ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ರಾಜಕೀಯ ನಾಯಕರು
ಮುಖ್ಯಮಂತ್ರಿಗಳ ಕ್ಷೇತ್ರ
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಹೇಳಿಕೇಳಿ ಮುಖ್ಯಮಂತ್ರಿಗಳ ಕ್ಷೇತ್ರ, ಸಾಮಾನ್ಯರು ಸೇರಿದಂತೆ ಎಲ್ಲಾ ಜನಸಾಮಾನ್ಯರು ಮತ್ತು ಬೇರೆ ವಿಧಾನಸಭಾ ಕ್ಷೇತ್ರಗಳವರು ಸಹ ನಿಮ್ದೇನ್ ಬಿಡ್ರಿ ಸಿಎಂ ಕ್ಷೇತ್ರ ಅಭಿವೃದ್ಧಿಗೆ ಕೊರತೆ ಇಲ್ಲಾ ಒಳ್ಳೇ ಅಭಿವೃದ್ಧಿ ಆಗ್ತದೆ ಅಂತಾನೆ ಮಾತು ಶುರುವಿಟ್ಟುಕೊಳ್ಳುತ್ತಾರೆ, ಅಧಿಕಾರಿಗಳು ಸಹ ಬೇರೆ ಕ್ಷೇತ್ರಕ್ಕಿಂತ ಸಿಎಂ ಕ್ಷೇತ್ರದಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುತ್ತಿದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಥವಾ ನಾವೇಳ್ದಂಗೆ ಆಗ್ಬೇಕು, ನಾವೇಳಿದ್ಮೇಲೆ ನಿಂತೋಯ್ತು ಅಧಿಕಾರಿಗಳು ತೆಪ್ಪಗಾದರು ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳಲೋಸುಗ ತಾಲ್ಲೂಕಿನಲ್ಲಿ ಆಗಬೇಕಾಗಿರುವ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದು ಎಷ್ಟು ಸರಿ ಎಂದು ಅಭಿವೃದ್ಧಿ ಪಡಿಸಲು ಹೆಣಗುತ್ತಿರುವ ಅಧಿಕಾರಿಗಳು ಮತ್ತು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಸಾಮಾನ್ಯರಿಗೆ ಗೊತ್ತಿರುವ ಕಾನೂನು ಇವರಿಗೆ ಗೊತ್ತಿಲ್ಲವೇ ?
ರಾಜಕಾಲುವೆ, ನದಿಪಾತ್ರ, ಕೆರೆಕಟ್ಟೆ, ಅರಣ್ಯ ಭೂ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವವರು ಯಾರೇ ಆಗಲಿ ಎಂದಾದರೊಮ್ಮೆ ತೆರವು ಮಾಡಲೇಬೇಕು, ಇದು ಯಾವೊಬ್ಬ ಚುನಾಯಿತ ಅಧಿಕಾರಿಗಳ ಬಾಯಿಮಾತಿನ ಹೇಳಿಕೆ ಕೊಟ್ಟಾಕ್ಷಣ ಕಾಮಗಾರಿ ನಿಲ್ಲಿಸಲಾಗುವುದಿಲ್ಲ, ಆಕಸ್ಮಿಕವಾಗಿ ನಿಲ್ಲಿಸಿದರು ಸಹ ಅದು ತಾತ್ಕಾಲಿಕ ಮಾತ್ರ ಎಂದು ಒತ್ತುವರಿದಾರರು ಮತ್ತು ಚುನಾಯಿತ ಪ್ರತಿನಿಧಿಗಳು ಅರಿತು ಮಾತನಾಡುವುದು ಒಳ್ಳೆಯದು.
ಮುಖಂಡರ ಒತ್ತಡ
ನಗರದ ಮಹದೇಶ್ವರ ಬಡಾವಣೆಯಲ್ಲಿನ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮೊದಲು ಸ್ಥಳೀಯ ನಗರಸಭೆ ಸದಸ್ಯ ಜೆಸಿಬಿ ಲೋಕೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ನಂತರ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ವೀಣಾಕುಮಾರಿ ಯವರು ಮೋಸ ಹೋಗಿರುವ ಅಮಾಯಕ ನಿವೇಶನದಾರರಿಗೆ ಮೋಸ ಮಾಡಿರುವವರ ಮೂಲಕ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳಿಗೆ ಒತ್ತಡ ಹೇರುವುದು, ಜನಪ್ರತಿನಿಧಿಗಳ ಮೂಲಕ ಹೇಳಿಸಿ ಅಭಿವೃದ್ಧಿಗೆ ತಡೆಯಿಡ್ಡುವುದು ಸರಿಯೇ ?
ನಗರದ ಅಂಚೆಕಛೇರಿ ರಸ್ತೆಯ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದರ ವಿರುದ್ಧ ಗರಂ ಆದ ಜೆಡಿಎಸ್ ನಗರ ಅಧ್ಯಕ್ಷ ರಾಂಪುರ ರಾಜಣ್ಣ ಅವರ ಮನೆಯ ಬಳಿ ನೂರಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಪೌರಾಯುಕ್ತರನ್ನು ಕರೆಸಿ ನಂತರ ಅವರ ಮೂಲಕ ತಹಶಿಲ್ದಾರರನ್ನು ಕರೆಸಿ ಸಭೆ ನಡೆಸುವ ಔಚಿತ್ಯವೇ !?
ನಗರಸಭೆಯ ಅಧಿಕಾರಿಗಳು, ಅಧ್ಯಕ್ಷ ಮತ್ತು ಸದಸ್ಯರು, ತಹಶಿಲ್ದಾರ್ ಮತ್ತು ಇನ್ನಿತರ ರಾಜಕೀಯ ನಾಯಕರನ್ನು ಬಿಟ್ಟು ಜೆಡಿಎಸ್ ನಗರ ಅಧ್ಯಕ್ಷರ ಬಳಿಯೇ ಹೋಗಿದ್ದು ಯಾಕೆ ? ಅವರೇ ಬಂದಿದ್ದರೋ ? ಅಥವಾ ಅವರೇ ಕರೆಸಿಕೊಂಡಿದ್ದರೋ ? ಎಲ್ಲರನ್ನೂ ಬಿಟ್ಟು ಅವರವರೇ ಸೇರಿರುವುದರ ಹಿಂದೆ ಏನೋ ಹಕೀಕತ್ತು ಇರಬೇಕು ಎನಿಸುತ್ತಿದೆ ಎಂದು ಅಭಿವೃದ್ಧಿ ಪರ ಇರುವ ಜನಸಾಮಾನ್ಯರು ಮಾತಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ನಾನೇಳ್ದಂಗೆ ಆಗ್ಬೇಕು ಅನ್ನೋ ದೊಡ್ ನಾಯ್ಕ
ಇನ್ನೋರ್ವ ಜೆಡಿಎಸ್ ಮುಖಂಡ ಕೆಲವು ಪೋಲೀಸ್ ಅಧಿಕಾರಿಗಳಿಗೆ ಇದು ನಮ್ಮ ಕೇಸು ಮಾಡ್ಕೊಡ್ರಿ ಎಂದು, ಅದೇ ನಾಯಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸಹ ನಾನು ಹೇಳ್ತಿದ್ದೀನಿ, ನಾನೇಳ್ದಂಗೆ ಮಾಡ್ರಿ ಎಂದು ಧಮಕಿ ಹಾಕಿರುವ ಸಂಗತಿ ಸಹ ಗುಟ್ಟಾಗಿ ಉಳಿಯದೇ ನಾಯಕರು ಅದರಲ್ಲೂ ಜೆಡಿಎಸ್ ನಾಯಕರ ವಿರುದ್ಧ ಅಸಮಧಾನ ಹೊರಬರುತ್ತಿರುವುದು ಸುಳ್ಳಲ್ಲ.
ಅಭಿವೃದ್ಧಿ ಪರ ಇರುವ ಅಧಿಕಾರಿಗಳೇನಕರು ಚನ್ನಪಟ್ಟಣಕ್ಕೆ ಎಷ್ಟು ಎಂ ಎಲ್ ಎ ಗಳು ಸರ್ ಎಂದು ಪ್ರಶ್ನಿಸುತ್ತಾರೆ ?
ತಾಲ್ಲೂಕನ್ನು ಅಭಿವೃದ್ಧಿಪಡಿಸಲೋ ಇವರು ಹೇಳಿದಂಗೆ ಕೇಳಲೋ ಎಂಬ ಮನಸ್ಥಿತಿಯಿಂದ ಹೊರಬರಲೋ ಎಂಬ ಗೊಂದಲಕ್ಕೀಡಾಗಿರುವುದು ವೇದ್ಯವಾಗುತ್ತಿದೆ.
ಮುಖ್ಯಮಂತ್ರಿಗಳೇ ಇತ್ತ ಗಮನಹರಿಸಿ, ಬಗೆಹರಿಸಿ
ಮುಖ್ಯಮಂತ್ರಿಗಳೇ ನೀವು ಇಲ್ಲಿಯ ಶಾಸಕರು ಹೌದು ನಾಡಿನ ದೊರೆಯೂ ಹೌದು, ತಮ್ಮ ಕ್ಷೇತ್ರದ ನಾಯಕರನ್ನು ಹದ್ದುಬಸ್ತಿನಲ್ಲಿಟ್ಟು ಅಭಿವೃದ್ಧಿಗೆ ಒತ್ತುಕೊಡಿ, ಅಧಿಕಾರಿಗಳಿಗೆ ಮುಜುಗರ ತಪ್ಪಿಸಿ, ಮಾದರಿ ತಾಲ್ಲೂಕನ್ನಾಗಿ ಪರಿವರ್ತಿಸಿ, ಈಗಾಗಲೇ ಅಧಿಕಾರಿಗಳು ಮತ್ತು ಜನಸಾಮಾನ್ಯರು ಚನ್ನಪಟ್ಟಣದಲ್ಲಿ ಒಂಭತ್ತು+ಎರಡು ಎಂ ಎಲ್ ಎ ಗಳಿದ್ದು ಹದೊಮೂರನೆಯವರಾಗಿ ಅನಿತಾಕುಮಾರಸ್ವಾಮಿ ಮತ್ತು ಹದಿನಾಲ್ಕನೆಯವರಾಗಿ ಕುಮಾರಸ್ವಾಮಿ ಎಂದು ಮಾತನಾಡಿಕೊಳ್ಳುತ್ತಿದ್ದು ಇದಕ್ಕೆಲ್ಲ ಅವಕಾಶ ಮಾಡಿಕೊಡದೆ ಅಭಿವೃದ್ಧಿ ಕೈಗೊಳ್ಳಬೇಕೆಂದು ಕ್ಷೇತ್ರದ ಮತದಾರರು ಆಗ್ರಹಿಸುತ್ತಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು