ಕಸ ಬೇರ್ಪಡಿಸಲು ನಗರಸಭೆಯಿಂದ ಬಕೆಟ್ ವಿತರಣೆ
ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡುವ ಸಲುವಾಗಿ ಮಾನ್ಯ ಪ್ರಧಾನಮಂತ್ರಿ ಯವರು ಹಮ್ಮಿಕೊಂಡಿರುವ ಸ್ವಚ್ಚಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಚನ್ನಪಟ್ಟಣ ನಗರವನ್ನು ರಾಜ್ಯದಲ್ಲಾದರೂ ನಂ ೧ ಮಾಡಬೇಕೆಂದು ನಗರಸಭೆಯ ಪೌರಾಯುಕ್ತ ಸಿ ಪುಟ್ಟಸ್ವಾಮಿ ಕರೆ ನೀಡಿದರು.
ಅವರು ನಗರಸಭೆಯ ಅಧ್ಯಕ್ಷೆ ನಜ್ಮುನ್ನೀಷಾ ರವರ ಹನ್ನೊಂದನೇ ವಾರ್ಡ್ ನಲ್ಲ ಒಣಕಸ ಮತ್ತು ಹಸಿಕಸವನ್ನು ಮೂಲದಲ್ಲೇ ಬೇರ್ಪಡಿಸುವ ಸಲುವಾಗಿ ಸಾರ್ವಜನಿಕರಿಗೆ ಹಸಿರು ಮತ್ತು ನೀಲಿ ಬಣ್ಣದ ಬಕೆಟ್ ಗಳನ್ನು ವಿತರಿಸಿದರು.
ತರಕಾರಿ ತ್ಯಾಜ್ಯ, ಕೈತೋಟದ ತ್ಯೆ, ತೆಂಗಿನಕಾಯಿ ಚಿಪ್ಪು, ಮೊಟ್ಟೆ ಚಿಪ್ಪು ತೆಂಗಿನ ನಾರು, ಮೂಳೆ, ಮಾಂಸಹಾರಿ ತ್ಯಾಜ್ಯ, ಕೊಳತು ಹಾಳಾಗಿರುವ ಆಹಾರ ಪದಾರ್ಥ, ಮೀನಿನ ತ್ಯಾಜ್ಯ, ಏಡಿಚಿಪ್ಪು, ಕೋಳಿಪುಕ್ಕ, ಒಣಗಿರುವ ಹೂ, ಹಣ್ಣಿನ ಸಿಪ್ಪೆ ಮತ್ತು ಬೀಜ, ಬಾಳೆಎಲೆ, ನೈಸರ್ಗಿಕ ನಾರಿನ ಪೊರಕೆ ಮತ್ತು ಕಾಫಿ ಟೀ ಗಸಿಯನ್ನು ಹಸಿರು ಡಬ್ಬಿಯಲ್ಲಿ ಹಾಕಬೇಕು.
ಕಾಗದ, ರಟ್ಟು, ಪ್ಲಾಸ್ಟಿಕ್ ಕೈಚೀಲ, ಹಾಲಿನ ಕವರ್, ಎಣ್ಣೆ ಕವರ್, ಚಾಕೊಲೇಟ್ ಕವರ್, ಒಡೆದ ಗಾಜಿನ ಚೂರುಗಳು, ಲೋಹದ ವಸ್ತುಗಳು, ಮರದ ವಸ್ತುಗಳು, ರಬ್ಬರ್ ಸೀಸೆಗಳು, (ಗಾಜು ಮತ್ತು ಪ್ಲಾಸ್ಟಿಕ್), ಬಟ್ಟೆಚಪ್ಪಲಿ, ಎಲೆಕ್ಟ್ರಿಕ್ ವಸ್ತುಗಳು, ಮಾತ್ರೆಕವರ್, ಸ್ಯಾನಿಟರಿ ಮತ್ತು ಅಲಂಕಾರಿಕ ಕಂಟೈನರ್ ಗಳು, ಬ್ಯಾಟರಿಗಳು, ಬಲ್ಬ್ ಗಳು, ಟ್ಯೂಬ್ ಲೈಟ್ ಗಳು, ಸ್ಯಾನಿಟರಿ, ನ್ಯಾಪ್ ಕಿನ್ ಮತ್ತು ವೈಫರ್ಸ್, ಕೂದಲು ಮುಂತಾದ ವಸ್ತುಗಳನ್ನು ನೀಲಿ ಡಬ್ಬದಲ್ಲಿ ಹಾಕಿ ಸಂಗ್ರಹಿಸಿ ನಗರಸಭೆಯ ವಾಹನ ಬಂದಾಗ ಕೊಡಬೇಕಾಗಿ ವಿನಂತಿಸಿದರು.
ಚನ್ನಪಟ್ಟಣ ನಗರದ ಕಸವನ್ನು ಒಂದು ಕಡೆ ಸುರಿದು ವಿಂಗಡಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಹೂರ್ತ ಕೂಡಿಬಂದಿದೆ, ನಮ್ಮೆಲ್ಲ ಸದಸ್ಯರು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ, ಅಲ್ಲಿಯ ತನಕ ಸಾರ್ವಜನಿಕರು ಮೂಲದಲ್ಲೇ ಕಸ ವಿಂಗಡಣೆ ಮಾಡುವ ಮೂಲಕ ನಗರ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಹತ್ತನೇ ವಾಡ್೯ ಸದಸ್ಯ ಉಮಾಶಂಕರ್ ಸಾರ್ವಜನಿಕರಿಗೆ ಕರೆ ನೀಡಿದರು.
ಮತ್ತೋರ್ವ ಸದಸ್ಯ ಮುದ್ದುಕೃಷ್ಣ ಮಾತನಾಡಿ ಕಣ್ವ ಬಳಿ ಕಸ ಸುರಿಯುವ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ, ಅದಕ್ಕಿಂತಲೂ ಮೊದಲು ಎಲೆಕೇರಿ ಸ್ಮಶಾನದಲ್ಲಿ ತಾತ್ಕಾಲಿಕವಾಗಿ ಕಸ ವಿಂಗಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಗರಸಭೆಯ ಆರೋಗ್ಯಾಧಿಕಾರಿ ವರಲಕ್ಷ್ಮಿ ಯವರು ಪ್ರತಿ ವಾಡ್೯ಗಳಿಗೂ ತಲಾ ಐದುನೂರು ಜೊತೆ ಡಬ್ಬಿಗಳನ್ನು ವಿತರಿಸಲು ತಯಾರಿಮಾಡಿಕೊಂಡಿದ್ದು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ನಗರಸಭೆಯ ಉಪಾಧ್ಯಕ್ಷೆ ಸರಳಾ, ಸ್ಥಾಯಿಸಮಿತಿ ಅಧ್ಯಕ್ಷ ರಾಮು, ಸದಸ್ಯರಾದ ಜೆಸಿಬಿ ಲೋಕೇಶ್, ಜಕಿ ಅಹ್ಮದ್ ಖಾನ್, ಲಿಯಾಖತ್ ಅಲಿಖಾನ್ ಅಧಿಕಾರಿಗಳಾದ ಸ್ನೇಹ ಮತ್ತು ಪೌರಕಾರ್ಮಿಕರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ: 9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು