ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ವೇಳಾಪಟ್ಟಿ ಬಿಡುಗಡೆ
ಚನ್ನಪಟ್ಟಣ: ರಾಜ್ಯ ಚುನಾವಣಾ ಅಧಿಕಾರಿಗಳ ಆದೇಶದ ಮೇರೆಗೆ ಚನ್ನಪಟ್ಟಣ ತಾಲ್ಲೂಕು ಕಛೇರಿಯಲ್ಲಿ ನಗರದ ನೋಡಲ್ ಅಧಿಕಾರಿ ಆನಂದ ಚಿ ಕಲ್ಲೋಳ್ಕರ್, ಗ್ರಾಮಾಂತರ ನೋಡಲ್ ಅಧಿಕಾರಿ ಇ ಒ ರಾಮಕೃಷ್ಣ ರವರು ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.
17/04/2018 ನೇ ಮಂಗಳವಾರದಿಂದ 24/04/2018 ನೇ ಮಂಗಳವಾರದ ತನಕ ನಾಮಪತ್ರ ಸಲ್ಲಿಕೆ, ಅಂದೇ ಕೊನೆಯ ದಿನ, 25/04/18 ಬುಧವಾರ ನಾಮಪತ್ರ ಪರಿಶಿಲನೆ, 27/04/18 ನೇ ಶುಕ್ರವಾರ ನಾಮಪತ್ರ ಹಿಂಪಡೆಯುವ ದಿನವಾಗಿರುತ್ತದೆ.
01/05/18 ನೇ ಮಂಗಳವಾರ ಮೊದಲ ಹಂತದ ತರಬೇತಿ, 06/05/18 ನೇ ಭಾನುವಾರ ಇ ವಿ ಎಂ ತಯಾರಿ, 07/05/18 ನೇ ಸೋಮವಾರ ಮತ್ತು ಮಂಗಳವಾರ ಎರಡನೇ ಹಂತದ ತರಬೇತಿ, ಪಿ ಅರ್ ಓ, ಎ ಪಿ ಆರ್ ಓ, ಮೊದಲ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ ಮತ್ತು ಮೂರನೇ ಮತಗಟ್ಟೆ ಅಧಿಕಾರಿ.
09/05 ಬುಧವಾರ 10/05 ಗುರುವಾರ ಮಾರ್ಕಿಂಗ್ ಕಾಫಿ, ಮಸ್ಟರಿಂಗ್ ಸಿದ್ಧತೆ.
11/05 ಶುಕ್ರವಾರ ಮಸ್ಟರಿಂಗ್, 12/05 ಶನಿವಾರ ಪೋಲಿಂಗ್ ಮತ್ತು ಡಿಮಸ್ಟರಿಂಗ್ ದಿನ, 13/05 ಭಾನುವಾರ ಚುನಾವಣಾ ವೀಕ್ಷಕರ ಪರಿಶೀಲನೆ, 14/05 ಸೋಮವಾರ ಎಣಿಕೆ ತರಬೇತಿ, 15/05 ಮಂಗಳವಾರ ಮತ ಎಣಿಕೆ ದಿನ, ಹಾಗೂ 18/05/2018 ನೇ ಶುಕ್ರವಾರ ಚುನಾವಣಾ ಮುಕ್ತಾಯದ ಹಿಂದಿನ ದಿನವಾಗಿರುತ್ತದೆ ಅಲ್ಲಿಯ ತನಕ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋಲೂರು ಗೇಟ್, ಕುಂಬಾರಕಟ್ಟೆ, ಜಗದಾಪುರ ಮತ್ತು ಮಾಕಳಿ ಗ್ರಾಮದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿಲಾಗಿದೆ,
ಪ್ರತಿ ಚೆಕ್ ಪೋಸ್ಟ್ ಗಳಲ್ಲಿಯೂ ಪೋಲಿಸರ ಜೊತೆಗೆ ತಪಾಸಣಾ ಅಧಿಕಾರಿ ಮತ್ತು ವಿಡಿಯೋ ಚಿತ್ರಿಕರಣಕಾರರು ಇರುತ್ತಾರೆ, ದಿನದ ಇಪ್ಪತ್ತಾಲ್ಕು ಗಂಟೆಗಳ ಕಾಲ ಎಂಟು ಗಂಟೆಗಳ ಒಂದೊಂದು ಗುಂಪು ಕೆಲಸ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಚನ್ನಪಟ್ಟಣ ನಗರಕ್ಕೆ ಸಂಬಂಧಿಸಿದಂತೆ ನಗರಸಭೆಯ ಆಯುಕ್ತ ಡಾ ಆನಂದ ಚಿ ಕಲ್ಲೋಳ್ಕರ್ ರವರು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ, ಬೆಳಿಗ್ಗೆ ಏಳರಿಂದ ಸಂಜೆ ಏಳು ಗಂಟೆ ಹಾಗೂ ಸಂಜೆ ಏಳು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆಯವರೆಗೆ ಎರಡು ಗುಂಪುಗಳು ಕಾರ್ಯನಿರ್ವಹಿಸುತ್ತಾರೆ, ಮೊದಲ ಗುಂಪಿನಲ್ಲಿ (ಎ ಡಿ) ಜಯರಾಮರವರ ಜೊತೆ ವಿಡಿಯೋ ಗ್ರಾಫರ್ ಸೇರಿದಂತೆ ಎಂಟು ಮಂದಿ ಎರಡನೇ ಗುಂಪಿನಲ್ಲಿ ಅಶೋಕ್ (ಎಇ) ವಿಡಿಯೋ ಗ್ರಾಫರ್ ಸೇರಿದಂತೆ ಆರು ಮಂದಿ ಕಾರ್ಯನಿರ್ವಹಿಸುತ್ತಾರೆ.
ಗ್ರಾಮೀಣ ಭಾಗದಲ್ಲಿ ರಾಮಕೃಷ್ಣ (ಇಒ) ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ, ಅವರ ನೇತೃತ್ವದಲ್ಲಿ ಹೋಬಳಿಗೆ ಎರಡು ಗುಂಪುಗಳಂತೆ ಕಸಬಾ ಹೋಬಳಿ ಗೆ ಸೀತಾರಾಮು (ಬಿಇಓ) ತಂಡದಲ್ಲಿ ಏಳು ಮಂದಿ, ವಿವೇಕ್ (ಎಡಿಹೆಚ್) ನೇತೃತ್ವದಲ್ಲಿ ಆರು ಮಂದಿ,
ಮಳೂರು ಹೋಬಳಿಯಲ್ಲಿ ಸಿದ್ದರಾಜು (ಎಡಿಹೆಚ್) ಹಾಗೂ ಭರತ್ (ಎಇ ಪಿಆರ್ ಇಡಿ) ರವರ ತಂಡದಲ್ಲಿ ತಲಾ ಏಳು ಮಂದಿ,
ವಿರೂಪಾಕ್ಷಿಪುರ ಹೋಬಳಿಯಲ್ಲಿ ವೀರಭದ್ರಯ್ಯ (ಎಡಿ ಎಂಎಂಎಸ್) ಹಾಗೂ ಮಂಜುನಾಥ್ (ಎಡಿ ಎಸ್ ಡಿ) ರವರ ತಂಡಗಳಲ್ಲಿ ತಲಾ ಏಳು ಮಂದಿ ಬೆಳಿಗ್ಗೆ ಏಳರಿಂದ ನಾಳೆ ಬೆಳಿಗ್ಗೆ ಏಳು ಗಂಟೆಗಳ ಕಾಲ ತಲಾ ಎರಡು ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬುದಾಗಿ ಮಾಹಿತಿ ನೀಡಿದರು.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು