ಕೆಪಿಎಸ್ಸಿ ಯಲ್ಲಿ ನಡೆದಿದೆಯಾ ಅಕ್ರಮ ? ವೈರಲ್ ಆದ ಆಡಿಯೋ. ಏನಿದು ಪ್ರಕರಣ ?
ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಮಯದಲ್ಲಿ ಕೆಲವು ಬದಲಾವಣೆ ಜೊತೆಗೆ ಸದಸ್ಯರುಗಳು ಸಹ ಬದಲಾವಣೆಗೊಂಡಿದ್ದರು. ಆ ಬದಲಾವಣೆ ಸಮಯದಲ್ಲಿ ತಾಲ್ಲೂಕಿನ ಸ್ವಚ್ಛ ರಾಜಕಾರಣಿ ಎಂದು ಹೆಸರಾದ ರಘುನಂದನ್ ರಾಮಣ್ಣ ಸಹ ಕೆಪಿಎಸ್ಸಿ ಸದಸ್ಯರಾಗಿ ಸೇರ್ಪಡೆಯಾದರು. ಅವರ ಅವಧಿ ಸಮೀಪದಲ್ಲಿಯೇ ಇದೆ. ಇಂತಹ ಸಮಯದಲ್ಲಿ ಅದೇ ಹಳೆಯ ಆರೋಪಗಳು ಪದೆಪದೇ ಕೇಳಿಬರುತ್ತಿವೆ. ಇದೀಗ, ಕೆಪಿಎಸ್ಸಿ ಸದಸ್ಯರಾಗಿರುವ ತಾಲೂಕಿನ ರಘುನಂದನ್ ರಾಮಣ್ಣನವರು ಅಕ್ರಮ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತಹ ಆಡಿಯೋವೊಂದು ತಾಲೂಕಿನಾದ್ಯಂತ ವೈರಲ್ ಆಗಿದೆ.
ಕೆಪಿಎಸ್ಸಿ ಸದಸ್ಯರಾಗಿರುವ ತಾಲೂಕಿನ ರಘುನಂದನ್ ರಾಮಣ್ಣನವರು ಎಸಿ (Assistant Commissioner) ಹುದ್ದೆ ಕೊಡಿಸುವ ಸಲುವಾಗಿ ತಮ್ಮ ಬೆಂಬಲಿಗರಾದ ಪಿ.ಡಿ.ರಾಜು ಹಾಗೂ ಎಸ್.ಆರ್ ಪ್ರಮೋದ್ ಎಂಬುವವರ ಮೂಲಕ ಹಣ ಪಡೆದಿದ್ದಾರೆ ಎನ್ನುವ ಆರೋಪದ ಸಂದೇಶ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಣ ನೀಡಿರುವ ವ್ಯಕ್ತಿಯಾದ ರಾಂಪುರ ಗ್ರಾಮದವರೆನ್ನಲಾದ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮೀಷನರ್ ಹುದ್ದೆಯಿಂದ ನಿವೃತ್ತರಾಗಿರುವ ವೆಂಕಟೇಗೌಡ ಎಂಬುವವರು ಮತ್ತು ತಾಲೂಕು ಕಾಂಗ್ರೆಸ್ ಮುಖಂಡ ಎ.ಸಿ.ವಿರೇಗೌಡ ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
*ಸಂಭಾಷಣೆಯ ವಿವರ*
ಕೆಪಿಸಿಎಸ್ ಸದಸ್ಯ ಹಾಗೂ ಮುಂಬರುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಘುನಂದನ್ ರಾಮಣ್ಣನ ಭ್ರಷ್ಠಾಚಾರ ಅನಾವರಣ. ರಾಂಪುರದ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಗೌಡರ ಹತ್ತಿರ ಒಂದು ಕೋಟಿ ಹಣ ತೆಗೆದುಕೊಂಡು ಅವರ ಮಗಳಿಗೆ ಎಸಿ ಕೆಲಸ ಕೊಡಿಸದೆ ವಂಚನೆ ನಡೆಸಲಾಗಿದೆ. ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಹಾಗೂ ನಗರಸಭೆ ಮಾಜಿ ಸದಸ್ಯ ಪಿಡಿ ರಾಜು ರವರು ಈ ಹಣ ತೆಗೆದುಕೊಂಡಿದ್ದಾರೆ. ಹಣ ಪಡೆದು ಕೆಲಸ ಕೊಡಿಸದೇ ವೆಂಕಟೇಗೌಡರಿಗೆ ವಂಚನೆ ಮಾಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂಬ ಆಗ್ರಹ ಸಂದೇಶದಲ್ಲಿದೆ. ಇದರ ಜೊತೆಗೆ, ಕೆಪಿಎಸ್ಸಿ ಆಕ್ರಮಗಳ ಬಗ್ಗೆಯೂ ಉನ್ನತಮಟ್ಟದ ತನಿಖೆಯಾಗಬೇಕು ಎಂಬ ಬರಹವಿದೆ.
ಇದರೊಂದಿಗೆ ಹಣ ನೀಡಿದ್ದಾರೆ ಎನ್ನಲಾದ ವೆಂಕಟೇಗೌಡ ಮತ್ತು ಕಾಂಗ್ರೆಸ್ ಮುಖಂಡರಾದ ಎ.ಸಿ.ವಿರೇಗೌಡ
ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ಎ.ಸಿ ಹುದ್ದೆ ಕೊಡಿಸುವ ನೆಪದಲ್ಲಿ ರಘುನಂದನ್ ರಾಮಣ್ಣನವರು ತಮ್ಮ ಅನುಯಾಯಿಗಳ ಮೂಲಕ ಹಣ ವಸೂಲಿ ನಡೆಸಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಆರೋಪ ಹಾಗೂ ಆಡಿಯೋ ಬಗ್ಗೆ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಾಗಿದೆ.
ಹಣ ನೀಡಿದ್ದಾರೆ ಎನ್ನಲಾದ ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಗೌಡ ಈ ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿ, ಈ ಆರೋಪವನ್ನು ನಿರಾಕರಸಿದ್ದಾರೆ. ಈ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಈ ಸಂಬಂಧಪಟ್ಟಂತೆ ನಾನು ಯಾರ ಜೊತೆಯೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
*ಕಾಂಗ್ರೆಸ್ ಒಳಜಗಳವೇ?*
ಈ ಆಡಿಯೋ ಹಾಗೂ ಆರೋಪದ ಹಿಂದೆ ಕಾಂಗ್ರೆಸ್ ಒಳಜಗಳವಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಕೆಪಿಎಸ್ಸಿ ಸದಸ್ಯರಾಗಿರುವ ರಘುನಂದನ್ ರಾಮಣ್ಣನವರ ಅವಧಿ ಇದೇ ತಿಂಗಳು ಮುಕ್ತಾಯವಾಗಲಿದೆ. ತದನಂತರ, ಅವರು ಮತ್ತೇ ತಾಲೂಕು ರಾಜಕಾರಣಕ್ಕೆ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್ನ ಮತ್ತೊಂದು ಗುಂಪು ನಡೆಸಿರುವ ಚಿತಾವಣೆ ಎಂಬುದು ರಘುನಂದನ್ ಬೆಂಬಲಿಗರ ಮಾತಾಗಿದೆ. ಇತ್ತೀಚಿಗೆ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಮೋದ್ ಹೆಸರಿಗೆ ಮಸಿ ಬಳಿಯುವುದು ಹಾಗೂ ರಘುನಂದನ್ ಹೆಸರಿಗೆ ತೇಜೋವಧೆ ಮಾಡಲು ಸ್ವಪಕ್ಷೀಯರೇ ನಡೆಸಿರುವ ಕುತಂತ್ರ ಎಂಬ ಮಾತುಗಳು ಕೇಳಿಬಂದಿವೆ.
ಕೆಲಸ ಕೊಡಿಸಲು ರಘುನಂದನ್ ರಾಮಣ್ಣನವರು ನನ್ನ ಹಾಗೂ ಪ್ರಮೋದ್ ಮುಖಾಂತರ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪ ಶುದ್ಧಸುಳ್ಳು. ಕೆಪಿಎಸ್ಸಿ ಸದಸ್ಯರಾಗಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಘುನಂದನ್ರವರ ಹೆಸರಿಗೆ ಕಳಂಕ ತರಲು ನಡೆಸಿರುವ ಷಡ್ಯಂತ್ರ್ಯವಿದು. ಅವರ ಅಧಿಕಾವಧಿ ಮುಕ್ತಾಯವಾಗುತ್ತಿದ್ದು, ಸಕ್ರಿಯ ರಾಜಕಾರಣಕ್ಕೆ ಮರಳುವುದು ನಮ್ಮ ಪಕ್ಷದ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರಾಧಾರದ ಸುದ್ದಿಗಳು ಹರಿಬಿಡುತ್ತಿದ್ದಾರೆ.
ಪಿಡಿ ರಾಜು, ನಗರಸಭೆ ಮಾಜಿ ನಾಮಿನಿ ಸದಸ್ಯ ಹೇಳಿಕೆ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು