Tel: 7676775624 | Mail: info@yellowandred.in

Language: EN KAN

    Follow us :


ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

Posted date: 09 Nov, 2020

Powered by:     Yellow and Red

ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

ಚನ್ನಪಟ್ಟಣ:ನ/08/20/ಭಾನುವಾರ. ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ತಾಲ್ಲೂಕಿನ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಪರಮ ವೈರಿಯಾಗಿ ಪರಿಣಮಿಸಿದ್ದರಿಂದ, ಒಂದು ಸಾಮಾನ್ಯ ಸ್ಥಳೀಯ ಚುನಾವಣೆಯು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನೂ ಮೀರಸುವಂತೆ ಇಂದು ನಡೆದಿದ್ದು ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಿದೆ.


ಜೆಡಿಎಸ್ ಸ್ವಪಕ್ಷೀಯರ ಕಾದಾಟದಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಿಂಗರಾಜಪುರ ಪಿಎಸಿಎಸ್‍ನಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‍ಕುಮಾರ್ ಬಣ ಗೆಲುವಿನ ನಗೆಬೀರಿದ್ದಾರೆ.

ಸಂಘದ 11 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಬೆಂಬಲಿಗರಾದ ಜೆಡಿಎಸ್ ಪಕ್ಷ ಬೆಂಬಲಿತ 11 ಅಭ್ಯರ್ಥಿಗಳು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‍ಕುಮಾರ್ ಬಣದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಬೆಂಬಲಿತ 11 ಮಂದಿ ಹಾಗೂ ನಾಲ್ವರು ಪಕ್ಷೇತರರು ಕಣದಲ್ಲಿದ್ದರು. ಲಿಂಗೇಶ್ ಕುಮಾರ್ ಬಣವು ಜೆಡಿಎಸ್ ನ ಕೆಲವರು ಹಾಗೂ ಕಾಂಗ್ರೆಸ್, ಬಿಜೆಪಿ ಪಕ್ಷದವರನ್ನು ಒಲಿಸಿಕೊಳ್ಳುವುದರ ಜೊತೆಗೆ ಸ್ಥಳೀಯರಾಗಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ವಿಶ್ಲೇಷಿಸಬಹುದು.


ಎರಡೂ ಬಣದವರು ಸಹ ಮೂರು ದಿನಗಳು ಸಿಂಗರಾಜಪುರ ಗ್ರಾಮದಲ್ಲಿ ಬೀಡುಬಿಟ್ಟು, ಮತದಾರರು ಮತ್ತು ಸ್ಥಳೀಯ ನಾಯಕರಿಗೆ ಹತ್ತು ಹಲವು ಆಮಿಷಗಳನ್ನೊಡ್ಡಿ ತಂತಮ್ಮ ಬಲಾಬಲಗಳನ್ನು ಹತ್ತುಹಲವು ರೀತಿಯಲ್ಲಿ ನಿವೇದಿಸಿಕೊಂಡಿದ್ದರು. ಕೊನೆಯಲ್ಲಿ ಸ್ಥಳೀಯರಾದ ಲಿಂಗೇಶ್‍ಕುಮಾರ್ ಬಣದ 8 ಮಂದಿ ಆಯ್ಕೆಯಾಗುವ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಗೊಂಡರು.

ಜಯಮುತ್ತು ಬೆಂಬಲಿತ ತಂಡ ಮೂರು ಸ್ಥಾನಕ್ಕೆ ತೃಪ್ತಿಪಡುವಂತಾಯಿತು.


ಎಸ್ ಲಿಂಗೇಶ್‍ಕುಮಾರ್ ತಂಡದಿಂದ ಎಸ್.ಲಿಂಗೇಶ್‍ಕುಮಾರ್, ಶಂಕರೇಗೌಡ, ಪಿ.ಎಸ್. ಪುಟ್ಟಸ್ವಾಮಿಗೌಡ, ಕೃಷ್ಣೇಗೌಡ, ಬಿ.ಎಂ ಲತಾ, ಶ್ರೀನಿವಾಸ್, ಯು.ಎಸ್.ರವಿ, ಮುನಿಅಂಕಯ್ಯ ಗೆಲುವು ಸಾಧಿಸಿದರೆ, ಜಯಮುತ್ತು ತಂಡದಿಂದ ಪಿ.ಬಿ. ಭಾನುಪ್ರಸಾದ್, ರಾಧ, ಡಿ. ರಾಜೇಶ್ ಚುನಾಯಿತರಾಗಿದ್ದಾರೆ.


ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ಸ್ವಪಕ್ಷದ ನಾಯಕರಾದ ಜಯಮುತ್ತು ಮತ್ತು ಲಿಂಗೇಶ್‍ಕುಮಾರ್ ತೀವ್ರ ಸೆಣೆಸಾಟ ನಡೆಸಿದರು. ಅಂತಿಮವಾಗಿ ಲಿಂಗೇಶ್‍ಕುಮಾರ್ ತಮ್ಮ ತಂಡಕ್ಕೆ ಬಹುಮತ ತೆಗೆದುಕೊಳ್ಳುವಲ್ಲಿ ಯಶಸ್ವಿಗೊಂಡರು. ಲಿಂಗೇಶ್‍ಕುಮಾರ್‍ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ಸಾಥ್ ನೀಡಿದರು.

ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವ ಮಟ್ಟಿಗೆ ಪಿಎಸಿಎಸ್ ಚುನಾವಣೆ ನಡೆದಿದ್ದು ಕಂಡು ಬಂದಿತು. ಉಭಯ ತಂಡಗಳು ಗೆಲುವಿಗಾಗಿ ನಾನಾ ಕಸರತ್ತು ನಡೆಸಿದರು. ಬಿಗುವಿನ ವಾತಾವರಣದಲ್ಲಿ ಮತದಾನ ನಡೆದದ್ದು ಚುನಾವಣೆಯ ಕಾವಿಗೆ ಸಾಕ್ಷಿಯಂತಿತ್ತು. ಮತದಾನ ಪ್ರಕ್ರಿಯೆ ಮುಗಿದ ನಂತರ ನಡೆದ ಮತ ಎಣಿಕೆಯಲ್ಲಿ ಗೆಲುವು ಕಂಡ ಲಿಂಗೇಶ್‍ಕುಮಾರ್ ತಂಡ ಸಂಭ್ರಮಾಚರಣೆ ನಡೆಸಿದರು.


*ಸ್ಥಳದಲ್ಲೇ ಎಎಸ್‍ಪಿ ಮತ್ತು ನೂರಕ್ಕೂ ಹೆಚ್ಚು ಪೋಲೀಸರು ಮೊಕ್ಕಾಂ:*

ಸಹಕಾರ ಕ್ಷೇತ್ರದ ಪಿಎಸಿಎಸ್ ಚುನಾವಣೆಯೊಂದು ಈ ಮಟ್ಟಿನ ಜಿದ್ದಾಜಿದ್ದಿನಲ್ಲಿ ನಡೆದದ್ದು ತಾಲೂಕಿನಲ್ಲಿ ಇದೇ ಮೊದಲಾಗಿದ್ದು, ಎರಡು ತಂಡಗಳ ತೀವ್ರ ಪ್ರತಿಷ್ಠೆ, ಹಣ ಮತ್ತು ತೋಳ್ಬಲ ಕೆಲಸ ಮಾಡಬಹುದು ಎಂಬ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಾಡಿಸಲಾಗಿತ್ತು. ಮತದಾನ ಆರಂಭದಿಂದ ಹಿಡಿದು ಅಂತಿಮದವರೆಗೆ ಎಎಸ್‍ಪಿ ಕೆ. ರಾಮರಾಜನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಸಿಪಿಐಗಳಾದ ಸಿ.ವಸಂತ್, ಗೋವಿಂದರಾಜು, ಪಿಎಸ್‍ಐಗಳಾದ ರವೀಂದ್ರ, ಕುಮಾರಸ್ವಾಮಿ, ಸರಸ್ವತಿ ಸೇರಿದಂತೆ 100 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನೀಡಿದರು.


ಅಭಿನಂದನೆ: ಚುನಾವಣೆಯಲ್ಲಿ ಬಹುಮತ ಗಳಿಸಲು ಯಶಸ್ವಿಯಾದ ಲಿಂಗೇಶ್‍ಕುಮಾರ್ ಮತ್ತು ತಂಡವನ್ನು ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಜೆಡಿಎಸ್ ಮುಖಂಡ ಸಿಂಗರಾಜಪುರ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಮಂಗಾಡಹಳ್ಳಿ ರಾಜಣ್ಣ, ಬೋರೆವೆಲ್ ರಂಗನಾಥ್, ಪಿ.ಡಿ.ರಾಜು, ಭೂಹಳ್ಳಿ ನಿಂಗೇಗೌಡ, ಹನುಮಂತು, ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑