ಚನ್ನಪಟ್ಟಣ ನ್ಯಾಯಾಲಯದ ಇತಿಹಾಸ
ಚನ್ನಪಟ್ಟಣದಲ್ಲಿ ನ್ಯಾಯಾಲಯ ಆರಂಭಗೊಂಡು ನಲವತ್ತು ವರ್ಷಗಳು ಸಂದಿವೆ, ಚನ್ನಪಟ್ಟಣದಲ್ಲಿ ವಿ ವೆಂಕಟಪ್ಪನವರ ಆದಿಯಾಗಿ, ಡಿ ಟಿ ರಾಮು, ವರದೇಗೌಡ, ಸಾದತ್ ಅಲಿಖಾನ್, ಯೋಗೇಶ್ವರ್ ಅಶ್ವಥ್ ಸೇರಿದಂತೆ ಅನೇಕ ಶಾಸಕರು, ಮಂತ್ರಿಗಳು ಆಗಿಹೋಗಿದ್ದರೂ ಸಹ ತಾಲ್ಲೂಕಿನಲ್ಲಿ ಒಂದು ನ್ಯಾಯಾಲಯದ ಸ್ವಂತ ಕಟ್ಟಡ ನಿರ್ಮಿಸಲು ನಲವತ್ತು ವಸಂತಗಳನ್ನು ತೆಗೆದುಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದ್ದರು ಇಂದಾದರು ಕಟ್ಟಡ ನಿರ್ಮಾಣವಾಗಿದೆಯಲ್ಲ ಎಂಬುದೇ ಖುಷಿಯ ವಿಚಾರ.
ಮೂವತ್ತು ವರ್ಷ ಗೀತಾ, ಹತ್ತು ವರ್ಷ ಫರಾ ಬಿಲ್ಡಿಂಗ್
೧೯೭೮ ರಂದು ನಗರದ ಹೃದಯ ಭಾಗವಾದ ಬೆಂಗಳೂರು ಮೈಸೂರು ಹೆದ್ದಾರಿಯ ಈಗಿನ ಎಸ್ ಬಿ ಐ ಬ್ಯಾಂಕ್ ಪಕ್ಕದಲ್ಲಿರುವ ಮಾಜಿ ಶಾಸಕ ಎಂ ವರದೇಗೌಡರ *ಗೀತಾ ಬಿಲ್ಡಿಂಗ್* ನಲ್ಲಿ ಆರಂಭವಾದ ನ್ಯಾಯಾಲಯವೂ ಮೂವತ್ತು ದಶಕಗಳ ಕಾಲ ಕಾರ್ಯನಿರ್ವಹಿಸಿ ಸ್ಥಳವಕಾಶದ ಕೊರತೆಯಿಂದ ರೈಲ್ವೆ ನಿಲ್ದಾಣ ರಸ್ತೆಯ *ಫರಾ ಬಿಲ್ಡಿಂಗ್* ಗೆ ಸ್ಥಳಾಂತರಗೊಂಡಿತು.
ಇಲ್ಲಿಯೂ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನ್ಯಾಯಾಲಯವೂ ನಾಳೆ ಅಂದರೆ ೦೨/೦೨/೨೦೧೯ ರಂದು ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಹೊಸ ಕಟ್ಟಡ ಉದ್ಘಾಟನೆಯಾದ ಎರಡು ದಿನದ ತರುವಾಯ ಅಂದರೆ ೦೪/೦೨/೨೦೧೯ ರ ಸೋಮವಾರದಿಂದ ಕಾರ್ಯಾರಂಭ ಮಾಡಲಿದೆ.
ವಕೀಲರ ಸಂಘದಿಂದ ಮನವಿ
ವಕೀಲರ ಸಂಘದಿಂದಲೂ ಸಹ ಸಭೆ ನಡೆಸಿ ಈ ಮೇಲಿನ ಹೇಳಿಕೆಯನ್ನು ಅಧಿಕೃತವಾಗಿ ಘೋಷಿಸಿದರು, ಕಾರ್ಯನಿಮಿತ್ತ ಗೈರುಹಾಜರಾಗಿದ್ದ ವಕೀಲರ ಸಂಘದ ಅಧ್ಯಕ್ಷ ಕೆ ಟಿ ತಿಮ್ಮೇಗೌಡರ ಉಪಸ್ಥಿತಿಯಲ್ಲಿ ಉಪಾಧ್ಯಕ್ಷ ಎಂ ಕೆ ನಿಂಗಪ್ಪ, ಹರೀಶ್, ಹೇಮಂತ್, ಸುನಿಲ್ ರಾಜೇ ಅರಸು ಮತ್ತು ಸತೀಶ್ ರವರು ಹಾಜರಿದ್ದು ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ನೂತನ ನ್ಯಾಯಾಲಯ ಕಟ್ಟಡದ ಜಾಗ ವಿವಾದದಲ್ಲಿ
ಆರು ಎಕರೆ ಹತ್ತು ಗುಂಟೆ ಜಾಗದಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣ ಆಗಿದ್ದು, ಅಷ್ಟು ಜಾಗದ ಬದಲು ಮುಸ್ಲಿಂ ಸಮುದಾಯದವರಿಗೆ ಅಷ್ಟೇ ಜಾಗ ಮತ್ತು ಅಭಿವೃದ್ಧಿಗೆಂದು ಹಣವನ್ನು ಸಹ ಕೊಟ್ಟಿದ್ದಾರೆಂದು ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಹೇಳಿದರೆ, ವಕ್ಪ್ ಮಂಡಳಿಯವರು ನಮಗೆ ಮೋಸ ಮಾಡಿದ್ದಾರೆ, ಅವರು ಸದ್ಯ ನಾಲ್ಕು ಎಕರೆ ಮಾತ್ರ ಮಾರಾಟ ಮಾಡಿದ್ದು ಮಿಕ್ಕ ಎರಡು ಎಕರೆ ಹತ್ತು ಗುಂಟೆ ಜಮೀನು ನಮಗೆ ಸೇರಿದ್ದು ನಾವು ಕಾಂಪೌಂಡ್ ನಿರ್ಮಿಸುತ್ತೇವೆ ಎಂದು ಮುಸ್ಲಿಂ ಸಮುದಾಯದ ಪದಾಧಿಕಾರಿಗಳು ತಿಳಿಸುತ್ತಾರೆ, ಇವರಿಬ್ಬರ ಹೊರತಾಗಿ ಮಂಗಳವಾರಪೇಟೆಯ ಗ್ರಾಮಸ್ಥರು ಅನಾದಿಕಾಲದಿಂದಲೂ ನಾವು ಸಂಕ್ರಾಂತಿ ಹಬ್ಬವನ್ನು ಇಲ್ಲಿ ಆಚರಿಸುತ್ತಿದ್ದು ಈ ಜಾಗ ನಮಗೆ ಮೀಸಲು ಎಂದು ಪ್ರತಿಪಾದಿಸುತ್ತಿದ್ದಾರೆ.
ಅಧಿಕಾರಿಗಳು ಮತ್ತು ಮುಖಂಡರು ಚರ್ಚಿಸಿ ಬಗೆಹರಿಸಿ
ಅಧಿಕಾರಿಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯ ಮುಖಂಡರು ಚರ್ಚಿಸಿ ಶಾಶ್ವತವಾಗಿ, ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಒಳ್ಳೆಯದು, ನಮ್ಮ ತಾಲ್ಲೂಕು ಕೆಟ್ಟದ್ದಕ್ಕಾಗಿ ಇತಿಹಾಸ ನಿರ್ಮಿಸುವುದು ಬೇಡ, ತೊಂಭತ್ತರ ದಶಕದ ಕಪ್ಪು ಚುಕ್ಕೆಯನ್ನೇ ಇನ್ನೂ ಅಳಿಸಲಾಗಿಲ್ಲ, ನಾವೆಲ್ಲರೂ ಒಂದು ಎಂಬ ಮನೋಭಾವ ಮೂಡಿಸಲು ಇದು ಸಕಾಲವಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು