ಬೋಳಾಗಿವೆ. ಕಲ್ಯಾಣಿಯ ನೀರು ಹಸಿರುಮಯವಾಗಿವೆ.
ಶೀಘ್ರವಾಗಿ ನಗರಸಭೆಯವರು ಉದ್ಯಾನವನವನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಿಬೇಕಿದೆ. ವಯಸ್ಸಾದವರಿಗೆ, ವಾಯುವಿಹಾರಿಗಳಿಗೆ, ಹರಟೆ ಯುವಕರಿಗೆ, ನೊಂದ ಹೃದಯಗಳಿಗೆ ಸಾಂತ್ವನ ಸಿಗಬೇಕಾದ ಈ ಉದ್ಯಾನವನವು ಹಾಳುಕೊಂಪೆಯಾಗಿ, ದಟ್ಟ ಕಾನನದಂತೆ ಕಾಣುತ್ತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ನಗರಸಭೆಯವರ ಅಧಿಕಾರಿಗಳು ಕೆಲಸಮಾಡಲು ಬಂದಿದ್ದಾರೋ ಅಥವಾ ಎಸಿ ರೂಮಿನಲ್ಲಿ, ಈಸಿ ಚೇರಿನಲ್ಲಿ ಕುಳಿತು ಹರಟೆ ಹೊಡೆಯಲೋಸುಗ ಬಂದಿದ್ದಾರೋ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು