ಕಾಮಗಾರಿ ಮಾಡದೆ ಎರಡೇ ದಿನಕ್ಕೆ ನಾಲ್ಕು ಲಕ್ಷ ಗುಳುಂ ಮಾಡಿದ ಗುತ್ತಿಗೆದಾರ ಮತ್ತು ಇಂಜಿನಿಯರ್
ಅನುಮೋದನೆಗೊಂಡ ಎರಡೇ ದಿನಕ್ಕೆ ಸಂಪೂರ್ಣ ಪಾವತಿ
ಜಿಲ್ಲಾ ಪಂಚಾಯತ್ ತುಂಡು ಗುತ್ತಿಗೆಯಲ್ಲಿ ಎರಡು ತಂಗುದಾಣಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳ ತುಂಡು ಗುತ್ತಿಗೆ ಪಡೆದು ಕಾಮಗಾರಿ ಮಾಡದೇ ಅನುಮೋದನೆಗೊಂಡ ಎರಡೇ ದಿನಕ್ಕೆ ಹಣ ಪಾವತಿ ಮಾಡಿಕೊಂಡು ನಾಲ್ಕು ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದಿರುವುದು ಸಾಬೀತಾಗಿದೆ.
ಹರಿಸಂದ್ರ ಮತ್ತು ನೀಲಸಂದ್ರ ತಂಗುದಾಣ
ಸಾತನೂರು ರಸ್ತೆಯ ಹರಿಸಂದ್ರ ಗೇಟ್ ತಂಗುದಾಣ ಮತ್ತು ನೀಲಸಂದ್ರ ಗೇಟ್ ತಂಗುದಾಣಗಳನ್ನು ಅಭಿವೃದ್ಧಿ ಪಡಿಸಲೋಸುಗ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ೨೦೧೭/೧೮ ನೇ ಸಾಲಿನಲ್ಲಿ ತುಂಡು ಗುತ್ತಿಗೆ ಪಡೆದಿದ್ದು ಶೇಕಡಾ ೯೫ ಕ್ಕೂ ಹೆಚ್ಚು ಭಾಗ ಕೆಲಸ ಮಾಡದೆ ಬಿಲ್ ಪಡೆದಿರುವುದು ಗುತ್ತಿಗೆದಾರ ಮತ್ತು ಇಂಜಿನಿಯರ್ ಗಳ ಸೇವಾ ಕರ್ತವ್ಯವನ್ನು ತೋರಿಸುತ್ತದೆ.
ಎರಡು ತಂಗುದಾಣಗಳ ಅಷ್ಟೂ ಕೆಲಸ ಎರಡೇ ದಿನದಲ್ಲಿ!?
ತುಂಡು ಗುತ್ತಿಗೆಯ ಸಂಖ್ಯೆ ೯೦೩/೧೭/೧೮ ರ ಅನ್ವಯ ಎಂ ಎಸ್ ಕಿರಣಕುಮಾರ್ ಎಂಬುವವರು ಗುತ್ತಿಗೆ ಪಡೆದಿದ್ದು, ಇದರ ಉಸ್ತುವಾರಿ ಇಂಜಿನಿಯರ್ ಆಗಿ ಶಂಕರ್ ಎಂಬುವವರು ಕೆಲಸ ನಿರ್ವಹಿಸಿದ್ದಾರೆ. ೨೦/೦೩/೨೦೧೮ ರಂದು ಅನುಮೋದನೆ ಪಡೆದರೆ ೨೨/೦೩/೨೦೧೮ ರಂದು ಅಂದರೇ ಕೇವಲ ಎರಡೇ ದಿನಗಳಲ್ಲಿ ಸಂಪೂರ್ಣ ಹಣ ಪಡೆದಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಾನೂನು ಚುರುಕು ಮುಟ್ಟಿಸಬೇಕಾಗಿದೆ.
ಅಳತೆಯಲ್ಲೂ ಮೋಸ
ಹರಿಸಂದ್ರ ಬಸ್ ತಂಗುದಾಣ ಇರುವ ವಾಸ್ತವ ಅಳತೆ ೭.೫*೩.೪ ಆದರೆ ಬಿಲ್ ನಲ್ಲಿ ತೋರಿಸಿರುವುದು ೮*೪.೧ ಮೀಟರ್.
ನೀಲಸಂದ್ರ ತಂಗುದಾಣ ಅಳತೆ ೭.೬*೩*೫ ಇದ್ದರೆ ಬಿಲ್ ನಲ್ಲಿ ೮*೪.೧ ಮೀಟರ್ ಎರಡಕ್ಕೂ ಪಡೆದಿರುವ ಒಟ್ಟು ಹಣ ೧,೯೭,೮೨೮*೨=೩,೯೫,೬೫೬ ರೂಪಾಯಿಗಳು.
ಮೇಲ್ನೋಟಕ್ಕೆ ಕಂಡುಬರುವ ಪೂರ್ಣ ವೆಚ್ಚ ನಾಲ್ಕಂಕಿಯನ್ನು ದಾಟುವುದಿಲ್ಲ.
ಕಾಮಗಾರಿ ವಿವರ
ಈ ಎರಡು ತಂಗುದಾಣಗಳಿಗೂ ಪಿಸಿಸಿ, ಕಾಂಕ್ರೀಟ್, ವಿಟ್ರಿಫೈಡ್ ಟೈಲ್ಸ್ ಮತ್ತು ಸ್ಕರ್ಟಿಂಗ್ ಮಾಡಲು ಹಣ ಬಿಡುಗಡೆ ಮಾಡಿಸಿಕೊಂಡಿದ್ದು ಮಾಸಿದ ಬಣ್ಣ ಹೊರತುಪಡಿಸಿದರೆ ಮತ್ಯಾವ ಕಾಮಗಾರಿಯ ಕುರುಹು ಇಲ್ಲಿ ಕಾಣಸಿಗುವುದಿಲ್ಲ. ಜೊತೆಗೆ ನಮೂದಿಸಿರುವಂತೆ ಯಾವ ಕಾಮಗಾರಿಯೂ ನಡೆದಿಲ್ಲ.
ಎಸಿಬಿ ಗೆ ದೂರು
ಸಾಮಾಜಿಕ ಕಾರ್ಯಕರ್ತ ವಂದಾರಗುಪ್ಪೆ ಗ್ರಾಮದ ವಿ ಜಿ ಕೃಷ್ಣೇಗೌಡ ಎಂಬುವವರು ೨೧/೦೧/೨೦೧೯ ರಂದೇ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ, ಮಾನ್ಯ ಜಿಲ್ಲಾಧಿಕಾರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ದಾಖಲೆ ಸಮೇತ ಲಿಖಿತ ದೂರು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆಡೆ ಮಾಡಿದೆ.
ಈ ಎಲ್ಲಾ ದಾಖಲೆಗಳ ಸಮೇತ ಎಸಿಬಿ ಗೆ ದೂರು ನೀಡಲಾಗುವುದೆಂದು ನಮ್ಮ ಪತ್ರಿಕೆಗೆ ತಿಳಿಸಿದರು.
ಲಂಚದ ಆಮಿಷ
ಹೇಗೋ ಮಾಹಿತಿ ಪಡೆದ ಇಂಜಿನಿಯರ್ ಮತ್ತು ಗುತ್ತಿಗೆದಾರರು ಪೋನ್ ಮೂಲಕ ಸಂಪರ್ಕಿಸಿ ಮೂರು ದಿನಗಳಲ್ಲಿ ಕೆಲಸ ಮುಗಿಸುತ್ತೇವೆ ಎಂದು ಅವಕಾಶ ಕೋರಿದ್ದರು, ನನಗೂ ಸಹ ಸಂಪೂರ್ಣ ಮಾಹಿತಿ ಬೇಕಾದ್ದರಿಂದ ಕಲೆ ಹಾಕಲು ಸಮಯ ಸಿಕ್ಕಿತ್ತು, ಇದರ ನಡುವೆ ಇಂಜಿನಿಯರ್ ಮತ್ತು ಮತ್ತೊಬ್ಬರು ಬಂದು ಹಣದ ಆಮಿಷವೊಡ್ಡಿದ್ದರು, ಕಟುವಾಗಿ ತಿರಸ್ಕರಿಸಿ ಸುದ್ದಿಗೆ ಮಹತ್ವ ನೀಡಿದೆ.
ಬಗೆದಷ್ಟೂ ಸಿಗುವ ದಂಧೆಗಳು
ಸಂಬಂಧಿಸಿದ ಅಧಿಕಾರಿಗಳು ಮೀನಮೇಷ ಎಣಿಸದೆ ತನಿಖೆಗೆಒಳಪಡಿಸಿದರೆ ಇನ್ಮಷ್ಟು ಪ್ರಕರಣಗಳು ದೊರೆಯುವುದಲ್ಲಿ ಕಿಂಚಿತ್ತೂ ಅನುಮಾನವಿಲ್ಲ. ಅಧಿಕಾರಿಗಳು ಗುತ್ತಿಗೆದಾರನ ಆಮಿಷ ಮತ್ತು ರಾಜಕಾರಣಿಗಳ ಗುಲಾಮರಾಗದೆ ಇಂತಹ ವಿಷಜಂತುಗಳಿಗೆ ಕಾನೂನು ಚುರುಕು ಮುಟ್ಟಿಸ ಬೇಕಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು