ಮಣಪ್ಪುರಂ ಗ್ರಾಹಕರೇ ಎಚ್ಚರ! ಕಂಪನಿಯ ಕೆಲ ಉದ್ಯೋಗಿಗಳಾಗಿದ್ದಾರೆ ಖದೀಮರು ?
ಚನ್ನಪಟ್ಟಣ:ನ/14/20/ಸೋಮವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಯ ಕೆಲ ಉದ್ಯೋಗಿಗಳಿಂದಲೇ ಗ್ರಾಹಕರಿಗೆ ದೋಖಾ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.
ಇತ್ತೀಚಿಗೆ ನಾಗವಾರ ಗ್ರಾಮದ ಗ್ರಾಹಕರೊಬ್ಬರು ಬಿಜೆಪಿ ಮುಖಂಡರೊಡಗೂಡಿ ಪ್ರತಿಭಟನೆ ನಡೆಸಿದ ನಂತರ ಅದರ ಜಾಡು ಹಿಡಿದು ಹೊರಟಾಗ ಹಲವಾರು ಗ್ರಾಹಕರಿಗೆ ಕೆಲ ಉದ್ಯೋಗಿಗಳೇ ದೋಖಾ ಮಾಡಿರುವುದು, ಅದು ಅವರಿಗೆ ತಿಳಿದ ನಂತರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು. ಅವರು ಒಪ್ಪದಿದ್ದರೆ ಅವರಿಗೆ ಆತ್ಮೀಯರಾಗಿರುವವರ ಜೊತೆ ಸಂಧಾನ, ಅದಕ್ಕೂ ಗ್ರಾಹಕರು ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುವ ತಂತ್ರ ಬಳಸುತ್ತಿದ್ದಾರೆ ಎಂಬುದನ್ನು ಗ್ರಾಹಕರು ತಿಳಿಸಿದ್ದಾರೆ.
ನಾಗವಾರ ಗ್ರಾಮದ ಇಬ್ಬರು, ರಾಂಪುರ ಗ್ರಾಮದ ಓರ್ವ, ಸೋಮನಾಥಪುರ ಒಬ್ಬರು ಸೇರಿದಂತೆ ಇನ್ನೂ ಹೆಸರೇಳಲಿಚ್ಚಿಸದ ಕೆಲವು ಗ್ರಾಹಕರು ಈ ರೀತಿಯ ಮೋಸಕ್ಕೊಳಗಾಗಿರುವುದಾಗಿ ನಮ್ಮ ಕಛೇರಿಗೆ ಕೆಲ ದಾಖಲೆಗಳೊಂದಿಗೆ ಖುದ್ದು ಬಂದು ಹೇಳಿಕೆ ನೀಡಿದ್ದಾರೆ.
ತಮ್ಮ ಒಡವೆಗಳನ್ನು ಗಿರವಿ ಇಡಲು ಬಂದ ಗ್ರಾಹಕರ ಕಷ್ಟದ ಹಿನ್ನೆಲೆ, ಅವರ ಅಮಾಯಕತನವನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲ ಸಿಬ್ಬಂದಿಗಳು ಗ್ರಾಹಕರಿಗೆ ಕೊಡುವ ಮೊತ್ತವೇ ಬೇರೆಯಾದರೆ, ಮೊಬೈಲ್ ಓಟಿಪಿ ಪಡೆದು ನಮೂದಿಸುವ ಮೊತ್ತವೇ ಬೇರೆಯಾಗಿರುತ್ತದೆ. ಇನ್ನೂ ಆಶ್ಚರ್ಯವೆಂದರೆ ಕೆಲ ಗ್ರಾಹಕರು ಗಿರವಿ ಇಟ್ಟ ಒಡವೆಗಳನ್ನು ಕಂಪ್ಯೂಟರ್ ನಲ್ಲಿ ದಾಖಲಾಗಿರುವ ದಾಖಲೆಗಳ ನಕಲು ಮಾಡಿ ಗ್ರಾಹಕರ ಸಹಿಯನ್ನು ಸಹ ನಕಲು ಮಾಡಿ ಇವರೇ ಬಿಡಿಸಿಕೊಂಡು ಉಂಡೆನಾಮ ತಿಕ್ಕಿರುವ ಉದಾಹರಣೆಗಳೂ ಸಹ ಸಾಕಷ್ಟಿವೆಯೆಂದು ಬಲ್ಲ ಮೂಲಗಳು ದೃಢಪಡಿಸಿವೆ.
ಮುಖ್ಯ ವ್ಯವಸ್ಥಾಪಕಿಯ ಸಹೋದರಿ ಸೇರಿದಂತೆ ಆಕೆಯ ಆಪ್ತ ವರ್ಗದ ಕೆಲವರ ಹೆಸರಿನಲ್ಲಿ ಒಂದು ವರ್ಷದ ಅವಧಿಯಲ್ಲಿ 60 ಲಕ್ಷ ರೂಪಾಯಿಗಳಿಗೂ ಹೆಚ್ಚು ವಹಿವಾಟು ನಡದಿರುವುದು, ಇವರ ತಿಂಗಳ ಸಂಬಳವೇ 10 ಸಾವಿರ ದಿಂದ 25 ಸಾವಿರದೊಳಗಿದ್ದು ಲಕ್ಷಾಂತರ ವಹಿವಾಟು ನಡೆದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.
ಕೆಲ ಗ್ರಾಹಕರ ದೂರಿನ ಮೇರೆಗೆ ಆಂತರಿಕ ತನಿಖೆ ಕೈಗೊಂಡ ಕಂಪನಿಯು ಬ್ರಾಂಚ್ ವ್ಯವಸ್ಥಾಪಕಿಯೊಬ್ಬರು ಸೇರಿದಂತೆ ಬಹುತೇಕ ಸಿಬ್ಬಂದಿಗಳನ್ನು ಹಿಂಬಡ್ತಿ ನೀಡಿ ಬೆಂಗಳೂರಿನ ಕಛೇರಿಗೆ ವರ್ಗಾಯಿಸಿರುವುದು ಈ ಮೇಲಿನ ದೋಖಾಗಳು ನಡೆದಿರುವಿದು ಸತ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.
ಇದರ ಬಗ್ಗೆ ಏರಿಯಾ ಮ್ಯಾನೇಜರ್ ನ್ನು ದೂರವಾಣಿ ಮೂಲಕ ಹಲವಾರು ಬಾರಿ ಸಂಪರ್ಕಿಸಿ ಮಾಹಿತಿ ಕೇಳಿದ್ದು, ಈಗಾಗಲೇ ಬ್ರಾಂಚ್ ಮ್ಯಾನೇಜರ್ ಸುಮಲತಾ ಸಮೇತ, ಎಲ್ಲಾ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡಿರುವುದಾಗಿಯೂ, ಕಂಪನಿಯ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿ ಒದಗಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಏನಾದರಾಗಲಿ ಗ್ರಾಹಕರೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಬ್ಯಾಂಕುಗಳಲ್ಲಿ ತಮ್ಮ ಒಡವೆಗಳನ್ನು ಅಡವಿಟ್ಟು ತಮ್ಮ ಒಡವೆಗಳನ್ನು ಜೋಪಾನವಾಗಿಸಿಕೊಳ್ಳಿ. ಇಲ್ಲವಾದರೆ ಒಡವೆಯನ್ನು ಕಳೆದುಕೊಳ್ಳಬೇಕಾದ ಸ್ತಿತಿ ನಿಮ್ಮದಾಗಬಹುದು ಜೋಪಾನ.
ಗೋ ರಾ ಶ್ರೀನಿವಾಸ...
ಮೊ:9845856139.
ಗೋ ರಾ ಶ್ರೀನಿವಾಸ...
ಮೊ:9845856139
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು