ರೈತರಿಗೆ ವಿದ್ಯುತ್ ಲೋಪ, ಸಭೆ ನಡೆಸಿ ಸ್ಪಂದಿಸಿದ ಅಧಿಕಾರಿಗಳು
ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರಿಗೆ ಕೇವಲ ಏಳು ಗಂಟೆ ನೀಡುವ ವಿದ್ಯುತ್ ನ್ನು ಸಹ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಪ್ರತಿಭಟನೆ ಮಾಡಲು ಯೋಜನೆ ರೂಪಿಸಿದ್ದ ರೈತರನ್ನು ಇಂದು ನಗರದ ಕೆಪಿಟಿಸಿಎಲ್ ಕಛೇರಿಯಲ್ಲಿ ಅಧಿಕಾರಿಗಳು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಿಕೊಡಲು ತೀರ್ಮಾನಿಸಿದರು.
ದಿನದ ಏಳು ಗಂಟೆಯಲ್ಲಿ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದರೂ ಸಹ ಹಲವಾರು ಬಾರಿ ಮುಗ್ಗರಿಸಿ ನೀಡುತ್ತಿದ್ದು ಈ ಬೇಸಿಗೆಯ ಸಮಯದಲ್ಲಿ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ, ಲೈನ್ ಮನ್ ಗಳಾದಿಯಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ವಿದ್ಯುತ್ ತಂತಿಗಳ ಮೇಲೆ ಬಾಗಿರುವ ಮರಗಳನ್ಜು ಕಡಿಯದಿರುವುದರಿಂದ ಅಲ್ಲಲ್ಲೇ ವಿದ್ಯುತ್ ಪ್ರಸರಣ ಸಾಧ್ಯವಾಗುತ್ತಿಲ್ಲ, ಲೈನ್ ಮನ್ ಗಳು ಸ್ಥಳದಲ್ಲಿ ಇರದೇ ನಗರದಲ್ಲಿ ತಿರುಗಾಡುತ್ತಿರುತ್ತಾರೆ, ಜಂಪ್ ಹಾಕಲು ಸಹ ಇಂಜಿನಿಯರ್ ಕೇಳ್ರಿ ಎಂದು ದರ್ಪದಿಂದ ಉತ್ತರಿಸುತ್ತಾರೆ, ಎಂದು ಅಧಿಕಾರಿಗಳ ಮುಂದೆ ದೂರುಗಳ ಸುರಿಮಳೆಗೈದರು.
ಸುಳ್ಳೇರಿ ಗ್ರಾಮದ ರೈತ ಶಿವಣ್ಣ ನೀವು ಹೆಚ್ಚುವರಿಭಾರ (overload) ಏಕೆ ಎಂದು ಪ್ರಶ್ನಿಸಿ ಇದಕ್ಕೆ ಉತ್ತರ ನೀಡಲೇಬೇಕೆಂದು ನೀಡಲೇಬೇಕೆಂದು ಪಟ್ಟು ಹಿಡಿದರು, ಯಾರೋ ಖಾಸಗಿಯವರು ಮರ ಕಡಿಯಲು ಸಹ ನೀವು ವಿದ್ಯುತ್ ತೆಗೆದು ರೈತರಿಗೆ ಅನಾನುಕೂಲ ಮಾಡುವುದು ಸರಿಯೇ, ಕಾಲಕ್ಕೆ ತಕ್ಕಂತೆ ಹೆಚ್ಚುವರಿ ವೇತನ ಪಡೆಯುವ ನೀವು ರೈತರಿಗೇಕೆ ಕಡಿಮೆ ವಿದ್ಯುತ್ ಜೊತೆಗೆ ಕಡಿಮೆ ಗುಣಮಟ್ಟದ ವಿದ್ಯುತ್ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸಂತೆಮೊಗಳ್ಳಿ ದೊಡ್ಡಿಯ ರೈತ ರೋಹಿತ್ ಕನಕಪುರ ದಲ್ಲಿ ದಿನದ ಏಳು ಗಂಟೆಯೂ ಸಹ ರೈತರಿಗೆ ಹಗಲಿನಲ್ಲೇ ವಿದ್ಯುತ್ ಕೊಡುತ್ತಾರೆ, ಆದರೆ ಇದು ಚನ್ನಪಟ್ಟಣದಲ್ಲಿ ಏಕೆ ಸಾಧ್ಯವಿಲ್ಲ, ದಶಕದ ಹಿಂದೆ ಚನ್ನಪಟ್ಟಣ ಫೀಡರ್ ನಿಂದ ಗರಕಹಳ್ಳಿ ಗ್ರಾಮದ ತನಕ ೩೫೦ ರಿಂದ ೪೦೦ ವೋಲ್ಟೇಜ್ ಇತ್ತು, ಈಗ ೨೫೦ ವೋಲ್ಟೇಜ್ ಗೆ ಬಂದು ನಿಂತಿದೆ, ಪ್ರೈಮರಿ ಲೈನ್ ಗೆ ಹೇಗೆ ೧೧ ಕೆವಿ ಲೈನ್ ಎಳೆದಿದ್ದೀರಿ ಎಂದು ಪ್ರಶ್ನಿಸಿದರು.
ಸುಳ್ಳೇರಿ, ಮೆಂಗಳ್ಳಿ, ಕೃಷ್ಣಾಪುರ ಸಂತೆಮೊಗಳ್ಳಿದೊಡ್ಡಿ ಸೇರಿದಂತೆ ಅನೇಕ ಗ್ರಾಮದ ರೈತರು ಭಾಗವಹಿಸಿ ತಮ್ಮ ವಿದ್ಯುತ್ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.
ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಇನ್ನು ಮುಂದೆ ಹತ್ತರಿಂದ ಎರಡು ಗಂಟೆಯ ತನಕ ಹಾಗೂ ಎರಡರಿಂದ ಆರು ಗಂಟೆಯ ತನಕ ನಿರಂತರ ವಿದ್ಯುತ್ ನೀಡುವುದರ ಜೊತೆಗೆ, ಇನ್ನಿತರ ಲೋಪದೋಷಗಳನ್ನು ಎರಡು ತಿಂಗಳೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು, ಲೈನ್ ಮನ್ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ರೈತರಿಗೆ ತಕ್ಷಣ ಸ್ಪಂದಿಸುವುಂತೆ ಆದೇಶ ನೀಡಲಾಗುವುದು ಎಂದರು.
ಡಿವೈಎಸ್ಪಿ ಮಲ್ಲೇಶ್ ರವರು ಮಾತನಾಡಿ ನಿಮ್ಮ ನಿಮ್ಮ ಗ್ರಾಮದ ವಿದ್ಯುತ್ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ನೀಡಿ ರಶೀದಿ ಪಡೆಯಿರಿ, ಸೂಕ್ತ ಸಮಯದಲ್ಲಿ ಸ್ಪಂದಿಸಲಿಲ್ಲವೆಂದರೆ ನಂತರದ ಹಾದಿಯನ್ನು ತುಳಿಯಿರಿ, ರಾತ್ರಿ ವೇಳೆ ನೀರು ಹಾಯಿಸುವಲ್ಲೇನಾದರೂ ಸಮಸ್ಯೆ ಎದುರಾದರೆ ಪೋಲಿಸರನ್ನು ಸಂಪರ್ಕಿಸಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ಇತ್ತರು.
ನಗರ ಉಪವಿಭಾಗದ ಎಇಇ ಸಿ ಎನ್ ಶಿವಕುಮಾರ್, ಕೋಡಂಬಳ್ಳಿ ಉಪವಿಭಾಗದ ಎಇಇ ಚಿದಾನಂದ್, ಹೊಂಗನೂರು ಶಾಖೆಯ ಎಇ ಶಿವಕುಮಾರ್ ವೃತ್ತ ನಿರೀಕ್ಷಕ ಸತೀಶ್ ಸಭೆಯಲ್ಲಿ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು