Tel: 7676775624 | Mail: info@yellowandred.in

Language: EN KAN

    Follow us :


ವರ್ಷ ವರ್ಷವೂ ಕಳೆಗುಂದುತ್ತಿರುವ ಕೆಂಗಲ್ ಜಾತ್ರೆ

Posted date: 16 Jan, 2019

Powered by:     Yellow and Red

ವರ್ಷ ವರ್ಷವೂ ಕಳೆಗುಂದುತ್ತಿರುವ ಕೆಂಗಲ್ ಜಾತ್ರೆ

ಇತಿಹಾಸ ಪ್ರಸಿದ್ಧ ಅಯ್ಯನಗುಡಿ ಎಂದೇ ಸುಪ್ರಸಿದ್ದವಾದ ಕೆಂಗಲ್ ಜಾತ್ರೆ, ರಾಮನಗರ ಜಿಲ್ಲೆಯಲ್ಲಿಯೇ ಅತಿದೊಡ್ಡ ದನಗಳ ಜಾತ್ರೆ ಎಂದು ಗುರುತಿಸಿಕೊಂಡಿದ್ದು ವರ್ಷವರ್ಷಕ್ಕೆ ಕ್ಷೀಣಿಸುತ್ತಲೇ ಬರುತ್ತಿರುವುದು ವಿಷಾದನೀಯ ಎನಿಸುತ್ತಿದೆ.


ಸಂಕ್ರಾಂತಿ ಹಬ್ಬದಂದು ನಿತ್ಯಾರಾಧಾನೆ, ಸ್ನಪನ ಮಹಾಮಂಗಳಾರತಿ, ಶಾತ್ತುಮೊರೈ, ರಾಷ್ಟ್ರಾಶೀರ್ವಾದದೊಂದಿಗೆ ಶುರುವಾಗಿ ಬುಧವಾರ ಸುದರ್ಶನ ಹೋಮ, ಮೂರ್ತಿಹೋಮ, ಗರುಡೋತ್ಸವ, ಗುರುವಾರ ಆಂಜನೇಯ ಸಹಸ್ರನಾಮ ಹೋಮ, ಗಜೇಂದ್ರ ಮೋಕ್ಷ, ಪ್ರಹ್ಲಾದ ಪರಿಪಾಲನೆ, ಶುಕ್ರವಾರ ಮಂಟಪೋತ್ಸವ, ನವಗ್ರಹ ಹೋಮ, ಶೇಷ ವಾಹನೋತ್ಸವ, ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದಿವ್ಯ ಕಲ್ಯಾಣೊತ್ಸವ, ಉಯ್ಯಾಲೆ ಸೇವೆ, ಶನಿವಾರ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ *ಬ್ರಹ್ಮರಥೋತ್ಸವ* ಮುತ್ತಿನ ಪಲ್ಲಕ್ಕಿ ಉತ್ಸವ, ಭಾನುವಾರ ತಿರುಕಲ್ಯಾಣಿ ವಸಂತೋತ್ಸವ, ಧ್ವಜಾರೋಹಣ, ಪೂರ್ಣಾಹುತಿ. ಸೋಮವಾರ ಅಷ್ಟೋತ್ತರ ಶತಕುಂಭಾಭಿಷೇಕ, ಶಯನೋತ್ಸವ ಅರ್ಚಕರು ಮತ್ತು ಆಗಮಿಕರಿಗೆ ಸನ್ಮಾನೊಂದಿಗೆ ಜಾತ್ರೆಯು ಮುಕ್ತಾಯಗೊಳ್ಳುತ್ತದೆ.


ಎಪ್ಪತ್ತು ಎಂಭತ್ತರ ದಶಕದಲ್ಲಿ ಹುಣಸೂರು, ಮೈಸೂರು, ಮಂಡ್ಯ, ದೊಡ್ಡ ಬಳ್ಳಾಪುರ,ಕೋಲಾರ ಮುಂತಾದ ಅನೇಕ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬರಿಗಾಲಿನಲ್ಲಿ ರಾತ್ರಿಪೂರಾ ನಡೆದುಬಂದು ಅಯ್ಯನಗುಡಿ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ದನ ಮತ್ತು ಜನರು ಸೇರುತ್ತಿದ್ದುದು ಈಗ ಇತಿಹಾಸ.


ಇತ್ತೀಚಿನ ಆಧುನೀಕರಣ, ನಾಟಿ ಹಸುಗಳು ಸಾಕಣೆ ದುಬಾರಿಯಾದ ಕಾರಣ, ಸಂಪೂರ್ಣ ಎಲ್ಲಾ ಉಳುಮೆಗೂ ಇಂದು ಯಂತ್ರೋಪಕರಣಗಳನ್ನೇ ಅವಲಂಬಿಸಿರುವುದರಿಂದ ಹಾಗೂ ಆರ್ಥಿಕ ವಹಿವಾಟಿನ ದೃಷ್ಟಿಯಿಂದ ಸೀಮೆ ಹಸುಗಳ ಸಾಕಾಣಿಕೆ ಹೆಚ್ಚಾದುದರಿಂದ ಜಾತ್ರೆಗೆ ದನಕರುಗಳನ್ನು ತಂದು ಮಾರುವುದು, ತೆಗೆದುಕೊಳ್ಳುವುದು ಕಡಿಮೆಯಾಗುತ್ತಿದೆ.


ಕಳೆದ ದಶಕದಿಂದೀಚೆಗೆ ಹಲವಾರು ಜಿಲ್ಲೆಗಳಿಂದ ಜಾನುವಾರುಗಳು ಜಾತ್ರೆಗೆ ಬಂದರೂ ಸಹ‌ ಒಂದು ವಾರಗಳ ಕಾಲ ಜರುಗುವ ಜಾತ್ರೆಯ ತನಕ ನಿಲ್ಲದೆ ಕೇವಲ ಎರಡು ಮೂರು ದಿನಗಳಲ್ಲಿಯೇ ಬರಕಾಸ್ತುಗೊಳ್ಳುತ್ತಿದೆ, ಜಾತ್ರೆಯ ಖರ್ಚುಗಳನ್ನು ಮುಜರಾಯಿ ಇಲಾಖೆಯೇ ವಹಿಸಿಕೊಂಡಿದ್ದು ತಾಲ್ಲೂಕು ಆಡಳಿತವೂ ಪಶುವೈದ್ಯಕೀಯ, ಪಂಚಾಯತಿ ಅಭಿವೃದ್ಧಿ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಚನ್ನಪಟ್ಟಣದ ದಂಡಾಧಿಕಾರಿ ಯೋಗಾನಂದ ರವರು ತಿಳಿಸಿರುವುದಾಗಿ ತಿಳಿಸಿದರು.


ನಾವು  ಸಣ್ಣವರಿದ್ದಾಗಿನಿಂದಲೂ ಅಯ್ಯನಗುಡಿ ಜಾತ್ರೆಗೆಂದು ರಾಸುಗಳನ್ನು  ಕರೆತಂದು‌ ಮಾರುವುದು, ಖರೀದಿಸುವುದು‌ಮಾಡುತ್ತಿದ್ದೇವು, ಇತ್ತೀಚಿನ ದಿನಗಳಲ್ಲಿ, ಆಧುನಿಕರಣದಿಂದ ಹಾಗು ಅತಿಯಾದ ವೆಚ್ಚದ ಕಾರಣ ಇಷ್ಟು ದೂರ ಬರಲಾಗುತ್ತಿರಲಿಲ್ಲ, ಈ ಬಾರಿ ನೋಡೋಣಾ ಎಂದು ಪಾಂಡವಪುರ ತಾಲ್ಲೂಕಿನ ಅನೇಕ ಸ್ನೇಹಿತರೊಂದಿಗೆ ರಾಸುಗಳ ಸಮೇತ ಬಂದಿದ್ದೇವೆ, ಈಗಾಗಲೇ ಅನೇಕರು ಬಂದು ವ್ಯಾಪಾರ ಕೇಳಿ ಹೋಗಿದ್ದಾರೆ ಎಂದು ಪಾಂಡವಪುರ ತಾಲ್ಲೂಕಿನ ಕುರಹಟ್ಟಿ ಗ್ರಾಮದ ರೈತ ಕೆಂಪೇಗೌಡ ತಿಳಿಸಿದರು.


ಮುಂದಿನ ವರ್ಷಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತವೂ ಸೂಕ್ತ ವ್ಯವಸ್ಥೆಯೊಂದಿಗೆ ಪ್ರಚಾರ ಕೈಗೊಂಡು ಇಂತಹ ಇತಿಹಾಸ, ಪುರಾಣ ಪ್ರಸಿದ್ಧ ಅಯ್ಯನಗುಡಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲೆಂದು ಕೆಂಗಲ್ ದೇವಾಲಯದ ಅರ್ಚಕ ಶರತ್ ಮತ್ತು ಯಾತ್ರಿಕರು ಮನವಿ ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑