ರಾಜಕಾಲುವೆ ಒತ್ತುವರಿ ತೆರವುಗೊಳಿಸಿಯೇ ಸಿದ್ದ ತಹಶಿಲ್ದಾರ್
ಪರ್ಯಾಯ ಮಾರ್ಗ ಸೂಚಿಸುವಂತೆ ಮನವಿ ಮಾಡುತ್ತಿರುವ ಮುಖಂಡರು
ದಂಡಾಧಿಕಾರಿಗಳ ಖಡಕ್ ಉತ್ತರ
ಒತ್ತುವರಿಯಾಗಿರುವ ರಾಜಕಾಲುವೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸದೆ ಬಿಡುವುದಿಲ್ಲ, ಮೇಲಿನ ಅಧಿಕಾರಿಗಳಿಂದ ಆದೇಶ ಬಂದಿರುವುದರಿಂದ ನಾಳೆಯಿಂದಲೇ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ತಿಳಿಸಿದರು.
ನಗರದ ಸಾತನೂರು ರಸ್ತೆಯ ಮಹದೇಶ್ವರ ಬಡಾವಣೆಯಲ್ಲಿ ಹಾದುಹೋಗಿರುವ ರಾಜಕಾಲುವೆ ಸ್ಥಳ ಪರಿಶೀಲನೆ ವೇಳೆ ಅಲ್ಲಿನ ನಿವಾಸಿಗಳಿಗೆ ರಾಜಕಾಲುವೆ ತೆರವುಗೊಳಿಸಲು ಸ್ಪಂದಿಸುವಂತೆ ಸೂಚಿಸಿದರು.
ಬಡಾವಣೆ ನಿರ್ಮಾತೃ ವಿರುದ್ಧ ಮೊಕದ್ದಮೆ !?
ಕೊತ್ತನಹಳ್ಳಿ ಕೆರೆ (ಈಗಿನ ಬಸ್ ಡಿಪೋ, ಸಾಮಾನ್ಯ ಅರಣ್ಯ ಇಲಾಖೆ ಮತ್ತು ವಿದ್ಯಾರ್ಥಿ ನಿಲಯಕ್ಕೆ ಹಸ್ತಾಂತರಿಸಿರುವ ಜಾಗ) ಯಿಂದ ಬೀಡಿ ಕಾಲೋನಿ ಕಡೆಯಿಂದ ಹರಿದುಬರುವ ನಾಲೆಯೇ ರಾಜ ಕಾಲುವೆಯಾಗಿದ್ದು ಆ ಕಾಲುವೆಯನ್ನು ಮುಚ್ಚಿ ನಿವೇಶನಗಳನ್ನು ಹಂಚಿರುವುದರಿಂದ ಅಮಾಯಕರು ಮೋಸ ಹೋಗಿರುವುದು ಖಚಿತವಾಗಿದೆ. ನಗರದ ರಿಯಲ್ ಎಸ್ಟೇಟ್ ಉದ್ಯಮಿ ಗೌತಮ್ ಬಡಾವಣೆ ನಿರ್ಮಿಸಿ ಈ ನಿವೇಶನಗಳನ್ನು ಹಂಚಿದ್ದು ಅವರ ಮೇಲೆ ಮೊಕದ್ದಮೆ ದಾಖಲಿಸುವುದಾಗಿ ಮೋಸ ಹೋಗಿರುವ ನಿವಾಸಿಗಳು ತಿಳಿಸಿದರು.
ಬದಲಿ ಮಾರ್ಗ, ಸಂಧಾನ ವಿಫಲ
ನಿವಾಸಿಗಳು ಮತ್ತು ಕೆಲವು ಮುಖಂಡರು ಬಡಾವಣೆಯಲ್ಲಿ ಚರ್ಚಿಸಿ ನಂತರ ತಹಶಿಲ್ದಾರ್ ಮತ್ತು ಮುಖ್ಯಮಂತ್ರಿಗಳ ವಿಶೇಷಾಧಿಕಾರಿಯನ್ನು ಭೇಟಿ ಮಾಡಿ ಪರ್ಯಾಯ ಮಾರ್ಗದ ಬಗ್ಗೆ ಚರ್ಚಿಸಲಾಗಿ ಅಲ್ಲಿಯೂ ಸಹ ಇದೇ ಉತ್ತರವನ್ನು ನೀಡಿರುವುದಾಗಿ ತಿಳಿದು ಬಂತು. ಮನೆ ಮತ್ತು ನಿವೇಶನ ಹೊರತುಪಡಿಸಿ ಖಾಲಿ ಇರುವ ಜಾಗದಲ್ಲಿ ಕಾಲುವೆ ನಿರ್ಮಿಸಲು ಮಾಡಿದ ಮನವಿಗೆ ಇದು ಸಾಧ್ಯವಾಗದ ಮಾತು, ಇನ್ನು ನೂರು ವರ್ಷವಾದರು ತೆರವುಗೊಳಿಸಲೇ ಬೇಕು, ರಾಜಕಾಲುವೆಯನ್ನು ಬದಲಿ ಮಾರ್ಗದಲ್ಲಿ ನಿರ್ಮಿಸಲಾಗುವುದಿಲ್ಲ. ನಾಳೆಯಿಂದ ಖಾಲಿ ಇರುವ ಕಡೆ ಕಾಲುವೆ ಮಾಡುತ್ತೇವೆ, ಮುಂದೆ ನೀವೆ ತೆರವುಗೊಳಿಸಿಕೊಡಬೇಕೆಂದು ಸೂಚಿಸಿದರು.
ಮನವಿಗೆ ಮಾರ್ಗೋಪಾಯ
ಬಡಾವಣೆ ನಿರ್ಮಿಸಲು ಅನುಮತಿ ನೀಡಿದ ಅಂದಿನ ಅಧಿಕಾರಿಗಳೇ ಹೊಣೆ ಎಂದು ದೂರಿದ ಅಲ್ಲಿನ ನಿವಾಸಿಗಳ ಉತ್ತರಿಸಿದ ದಂಡಾಧಿಕಾರಿ ತಪ್ಪು ಯಾರೇ ಮಾಡಿದರೂ ತಪ್ಪೇ ಅವರಿಗೆ ಕಾನೂನುರೀತ್ಯಾ ನೋಟಿಸ್ ಜಾರಿ ಮಾಡಿ ಉತ್ತರ ಪಡೆಯಲಾಗುವುದು, ಹಾಗೂ ಬಡಾವಣೆ ನಿರ್ಮಾತೃ ವಿರುದ್ಧ ನೀವುಗಳು ಮೊಕದ್ದಮೆ ಹೂಡಿದರೆ ಪರಿಹಾರ ದೊರಕಬಹುದು ಎಂದು ಸಲಹೆ ನೀಡಿದರು.
ಶೆಟ್ಟಿಹಳ್ಳಿ ಕೆರೆಯೂ ಸರ್ವೇ ಆಗಿದೆ
ಕೆರೆ, ಕಟ್ಟೆ, ಅರಣ್ಯ ಮತ್ತು ನದಿ ದಂಡೆಯನ್ನು ಯಾರೂ ಸಹ ಒತ್ತುವರಿ ಮಾಡಬಾರದು, ಮಾಡಿದರೆ ಅದು ಅಪರಾಧವಾಗುತ್ತದೆ, ನಗರದ ಶೆಟ್ಟಿಹಳ್ಳಿ ಕೆರೆಯನ್ನು ಕಳೆದ ವಾರ ಅಳತೆ ಮಾಡಿಸಿದ್ದೇನೆ, ಅಕ್ರಮವಾಗಿ ಒತ್ತುವರಿ ಮಾಡಿರುವವರಿಗೆ ನೋಟೀಸ್ ಕೊಡಲು ಕ್ರಮಕೈಗೊಳ್ಳಲಾಗಿದೆ, ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಭೂಮಿಯನ್ನು ಯಾರೇ ಒತ್ತುವರಿ ಮಾಡಿದರು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಮ್ಮ ವರದಿಗೆ ದಕ್ಕಿದ ನ್ಯಾಯ
(ನಗರದ ಶೆಟ್ಟಿಹಳ್ಳಿ ಒತ್ತುವರಿ ಮತ್ತು ಕಸದ ಸಮಸ್ಯೆಗೆ)
ಬಯಲುಸೀಮೆ ಮತ್ತು sanmitra.co.in
ಪತ್ರಿಕೆಯಲ್ಲಿ ವರದಿ ಮಾಡಿದ್ದಲ್ಲದೆ ಹಲವು ಬಾರಿ ತಹಶಿಲ್ದಾರರಿಗೆ ಖುದ್ದಾಗಿ ವಿವರಣೆ ನೀಡಿ ಮನವಿ ಮಾಡಲಾಗಿತ್ತು, ಸ್ಪಂದಿಸಿದ ಅಧಿಕಾರಿ ಯೋಗಾನಂದರವರು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲು ಮುಂದಾಗಿರುವುದಕ್ಕೆ ಪತ್ರಿಕೆಯು ಅಭಿನಂದಿಸುತ್ತದೆ.)
ತಹಶಿಲ್ದಾರರ ವೀಕ್ಷಣೆಯ ಸಂದರ್ಭದಲ್ಲಿ ನಗರಸಭೆ ಸದಸ್ಯ ಜೆಸಿಬಿ ಲೋಕೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಎ ಜಿ ಸ್ವಾಮಿ, ಮಂಜು, ರಾಮಕೃಷ್ಣ, ರಾಕೇಶ್, ಅಭಿ, ಮಹೇಶ್, ಯೋಗೇಶ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು