ಹೊಂಗನೂರು ಜಿಲ್ಲಾ ಪಂಚಾಯತ್ ನ ಕನ್ನಮಂಗಲ ಗ್ರಾಮದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರನ ಕರಾಮತ್ತು
ಬಹುತೇಕ ಎಲ್ಲಾ ಪಂಚಾಯತಿಯಲ್ಲೂ
ತಾಲ್ಲೂಕಿನ ಎಲ್ಲಾ ಪಂಚಾಯತಿ ಯಲ್ಲಿ ಜಿಲ್ಲಾ ಪಂಚಾಯತ್ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ನಡೆದಿರುವ ಕಾಮಗಾರಿಗಳ ಕರ್ಮಕಾಂಡ ಬಗೆದಷ್ಟು ಆಳಕ್ಕೆ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ, ಎರಡು ಲಕ್ಷ ಬಿಲ್ ನ ಎರಡು ಕಾಮಗಾರಿ ಮಾಡಿ ಎರಡು ರೂಪಾಯಿ ಖರ್ಚು ಮಾಡದೇ ಬಿಲ್ ಮಾಡಿದ್ದು, ಐವತ್ತು ಸಾವಿರ ಖರ್ಚು ಮಾಡಿ ಐದು ಲಕ್ಷ ಬಿಲ್ ಮಾಡಿದ್ದು ಒಂದು ಕಡೆಯಾದರೆ ರಾಂಪುರ ಗ್ರಾಮ ಪಂಚಾಯತ್ ನ ಕನ್ನಮಂಗಲ ಗ್ರಾಮದಲ್ಲಿ ಹದಿನೆಂಟು ಸಾವಿರ ಖರ್ಚು ಮಾಡಿ ೨,೧೮,೦೦೦ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ.
ಈಡಾದ ಜೋಡಿಗೆ ದೂರು
ಮೇಲಿನ ಮೂರು ಕಾಮಗಾರಿಗಳ ಪರೀಕ್ಷಾರ್ಥ (ಪ್ರೊಬೆಷನರಿ) ಸೇವಾವಧಿಯಲ್ಲಿರುವ ಕಿರಿಯ ಇಂಜಿನಿಯರ್ ಶಂಕರ್ ಮೂಲ ಕಾರಣವಾಗಿದ್ದು ಲಾಳಾಘಟ್ಟ ದ ಶಾಲೆ ಮತ್ತು ಕನ್ನಮಂಗಲ ಶಾಲೆಯ ಗುತ್ತಿಗೆದಾರ ಭೈರಾಪಟ್ಟಣದ ಜೈಕುಮಾರ್ ಎಂಬುವ ಮಹಾನುಭಾವ ಕೆಲಸ ನಿರ್ವಹಿಸಿದ್ದು ಇವೆಲ್ಲ ಕಾಮಗಾರಿಗಳ ವಿರುದ್ದ ಮಾಹಿತಿ ಹಕ್ಕುದಾರರು ಜಿಲ್ಲಾ ಪಂಚಾಯತ್ ನ ಕಾರ್ಯಪಾಲಕ ಅಭಿಯಂತರವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕಾನೂನು ಕ್ರಮ ಕೈಗೊಳ್ಳುದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಉಂಟು ಮಾಡುತ್ತಿದೆ.
ಕಾಲು ಭಾಗ ಮುಕ್ಕಾಲು ಭಾಗ
ಹೊಂಗನೂರು ಜಿಲ್ಲಾ ಪಂಚಾಯತ ವ್ಯಾಪ್ತಿಯ ರಾಂಪುರ ಗ್ರಾಮ ಪಂಚಾಯತಿ ಯ ಕನ್ನಮಂಗಲ ಗ್ರಾಮದಲ್ಲಿನ ಪ್ರೌಢಶಾಲಾ ಕಟ್ಟಡ ದುರಸ್ತಿ ಮತ್ತು ರ್ಯಾಂಪ್ ನಿರ್ಮಾಣ ಕಾಮಗಾರಿ ಎಂದು ಕಳೆದ ಮಾಚ್೯ ತಿಂಗಳಲ್ಲಿ ೨,೧೮,೦೦೦ ರೂಪಾಯಿಗಳ ಬಿಲ್ ಪಡೆದಿದ್ದು ಶಾಲೆಯ ಮುಂಭಾಗ ಮತ್ತು ಒಳಭಾಗದಲ್ಲಿ ಕಳಪೆ ಗುಣಮಟ್ಟದ ಬಣ್ಣ ಬಳಿದಿದ್ದು ಬಿಟ್ಟರೆ ಸುರ್ಕಿಯಾಗಲಿ ಕಿತ್ತುಹೋಗಿರುವ ಕಡೆ ಮುಚ್ಚಿ ನಂತರ ಬಣ್ಣ ಬಳಿಯುವ ಕೆಲಸ ಮಾಡದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಶಿಕ್ಷಕರ ಮನವಿಗೆ ಉಡಾಫೆಯ ಉತ್ತರ
ಅಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಒಂದು ಕೊಠಡಿ ಮಳೆ ಬಂದಾಗ ಸೋರುತ್ತಿದೆ ಸುರ್ಕಿ ಹಾಕಿ ಎಂದು ಹೇಳಿದ್ದಕ್ಕೆ ಇದೇ ಗುತ್ತಿಗೆದಾರ ಇದು ಮಾಡ್ತಾ ಇರೋದೆ ಹೆಚ್ಚು ರೀ ನಮ್ ಎಸ್ಟೀಮೇಟ್ ನಲ್ಲಿ ಇಲ್ಲ ಅದು ಎಂಬ ಉಡಾಫೆಯ ಉತ್ತರ ಕೊಟ್ಟಿದ್ದಾಗಿ ತಿಳುದುಬಂದಿದೆ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ರಿಗಾಗಲಿ, ಎಸ್ ಡಿ ಎಂ ಸಿ ಸದಸ್ಯರ ಗಮನಕ್ಕೆ ತರದೇ ಅವರಿಂದ ಯಾವುದೇ ರೀತಿಯ ಸಹಿಯನ್ನು ಪಡೆಯದೇ ಕೇವಲ ಬಣ್ಣ ಬಳಿದು ಹೋಗಿರುವುದು ಇವರೇನು ಗುತ್ತಿಗೆದಾರರೋ ? ಅಥವಾ ಧನಪಿಶಾಚಿಗಳೋ ಎಂದು ಅನುಮಾನ ಮೂಡುತ್ತಿದೆ.
ಬಿಲ್ ನಲ್ಲಿ ಎರಡು ಕೊಠಡಿ ಹೆಚ್ಚುವರಿ
ಶಾಲೆಯಲ್ಲಿ ಇರುವುದೇ ಐದು ಕೊಠಡಿಗಳು, ಬಿಲ್ ನಲ್ಲಿ ತೋರಿಸಿರುವುದು ಏಳು ಕೊಠಡಿ, ಹಾಗೂ ಚುರ್ಕಿ ಗೆ ೧,೫೮,೬೫೨ ರೂಪಾಯಿಗಳನ್ನು, ಬಣ್ಣಕ್ಕೆ ೫೩,೧೭೭ ರೂಪಾಯಿಗಳನ್ನು ನಿಗದಿ ಮಾಡಿದ್ದು ಸರ್ಕಾರಕ್ಕೆ ಕನಿಷ್ಠ ೧,೬೨,೦೦೦ ರೂಪಾಯಿಗಳಿಂದ ೨,೦೦,೦೦೦ ರೂಪಾಯಿಗಳು ಖೋತಾ ಆಗಿರುವುದು ಸ್ಪಷ್ಟ.
ಬಿಇಓ ಗಮನಹರಿಸಲಿ
ಅದು ಯಾವುದೇ ಪಂಚಾಯತಿ ಯ ಕಾಮಗಾರಿಗಳಾದರೂ ಆಗಲಿ ಶಾಲೆಗಳಲ್ಲಿ ನಡೆಯುತ್ತಿದ್ದರೆ ಅಲ್ಲಿಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಅವರು ಅದನ್ನು ಸಂಬಂಧಿಸಿದ ಗುತ್ತಿಗೆದಾರ, ಇಂಜಿನಿಯರ್ ರನ್ನು ಸಂಪರ್ಕಿಸಿ ಗುಣಮಟ್ಟದ ಕೆಲಸಕ್ಕೆ ಒತ್ತು ಕೊಡಬೇಕು, ಇದು ಅವರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದರು ಸಹ ಅಲ್ಲಿ ಕಲಿಯುವ ಮಕ್ಕಳು ಭವಿಷ್ಯದ ಪ್ರಜೆಗಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆಲಸ ನಿರ್ವಹಿಸಬೇಕಾಗಿದೆ.
ಸೂಕ್ತ ಕಾನೂನು ಕ್ರಮ ಜರುಗಿಸಲಿ
ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಪಂಚಾಯತ್ ರಾಜ್ ನ ಕಾರ್ಯಪಾಲಕ ಇಂಜಿನಿಯರ್ ರವರು ಈ ಎಲ್ಲಾ ಕಾಮಗಾರಿಗಳನ್ನು ತನಿಖೆಗೊಳಪಡಿಸಿ ಗುತ್ತಿಗೆದಾರ ಜೈಕುಮಾರ್ ಮತ್ತು ಪರೀಕ್ಷಾರ್ಥ ಇಂಜಿನಿಯರ್ ಶಂಕರ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಾಮಗಾರಿ ಮಾಡದೆ ಉಳಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು