Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ, ಚನ್ನಪಟ್ಟಣ ನಗರಸಭೆಗೆ ಡೇಟ್ ಫಿಕ್ಸ್

Posted date: 31 Mar, 2021

Powered by:     Yellow and Red

ರಾಮನಗರ, ಚನ್ನಪಟ್ಟಣ ನಗರಸಭೆಗೆ ಡೇಟ್ ಫಿಕ್ಸ್

ಕಳೆದ ಎರಡು ವರ್ಷಗಳಿಂದ ಮೀಸಲಾತಿಯ ಗೊಂದಲದಿಂದ ನೆನಗುದಿಗೆ ಬಿದ್ದಿದ್ದ ಚನ್ನಪಟ್ಟಣ ಹಾಗು ರಾಮನಗರ ನಗರಸಭೆಯ ಚುನಾವಣೆಗೆ ಈಗ ಮುಕ್ತಿ ದೊರಕಿದೆ. ಏಪ್ರಿಲ್ 27 ಕ್ಕೆ ಎರಡೂ ಕಡೆ ಚುನಾವಣೆ ಯನ್ನು ಸರ್ಕಾರ ಘೋಷಣೆ ಮಾಡಿದೆ.


ಆರಂಭಕ್ಕೆ ಎರಡೂ ಕಡೆ ಮೀಸಲಾತಿಯನ್ನು ನ್ಯಾಯ ಸಮ್ಮತವಾಗಿ ಮಾಡಿಲ್ಲ ಎಂಬ ವಿಷಯ ಹಿಡಿದು ಕೊಂಡು ಚುನಾವಣೆಯ ಮುಂದೂಡಿಕೆಗೆ ಕಾರಣವಾಗಿತ್ತು.

ಈ ವಿಷಯದಲ್ಲಿ ನ್ಯಾಯಾಲಯ ಮೀಸಲಾತಿಯನ್ನು ಪರಿಷ್ಕರಿಸಿ ಅಧಿಕೃತ ಪಟ್ಟಿಯನ್ನು ಸಲ್ಲಿಸಲು ಪೌರಾಡಳಿತ ಸಚಿವಾಲಯಕ್ಕೆ ಹಿಂದಿರುಗಿಸಿತ್ತು. ಸರ್ಕಾರ ಪರಿಷ್ಕರಿಸಿ, ಪಟ್ಟಿಯನ್ನು ಸಲ್ಲಿಸಿದ ನಂತರ ಸಮಗ್ರವಾಗಿ ಪರಿಶೀಲಿಸಿದ ನಂತರ ಒಪ್ಪಿ ಕಳುಹಿಸಿ ಕೊಟ್ಟಿದೆ.


ಈಗ ರಾಜ್ಯದ 6 ನಗರ ಸಭೆಗಳು, 3 ಪುರಸಭೆಗಳು ಹಾಗೂ 2 ಪಟ್ಟಣ ಪಂಚಾಯ್ತಿಗಳಿಗೆ ಏಪ್ರಿಲ್ 27 ನ್ನು ಚುನಾವಣೆ ದಿನಾಂಕವಾಗಿ ಘೋಷಿಸಲಾಗಿದೆ.

ರಾಮನಗರ ಜಿಲ್ಲಾಧಿಕಾರಿಗಳು ಏಪ್ರಿಲ್ 8 ರಂದು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದ್ದಾರೆ. ಏಪ್ರಿಲ್ 8 ರಿಂದ ನಾಮಪತ್ರ ಸಲ್ಲಿಸಬಹುದು, ಏಪ್ರಿಲ್ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿವಸವಾಗಿರಲಿದೆ.


ಏಪ್ರಿಲ್ 16 ನಾಮಪತ್ರ ಗಳ ಪರಿಶೀಲನೆ, ಏಪ್ರಿಲ್ 19 ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 27 ಮತದಾನ, ಏಪ್ರಿಲ್ 29 ಅಗತ್ಯ ಬಿದ್ದ ವಾರ್ಡ್‌ ಗಳಲ್ಲಿ ಮರು ಮತದಾನ, ಏಪ್ರಿಲ್ 30 ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಿಸಿಲಾಗಿದೆ.


ನಿಧಾನಕ್ಕೆ ಬಿರುಸುಗೊಳ್ಳುತ್ತಿರುವ ಚಟುವಟಿಕೆ

ಈಗಿನ ಮಾಹಿತಿ ಯಂತೆ ಜೆಡಿಎಸ್‌ನ ಕುಮಾರಸ್ವಾಮಿಯವರು ಈಗಾಗಲೇ ತಮ್ಮ ಕೇತಿಗಾನಹಳ್ಳಿ ತೊಟದ ಮನೆಯಲ್ಲಿ ಸಭೆ ಕರೆದು ಚರ್ಚಿಸಿದ್ದಾರೆ.

ನಗರಸಭೆಯ ಚುನಾವಣೆಯ ಸುಳಿವು ಸಿಕ್ಕ ನಂತರ, ಯೋಗೇಶ್ವರ್ ಕೋವಿಡ್ ಲಸಿಕೆ ಪಡೆಯುವ ನೆಪದಲ್ಲಿ ಊರಿಗೆ ಬಂದು ಮಂಡಿ ಪೇಟೆಯ ಕಾಮನ ಉತ್ಸವದ ಕಡೆಗೂ ಹೋಗಿ ಬಂದಿದ್ದಾರೆ.

ಅವರ ಸೈರನ್ ಗಾಡಿಯು ಚುನಾವಣೆಯ ಸೂಚನೆಯನ್ನು ನೀಡಿ ಹೋಗಿದೆ. ಇನ್ನು ಕಾಲ ಇಲ್ಲ, ಎಂಟು ದಿವಸಗಳಲ್ಲಿ ಯಾರ‍್ಯಾರು ಸ್ಪರ್ಧಾಳುಗಳು ಎಂದು ಗುರುತಿಸಿಕೊಂಡು ನಾಮಪತ್ರ ಸಲ್ಲಿಸಲು ಅಣಿಯಾಗಬೇಕಾಗಿದೆ.


*ಡಿ.ಕೆ ಸಹೋದರರ ಮಾತೇ ಅಂತಿಮ*

ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವುದರಲ್ಲಿ ಡಿ.ಕೆ ಶಿವಕುಮಾರ್ ಅವರದೇ ಅಂತಿಮ ನಿರ್ಧಾರ.

ಒಂದು ಕಡೆ ಲೋಕಸಭೆ ಚುನಾವಣೆ ಮತ್ತೊಂದು ಕಡೆ ವಿಧಾನಸಭಾ ಉಪ ಚುನವಣೆ, ಇವೆಲ್ಲವುಗಳನ್ನೂ ಗಮನದಲ್ಲಿರಿಸಿಕೊಂಡು, ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಹಿಂದಿಕ್ಕಬಲ್ಲ ಶಕ್ತಿಯು ಇರುವವರಿಗೆ ಅವಕಾಶ ಕೊಟ್ಟು ಗೆಲ್ಲಿಸಬೇಕು.

ಇಷ್ಟರ ನಂತರವೂ ಸಹ ಆಂತರಿಕವಾದ ಹೊಂದಾಣಿಕೆಯಾದರೆ ಹೇಳಲಾಗದು.


ರಾಮನಗರ ನಗರಸಭೆ ಮೀಸಲಾತಿ ಪಟ್ಟಿ

ವಾರ್ಡ್ 1-ಪರಿಶಿಷ್ಟ ಜಾತಿ ಮಹಿಳೆ, ವಾಡ್ 2- ಪರಿಶಿಷ್ಟ ಜಾತಿ, ವಾರ್ಡ್ 3- ಪರಿಶಿಷ್ಠ ಜಾತಿ ಮಹಿಳೆ, ವಾಡ್ 4- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 5- ಸಾಮಾನ್ಯ, ವಾರ್ಡ್ 6- ಪರಿಶಿಷ್ಟ ಜಾತಿ, ವಾರ್ಡ್ 7- ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ್ 8- ಸಾಮಾನ್ಯ ಮಹಿಳೆ. ವಾಡ್೯ 9- ಹಿಂದುಳಿದ ವರ್ಗ (ಎ), ವಾರ್ಡ್ 10- ಸಾಮಾನ್ಯ ಮಹಿಳೆ, ವಾರ್ಡ್ 11- ಹಿಂದುಳಿದ ವರ್ಗ ಬಿ, ವಾರ್ಡ್ 12- ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 13- ಸಾಮಾನ್ಯ, ವಾರ್ಡ್ 14- ಸಾಮಾನ್ಯ, ವಾರ್ಡ್ 15- ಸಾಮಾನ್ಯ ಮಹಿಳೆ, ವಾರ್ಡ್ 16- ಹಿಂದುಳಿದ ವರ್ಗ ಎ, ವಾರ್ಡ್ 17- ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 18- ಸಾಮಾನ್ಯ, ವಾರ್ಡ್ 19- ಸಾಮಾನ್ಯ, ವಾರ್ಡ್ 20- ಸಾಮನ್ಯ ಮಹಿಳೆ, ವಾರ್ಡ್ 21- ಪರಿಶಿಷ್ಟ ಜಾತಿ, ವಾರ್ಡ್ 22- ಹಿಂದುಳಿದ ವರ್ಗ ಎ, ವಾರ್ಡ್ 23- ಸಾಮಾನ್ಯ, ವಾರ್ಡ್ 24- ಸಾಮನ್ಯ ಮಹಿಳೆ, ವಾರ್ಡ್ 25- ಹಿಂದುಳಿದ ವರ್ಗ ಎ, ವಾರ್ಡ್ 26-ಪರಿಶಿಷ್ಟ ಪಂಗಡ, ವಾರ್ಡ್ 27- ಸಾಮಾನ್ಯ ಮಹಿಳೆ, ವಾರ್ಡ್ 28-ಸಾಮಾನ್ಯ. ವಾರ್ಡ್ 29-ಸಾಮಾನ್ಯ, ವಾರ್ಡ್ 30- ಸಾಮಾನ್ಯ ಮಹಿಳೆ, ವಾರ್ಡ್ 31- ಸಾಮಾನ್ಯ ಮಹಿಳೆ.


*ಚನ್ನಪಟ್ಟಣ ನಗರಸಭೆ ಮೀಸಲಾತಿ*

ವಾರ್ಡ್ 1- ಬಿಸಿಎಂ(ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ 3- ಬಿಸಿಎಂ(ಬಿ) ಮಹಿಳೆ, ವಾರ್ಡ್ 4- ಸಾಮಾನ್ಯ, ವಾರ್ಡ್ 5- ಬಿಸಿಎಂ(ಎ), ವಾರ್ಡ್ 6- ಸಾಮಾನ್ಯ ಮಹಿಳೆ, ವಾರ್ಡ್ 7- ಬಿಸಿಎಂ(ಬಿ), ವಾರ್ಡ್ 8- ಬಿಸಿಎಂ(ಎ) ಮಹಿಳೆ, ವಾರ್ಡ್ 9- ಸಾಮಾನ್ಯ, ವಾರ್ಡ್ 10- ಸಾಮಾನ್ಯ ಮಹಿಳೆ, ವಾರ್ಡ್ 11- ಬಿಸಿಎಂ(ಎ), ವಾರ್ಡ್ 12- ಎಸ್ಸಿ, ವಾರ್ಡ್ 13- ಎಸ್ಟಿ, ವಾರ್ಡ್ 14- ಎಸ್ಸಿ, ವಾರ್ಡ್ 15- ಸಾಮಾನ್ಯ ಮಹಿಳೆ, ವಾರ್ಡ್ 16- ಬಿಸಿಎಂ(ಎ) ಮಹಿಳೆ, ವಾರ್ಡ್-17- ಸಾಮಾನ್ಯ, ವಾರ್ಡ್ 18- ಸಾಮಾನ್ಯ, ವಾರ್ಡ್ 19-ಸಾಮಾನ್ಯ ಮಹಿಳೆ. ವಾರ್ಡ್ 20- ಬಿಸಿಎಂ(ಎ), ವಾರ್ಡ್ 21- ಸಾಮನ್ಯ, ವಾರ್ಡ್ 22-ಸಾಮಾನ್ಯ, ವಾರ್ಡ್ 23- ಬಿಸಿಎಂ(ಎ), ವಾರ್ಡ್ 24- ಸಾಮಾನ್ಯ, ವಾರ್ಡ್ 25-ಸಾಮಾನ್ಯ ಮಹಿಳೆ, ವಾರ್ಡ್ 26-ಎಸ್ಸಿ, ವಾರ್ಡ್ 27- ಸಾಮಾನ್ಯ ಮಹಿಳೆ, ವಾರ್ಡ್ 28- ಸಾಮಾನ್ಯ ಮಹಿಳೆ, ವಾರ್ಡ್ 29- ಎಸ್ಸಿ ಮಹಿಳೆ, ವಾರ್ಡ್ 30- ಎಸ್ಸಿ ಮಹಿಳೆ, ವಾರ್ಡ್ 31- ಸಾಮಾನ್ಯ ಮಹಿಳೆ. ಮೀಸಲಾತಿ ಪ್ರಕಟಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑