Tel: 7676775624 | Mail: info@yellowandred.in

Language: EN KAN

    Follow us :


ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ

Posted date: 06 Nov, 2020

Powered by:     Yellow and Red

ಕುಡಿನೀರು ಕಟ್ಟೆಯೂ ಒಂದೆಡೆ ಒತ್ತುವರಿಯಾಗಿದ್ದರೆ, ಎರಡು ಬದಿ ನಿರ್ಮಿಸಿರುವ ಉದ್ಯಾನವನ ಪುಂಡುಪೋಕರಿಗಳ ತಾಣವಾಗಿದೆ

ಚನ್ನಪಟ್ಟಣ:ನ/04/20/ಬುಧವಾರ.


ನಗರವೂ ಸೇರಿದಂತೆ ತಾಲೂಕಿನಾದ್ಯಂತ ಅದೆಷ್ಟೋ ಬಾವಿ, ಕೆರೆ, ಕುಂಟೆ, ಕಟ್ಟೆಗಳಿದ್ದು, ಅಂದಿನ ರಾಜಮಹಾರಾಜರು, ಪಾಳೇಗಾರರು ಮತ್ತು ಶ್ರೀಮಂತ ಸಾರ್ವಜನಿಕರು ಜನರ ಕುಡಿಯುವ ನೀರಿಗಾಗಿ ಅವುಗಳನ್ನು ನಿರ್ಮಿಸಿದ್ದರು. ಆದರೆ ಸ್ಥಳೀಯವಾಗಿ ಅವುಗಳನ್ನು ಬಳಸುತ್ತಿದ್ದು, ಸ್ಥಳೀಯರ ಹೆಸರನ್ನೋ, ರಾಜ ಅಥವಾ ಪಾಳೇಗಾರರ ಹೆಸರನ್ನೋ ಇಟ್ಟು ಉಲ್ಲೇಖಿಸುತ್ತಿದ್ದರು. ಆದರೆ ಚನ್ನಪಟ್ಟಣ ನಗರದ ಹೊರಭಾಗದಲ್ಲಿ ಈಗಲೂ ಇರುವ ಈ ಕೆರೆಯನ್ನು ಮಾತ್ರ ಕುಡಿನೀರು ಕಟ್ಟೆ ಎಂದೇ ಅಂದೂ ಮತ್ತು ಇಂದಿಗೂ ಸಂಬೋಧಿಸುತ್ತಲೇ ಬಂದಿರುವುದು ಮಾತ್ರ ಆ ನೀರು ಮತ್ತು ಕಟ್ಟೆಯ ವಿಶೇಷವೇ ಸರಿ.


ಕುಡಿನೀರು ಕಟ್ಟೆಯು ಬರಬರುತ್ತಾ ಕಿರಿದಾಗುತ್ತಾ ಬಂದಂತೆ ಅದರ ಹೆಸರೂ ಸಹ ಕುಡಿನೀರು ಕಟ್ಟೆಯ ಬದಲು ಕುನ್ನೀರ್ ಕಟ್ಟೆಯಾಗಿ ಬದಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಗಳೂರು ಮೈಸೂರು ಹೆದ್ದಾರಿ ಮತ್ತು ಎಪಿಎಂಸಿ ಮಾರುಕಟ್ಟೆಗೆಂದು ಒತ್ತುವರಿ ಮಾಡಿಕೊಂಡರೆ ಇತ್ತ ಕೆಲ ಬಲಾಢ್ಯರು ಸಹ ಮೂವತ್ತು ಗುಂಟೆಗೂ ಹೆಚ್ಚು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಸಹ ಒತ್ತುವರಿಯಾಗುತ್ತಿದ್ದಂತೆ ಎಚ್ಚೆತ್ತುಕೊಳ್ಳದಿರುವುದು ಅವರ ಮೇಲೆಯೇ ಸಾರ್ವಜನಿಕರು ಅನುಮಾನಪಡುವಂತಾಗಿದೆ.


ಈ ಹಿಂದೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶಿಲ್ದಾರ್ ಸುದರ್ಶನ್ ರವರಿಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ಒತ್ತುವರಿ ತೆರವುಗೊಳಿಸಲು ಮನವಿ ಮಾಡಿದ ನಂತರ ಸರ್ವೇ ಮಾಡಿಸಿ ಅಳತೆ ಕಲ್ಲು ನೆಡಿಸಿದ್ದರು. ನಂತರ ಬಂದ ತಹಶಿಲ್ದಾರ್ ನಾಗೇಶ್ ರವರು, ಒತ್ತುವರಿ ತೆರವುಗೊಳಿಸಲು ಮುಂದಡಿಯಿಡುವ ಮೊದಲೇ ಒತ್ತುವರಿದಾರರು, ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ತಾಲ್ಲೂಕು ಆಡಳಿತವೂ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಪತ್ರ ಬರೆದು ತಡೆಯಾಜ್ಞೆ ತೆರವುಗೊಳಿಸಲು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.


ಇನ್ನೂ ಕುಡಿಯುವ ನೀರಿನ ಕಟ್ಟೆ ಅಥವಾ ಕೆರೆಯ ರಸ್ತೆ ಬದಿ ಮತ್ತು ಏರಿಯ ಮೇಲೆ ನಿರ್ಮಿಸಿರುವ ಉದ್ಯಾನವನವಂತೂ ಪುಂಡುಪೋಕರಿಗಳ ತಾಣವಾಗಿ ಬದಲಾಗಿದೆ.


ಉದ್ಯಾನವನ್ನು ನಿರ್ಮಿಸಿದ ಹೊಸದರಲ್ಲಿ ಹಲವಾರು ಮಂದಿ ಮುಂಜಾನೆ ಮತ್ತು ಗೋಧೂಳಿ ಸಮಯದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಉದ್ಯಾನ ಮೇಲ್ವಿಚಾರಣೆ ಹೊತ್ತ ಇಲಾಖೆಯು ಕೈಚೆಲ್ಲಿರುವುದರಿಂದ ಇದ್ದೊಂದು ಕೊಠಡಿಯ ಮೇಲ್ಛಾವಣಿಯೂ ಹೊಡೆದು ಸೋರುತ್ತಿದೆ. ಕೊಠಡಿಯು ಅನೈತಿಕ ತಾಣವಾಗಿ, ಹೆಂಡ ಸಾರಾಯಿ ಸಿಗರೇಟು ಬೀಡಿಗಳ ಕಮಟು ವಾಸನೆಯಿಂದ ಗಬ್ಬು ನಾರುತ್ತಿದೆ.

ಸುಂದರ ಉದ್ಯಾನಕ್ಕೆಂದು ನೆಟ್ಟು ಬೆಳೆಸಿರುವ ಅಲಂಕಾರಿಕ ಗಿಡಗಳು ಬೆಳೆದು ನಿಂತಿದ್ದು, ವಾಯುವಿಹಾರಿಗಳು ನಡೆದು ಹೋಗದಷ್ಟು ದಟ್ಟವಾಗಿ ಬೆಳೆದು ನಿಂತಿವೆ.


ನಗರದಲ್ಲಿ ಬೆರಳೆಣಿಕೆಯ ಉದ್ಯಾನಗಳಿದ್ದು, ಎಲ್ಲವೂ ಸಹ ನಿರ್ವಹಣೆ ಇಲ್ಲದೆ, ಸಾರ್ವಜನಿಕರಿಗೆ ಉಪಯೋಗವಾಗದೆ ಪುಂಡುಪೋಕರಿಗಳ ತಾಣವಾಗುತ್ತಿರುವುದು ಚನ್ನಪಟ್ಟಣ ನಗರಿಗರ ದುರಾದೃಷ್ಟವೋ ಅಥವಾ ಇಲಾಖೆಗಳ ಬೇಜಾವಾಬ್ದಾರಿಯೋ ಇಲ್ಲ ಸ್ಥಳೀಯ ಜನಪ್ರತಿನಿಧಿಗಳ ಉಡಾಳತನವವೋ ಗೊತ್ತಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑