Tel: 7676775624 | Mail: info@yellowandred.in

Language: EN KAN

    Follow us :


ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದಲ್ಲಿ ಪುರಾತನ ಶ್ರೀ ಮುರಾರಿ ಸ್ವಾಮಿ ಯ ಗದ್ದುಗೆ

Posted date: 25 Sep, 2018

Powered by:     Yellow and Red

ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದಲ್ಲಿ ಪುರಾತನ ಶ್ರೀ ಮುರಾರಿ ಸ್ವಾಮಿ ಯ ಗದ್ದುಗೆ

ಪುರಾತನ ಜೀವಂತ ಸಮಾಧಿ

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆಯಲ್ಲಿ ಪುರಾತನವಾದ ಸರಿ ಸುಮಾರು ಹನ್ನೆರಡನೇ ಶತಮಾನದ್ದು ಎಂದು ಹೇಳಲಾಗುವ ಶ್ರೀ ಮುರಾರಿ ಸ್ವಾಮಿಯ ಜೀವಂತ ಸಮಾಧಿ ಇರುವ ಮಂಟಪವೊಂದಿದ್ದು ಅದನ್ನು ಜೀರ್ಣೋದ್ಧಾರ ಮಾಡಲು ಕುಮಾರಸ್ವಾಮಿ ಎಂಬುವವರು ಮುಂದಾಗಿದ್ದಾರೆ.

 

 

ಮಂಟೇಸ್ವಾಮಿ ಸಮಕಾಲೀನರಂತೆ

ಗೆಜ್ಜಗಾರಗುಪ್ಪೆ ಗ್ರಾಮದ ಹೊರಭಾಗದಲ್ಲಿ ಬಹುತೇಕ ಹಾಳಾದಂತಿರುವ ಹಾಗೂ ಒಂದಕ್ಕೊಂದು ಅಂಟಿಕೊಂಡಿರುವಂತೆ ಮೂರು ಮಾಳಿಗೆಯ ಮಂಟಪಗಳಿದ್ದು ಮಧ್ಯದಲ್ಲಿ ಸ್ವಲ್ಪ ದೊಡ್ಡದಾಗಿರುವ ಮಂಟಪದಲ್ಲಿ ಎರಡು ಸಮಾಧಿಗಳಿವೆ, ಅದರಲ್ಲಿ ಇಪ್ಪತ್ತು ವರ್ಷದ ಹಿಂದೆ ಬಲವಂತವಾಗಿ ಬಲವಂತವಾಗಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೇಳಲಾಗುವ ಮಂಟೇಸ್ವಾಮಿ ಸಮಕಾಲೀನರಾದ ಶ್ರೀ ಮುರಾರಿ ಸ್ವಾಮಿಗಳ ಜೀವಂತ ಸಮಾಧಿ ಎಂದು ಸ್ಥಳೀಯರು ನಂಬಿದ್ದಾರೆ.

 

ಭೂಗತ ಕಲ್ಯಾಣಿ ಪತ್ತೆ

ಬಹುದೊಡ್ಡದಾದ ಅಂದರೆ ಅರ್ಧ ಎಕರೆಗೂ ಹೆಚ್ಚು ವಿಸ್ತೀರ್ಣವಾದ ಕಲ್ಯಾಣಿ ಮಂಟಪದ ಕೂಗಳತೆ ದೂರದಲ್ಲಿ ಇದ್ದು ಸಂಪೂರ್ಣ ಮುಚ್ಚಿಹೋಗಿದೆ, ಅದನ್ನು ಸ್ವಚ್ಛಗೊಳಿಸಿ ಮಂಟಪ ಮತ್ತು ಕಲ್ಯಾಣಿಗೂ ಏನಾದರೂ ಸಂಬಂಧ ಇದೆಯಾ ಎನ್ನುವುದನ್ನು ಇನ್ನಷ್ಟೇ ಮನಗಾಣಬೇಕಾಗಿದೆ.

 

ಮಂಟಪದ ಮುಂದೆಯೂ ಸಮಾಧಿಗಳು

ಮಂಟಪದ ಮುಂದೆ ಎರಡು ಸಮಾಧಿಗಳಿವೆ, ಅವುಗಳ ಮುಂದೆ ಮತ್ತೊಂದು ಮಂಟಪ ಕಟ್ಟಿ ಅದರಲ್ಲೊಂದು ಸಮಾಧಿ ಇದೆ, ಇಪ್ಪತ್ತು ವರ್ಷದಲ್ಲಾದ ಒಂದು ಜೀವಂತ ಸಮಾಧಿ ಹೊರತುಪಡಿಸಿದರೆ ಮತ್ಯಾವ ಸಮಾಧಿಗಳ ಬಗ್ಗೆಯೂ ಸ್ಥಳೀಯರಿಗೆ ಮಾಹಿತಿ ಇಲ್ಲ.

ಜೀವಂತ ಸಮಾಧಿಯ ಎರಡು ಭಾಗಗಳಲ್ಲಿ ಮಾಳಿಗೆ ಮಂಟಪಗಳು ಮತ್ತು ಕಲ್ಲಿನ ಕಾಂಪೌಂಡ್

ಮುರಾರಿ ಸ್ವಾಮಿಗಳ ಮಂಟಪದ ಆಜೂಬಾಜು ಎರಡು ಕಲ್ಲಿನ ಮಂಟಪಗಳಿದ್ದು ಅವುಗಳನ್ನು ಯಾಕೆ ನಿರ್ಮಿಸಲಾಗಿತ್ತು, ಎಂಬುದನ್ನು ಕಂಡುಕೊಳ್ಳಬೇಕಾಗಿದೆ.

ಹಾಗೆ ಮಂಟಪದ ಸುತ್ತಲೂ ಕಲ್ಲು ಮತ್ತು ಮಣ್ಣು ಸೇರಿಸಿ ನಿರ್ಮಿಸಿರುವ ಕಾಂಪೌಂಡ್ ಈಗಲೂ ಅಚ್ಚುಕಟ್ಟಾಗಿ ಸ್ಥಿರವಾಗಿ ನಿಂತಿರುವುದು ಅಚ್ಚರಿ ಮೂಡಿಸುತ್ತದೆ.

 

ತಾಳೆಗರಿಯ ಓಲೆ ಮತ್ತು ಪಿಟೀಲು

ಅದೇ ಗ್ರಾಮದ ಪ್ರಮುಖರೊಬ್ಬರ ಮನೆಯಲ್ಲಿ ಎರಡು ಕಟ್ಟು ತಾಳೆಗರಿಗಳು ಸಿಕ್ಕಿದ್ದು ಅವುಗಳು ಅವರ ಸುಪರ್ದಿಯಲ್ಲಿ ಭದ್ರವಾಗಿವೆ, ಆ ತಾಳೆಯೋಲೆಯಲ್ಲಿರುವ ಅಕ್ಷರಗಳನ್ನು ಭೇದಿಸಿ ಅದು ಮಹಾರಾಜರ ಕಾಲದ್ದ, ಕೆಂಪೇಗೌಡರ ಕಾಲದ್ದ ಅಥವಾ ಮುರಾರಿ ಸ್ವಾಮಿಗಳಿಗೆ ಸಂಬಂಧಿಸಿದ್ದ ಎಂದು ಸಂಶೋಧನೆ ಮಾಡಿಸಿ ಸತ್ಯಾಂಶವನ್ನು ಕಂಡುಕೊಳ್ಳಬೇಕಾಗಿದೆ.

ತಾಳೆಗರಿ ಸಂಗ್ರಹಿಸಿರುವವರ ಮನೆಯಲ್ಲಿ ಜರ್ಮನಿ ದೇಶದ್ದು ಎಂದು ಹೇಳಲಾಗುವ ನೂರು ವರ್ಷಕ್ಕೂ ಹಳೆಯದಾದ ಪಿಟೀಲು ಇದ್ದು ತುಂಬಾ ಆಕರ್ಷಕವಾಗಿದೆ.

 

ಕುಮಾರಸ್ವಾಮಿ ಯವರಿಗೆ ಶುಭವಾಗಲಿ 

ಈ ಗದ್ದುಗೆಯನ್ನು ಪೂಜಿಸಲು ಅನೇಕಮಂದಿ ಮುಂದಾಗಿದ್ದು ಇದುವರೆಗೂ ಯಾರೂ ಕೂಡ ನೆಲೆ ನಿಲ್ಲಲಾಗಿಲ್ಲ, ಹಾಗೂ ಸಂಪೂರ್ಣ ನಾಶವಾಗಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ, ಇದರ ನಡುವೆ ಶ್ರೀ ಕುಮಾರಸ್ವಾಮಿಯವರು ಅವುಗಳ ಜೀರ್ಣೋದ್ಧಾರಕ್ಕಾಗಿ ಮುಂದಡಿಯಿಟ್ಟಿರುವುದು ಶ್ಲಾಘನೀಯ.

ಸ್ಥಳೀಯ, ಗ್ರಾಮಸ್ಥರು, ಪ್ರಾಚ್ಯವಸ್ತು ಇಲಾಖೆ ಹಾಗೂ ಇತಿಹಾಸ ಸಂಶೋಧಕರ ನೆರವು ಪಡೆದು ಈ ರೀತಿಯ ಪುರಾತನವಾದವುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯ.

ಮುನ್ನುಡಿ ಬರೆದಿರುವ ಕುಮಾರಸ್ವಾಮಿಯವರಿಗೆ ಶುಭವಾಗಲಿ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑