ಪೋಲೀಸರು ಹಿಡಿಯುತ್ತಾರೆ ಎಂಬ ಕಾರಣಕ್ಕಾಗಿ ಹೆಲ್ಮೆಟ್ ಧರಿಸಬೇಡಿ, ನಿಮ್ಮ ಪ್ರಾಣರಕ್ಷಣೆಗಾಗಿ ಹೆಲ್ಮೆಟ್ ಧರಿಸಿ; ಎಎಸ್ಪಿ ರಾಮರಾಜನ್
ಚನ್ನಪಟ್ಟಣ:ನ/04/20/ಬುಧವಾರ. ಇತ್ತೀಚೆಗೆ ತಾಲ್ಲೂಕು, ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಅಪಘಾತ ಸಂಖ್ಯೆಗಳು ಹೆಚ್ಚಾಗುತ್ತಿವೆ. ಕೇವಲ ರಸ್ತೆ ಅಪಘಾತದಲ್ಲೇ ಒಂದು ವರ್ಷಕ್ಕೆ ಒಂದು ಲಕ್ಷದ ನಲವತ್ತು ಸಾವಿರ ಮಂದಿ ಅಸುನೀಗುತ್ತಾರೆ. ಇನ್ನೂ ಅಂಗಾಂಗಗಳನ್ನು ಊನ ಮಾಡಿಕೊಂಡವರು, ಜೀವನಪರ್ಯಂತ ಹಾಸಿಗೆ ಹಿಡಿದವರು, ಪ್ರಜ್ಞಾಹೀನರಾದವರ ಸಂಖ್ಯೆಯು ಲತಾ ದುಪ್ಪಟ್ಟಾಗಿವೆ. ಪೋಲೀಸರು ದಂಡ ಹಾಕುತ್ತಾರೆ ಎಂಬ ನೆಪಕ್ಕಾಗಿ ನೀವು ಹೆಲ್ಮೆಟ್ ಧರಿಸುವುದು ಬೇಡ. ನಿಮ್ಮ ಪ್ರಾಣ ರಕ್ಷಣೆಗಾಗಿ, ನಿಮ್ಮನ್ನೇ ನಂಬಿರುವ ನಿಮ್ಮ ಸಕುಟುಂಬಕ್ಕಾಗಿ ನೀವು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ಐಪಿಎಸ್ ಅಧಿಕಾರಿ ತಾಲ್ಲೂಕಿನ ಉಪ ಪೋಲಿಸ್ ಅಧೀಕ್ಷಕ ರಾಮರಾಜನ್ ಸಾರ್ವಜನಿಕರಿಗೆ ತಿಳಿಹೇಳಿದರು.
ಅವರು ಇಂದು ನಮ್ಮ ಪತ್ರಿಕೆಗೆ ಟ್ರಾಫಿಕ್ ದಂಡ ಕುರಿತು ಹೇಳಿಕೆ ನೀಡಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ನಾವು ಸಹ ಕಾನೂನನ್ನು ಸ್ವಲ್ಪ ಸಡಿಲ ಬಿಟ್ಟು, ಹೆಲ್ಮೆಟ್ ಧರಿಸದಿರುವ ಸವಾರರಿಗೆ ವಿನಾಯಿತಿ ನೀಡಿದ್ದೆವು. ಆದರೆ ಮುಂದೆ ಹೀಗಾಗುವುದಿಲ್ಲ. ಹೆಲ್ಮೆಟ್ ಧರಿಸದ ಸವಾರರು, ವಾಹನಗಳ ದಾಖಲಾತಿಗಳು ಸಮರ್ಪಕವಾಗಿ ಇಲ್ಲದಿರುವವರು ಮತ್ತು ವಾಹನ ವಿಮೆ ಇಲ್ಲದಿರುವವರ ವಿರುದ್ದ ಸರ್ಕಾರದ ನಿಯಮದ ಪ್ರಕಾರ ದಂಡ ಹಾಕುತ್ತಿದ್ದೇವೆ. ಸವಾರರು ತಪ್ಪು ಮಾಡಿಯೂ ಸಹ ದಂಡ ಕಟ್ಟದಿರುವುದು, ಪೋಲೀಸರ ಜೊತೆಗೆ ವಾದ ಮಾಡುವುದು ಮತ್ತು ರಾಜಕೀಯ ಬಲಾಢ್ಯರ ಕಡೆಯಿಂದ ಕರೆ ಮಾಡಿಸುವುದು ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ದಂಡ ವಿಧಿಸಿದ ನಂತರ ಹಣ ನೀಡಿ ರಶೀದಿ ಪಡೆಯಬೇಕು. ಹಣಕ್ಕೂ ರಶೀದಿಗೂ ವ್ಯತ್ಯಾಸ ಕಂಡರೆ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನಮ್ಮ ದೇಶದಲ್ಲಿ ಬಡ ಜನರೂ ಇದ್ದಾರೆ. ಅವರ ಬಳಿಯೂ ವಾಹನಗಳಿವೆ. ಆದರೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ, ತಮ್ಮಿಷ್ಟದಂತೆ ನಡೆಯುತ್ತಾರೆ. ಕನಿಷ್ಠ ಐನೂರು ರೂಪಾಯಿ ದುಡಿಯುವ ವ್ಯಕ್ತಿ ಅಷ್ಟನ್ನೂ ದಂಡವಾಗಿ ಪಾವತಿಸಿ ಬರಿಗೈಯ್ಯಲ್ಲಿ ಮನೆಗೆ ತೆರಳಬೇಕಾಗುತ್ತದೆ. ಅದರ ಬದಲು, ವರ್ಷಕ್ಕೊಮ್ಮೆ ವಿಮೆ, ಒಂದು ಬಾರಿ ಪೂರ್ಣಪ್ರಮಾಣದ ದಾಖಲೆ, ಉತ್ತಮ ಹೆಲ್ಮೆಟ್ ಧರಿಸಿದರೆ ಅವನ ಸಂಪಾದನೆ ಅವನ ಬಳಿಯೇ ಉಳಿಯುತ್ತದೆ. ನಾವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಾಗ ಆಗುವ ಅಪಘಾತಗಳಿಗೂ, ಸಡಿಲಬಿಟ್ಟಾಗ ಆಗುವ ಅಪಘಾತಗಳಿಗೂ ಹೋಲಿಸಿದಾಗ ಅಪಘಾತಗಳ ಸಂಖ್ಯೆಯು ದ್ವಿಗುಣವಾಗಿವೆ. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ಕಟ್ಟುನಿಟ್ಟಾಗಿ ಪಾಲೀಸಲೇ ಬೇಕು ಎಂದರು.
ಅಪಘಾತದಲ್ಲಿ ಮೊದಲು ಪೆಟ್ಟು ಬೀಳುವುದು ತಲೆಗೆ, ಅರ್ಧ ಹೆಲ್ಮೆಟ್, ಕ್ಯಾಪ್ ರೀತಿಯ ಹೆಲ್ಮೆಟ್, ಬೇಡ. ಐಎಸ್ಐ ದೃಢೀಕರಿಸಿದ, ತಲೆ ಸಂಪೂರ್ಣ ಮುಚ್ಚಿಕೊಳ್ಳುವಂತಹ ಹೆಲ್ಮೆಟ್ ಧರಿಸಿ, ಪೋಲೀಸರು ದಂಡ ಹಾಕುತ್ತಾರೆ ಎಂಬ ಒಂದೇ ಕಾರಣದಿಂದ ಹೆಲ್ಮೆಟ್ ಧರಿಸುವುದು ಬೇಡ. ಜಿಲ್ಲಾದ್ಯಂತ ಇನ್ನೂ ಮುಂದೆ ತುಂಬಾ ಹೆಚ್ಚಿನ ರೀತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಗೊತ್ತು, ಇವರು ಪರಿಚಯ ಎಂದು ಪೋನ್ ಮಾಡಿಕೊಡುವುದು ಬೇಡ. ಅಧಿಕಾರಿಗಳು ಸಹ ಆ ಸಮಯದಲ್ಲಿ ಕರೆ ಸ್ವೀಕರಿಸುವುದಿಲ್ಲ. ಅದೂ ಅಪರಾಧವಾಗುತ್ತದೆ. ನಿಮ್ಮ ಭವಿಷ್ಯದ ಉತ್ತಮ ಜೀವನಕ್ಕಾಗಿ ನೀವು ನಿಯಮಗಳನ್ನು ಪಾಲಿಸಿ ಎಂದು ರಾಮರಾಜನ್ ರವರು ಸವಾರರಿಗೆ ಎಚ್ಚರಿಕೆಯ ಜೊತೆಗೆ ಸಂದೇಶ ರವಾನಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು