ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು
ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ದೇವಸ್ಥಾನದ ತೀರ್ಥಪ್ರಸಾದ ವನ್ನು ದೂರದಿಂದ ಹಾಕುತ್ತಾರೆ, ನಮಗೆ ನ್ಯಾಯ ಒದಗಿಸಿ, ದೇವಾಲಯ ಪ್ರವೇಶಿಸಲು, ದೇವರನ್ನು ಪೂಜಿಸಲು ಅನುವು ಮಾಡಿಕೊಡಿ ಎಂದು ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೆಲವು ಭಾಗದ ದಲಿತರು ಕೇಳುತ್ತಿದ್ದರೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ (ಚನ್ನಪಟ್ಟಣ ತಾಲ್ಲೂಕಿನ ಗಡಿ ಗೆ ಹೊಂದಿಕೊಂಡಿದೆ) ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ *ಹೆಬ್ಬಾರಮ್ಮ* ದೇವಾಲಯದಲ್ಲಿ ಎಂಟುನೂರು ವರ್ಷಗಳಿಂದಲೂ ದಲಿತರೇ ಪೌರೋಹಿತ್ಯ ವಹಿಸಿಕೊಂಡು ಪೂಜಿಸುತ್ತಿರುವುದು ಆಶ್ಚರ್ಯವಾದರು ಸತ್ಯ.
ಉಜ್ಜನಿ ಗ್ರಾಮದ ಗ್ರಾಮದೇವತೆ ಹೆಬ್ಬಾರಮ್ಮ ದೇವಿ ಯ ದೇವಾಲಯ ಸರಿ ಸುಮಾರು ಎಂಟು ನೂರು ವರ್ಷಗಳ ಇತಿಹಾಸ ಹೊಂದಿದೆ. ಸಣ್ಣ ಮಣ್ಣಿನ ದೇವಾಲಯ ಹೊಂದಿದ್ದ ಅಮ್ಮನವರ ದೇವಸ್ಥಾನ ನಂತರ ದುರಸ್ತಿಗೊಳಿಸಿ ಹೆಂಚು ಹೊದಿಸಲಾಗಿತ್ತು, ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ದೊಡ್ಡ ದೇವಾಲಯ ನಿರ್ಮಾಣಗೊಂಡಿದೆ. ಪ್ರತಿ ವರ್ಷವೂ ಯುಗಾದಿ ಹಬ್ಬವಾದ ಹದಿನೈದು ದಿನಕ್ಕೆ ಸರಿಯಾಗಿ ಜಾತ್ರೆ ಪ್ರಾರಂಭವಾಗಿ ಹತ್ತೊಂಭತ್ತು ದಿನಗಳವರೆಗೆ ವಿಶೇಷ ಪೂಜಾ ವಿಧಿವಿಧಾನಗಳು ನಡೆಯತ್ತವೆ.
ಬಹುತೇಕ ಎಲ್ಲಾ ಸಮುದಾಯದ ಜನರು ಗ್ರಾಮದಲ್ಲಿ ವಾಸವಿದ್ದು ದೇವಾಲಯದಲ್ಲಿ ಜಾತಿ ಪದ್ದತಿಯು ಎಂದೂ ಬಂದಿಲ್ಲ, ಸರ್ವ ಜನಾಂಗೀಯ ಬಂಧುಗಳು ದಿನನಿತ್ಯದ ಪೂಜೆಯ ಜೊತೆಗೆ ಹಬ್ಬ ಹರಿದಿನ ಹಾಗೂ ಜಾತ್ರೆಯಂತಹ ವಿಶೇಷ ದಿನಗಳಲ್ಲಿ ಸೌಹಾರ್ದತೆಯಿಂದ ಪೂಜೆಯಲ್ಲಿ ಪಾಲ್ಗೊಂಡು ದೇವಿ ಯ ಕೃಪೆಗೆ ಪಾತ್ರರಾಗುತ್ತಾರೆ.
ತಲತಲಾಂತರದಿಂದ ವಂಶ ಪಾರಂಪರ್ಯವಾಗಿ ಬಂದಿರುವ ಅರ್ಚಕ ವೃತ್ತಿಯಲ್ಲಿ ಈಗ ನಾಗಣ್ಣ, ರಾಮಕೃಷ್ಣ, ವಡೆನಿಂಗಯ್ಯ, ರಾಜು, ಮರಿಚೌಡಯ್ಯ ಮತ್ತು ಚೌಡೇಶ್ ಎಂಬ ಆರು ಮಂದಿ ಸಹೋದರರು ಒಗ್ಗೂಡಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ, ಜಾತ್ರಾ ಸಮಯದ ಒಟ್ಟು ಹತ್ತೊಂಬತ್ತು ದಿನಗಳಲ್ಲಿ ಈ ಆರು ಮಂದಿಯೂ ಸಂಪೂರ್ಣ ಮನೆತೊರೆದು, ದೇವಾಲಯದಲ್ಲಿಯೇ ವಾಸ್ತವ್ಯ ಹೂಡುತ್ತಾರೆ.
ಬ್ರಾಹ್ಮಣ ಪುರೋಹಿತರಿಂದ ದೀಕ್ಷೆ ಪಡೆದು ಜನಿವಾರ ಧರಿಸಿ ದೇವಾಲಯದಲ್ಲಿರುವ ತನಕವೂ ರಾತ್ರಿ ಸಮಯ ಮಾತ್ರ ಫಲಹಾರ ಸೇವಿಸಿ ಮಿಕ್ಕಂತೆ ಉಪವಾಸ ಇರುತ್ತಾರೆ, ಜೊತೆಗೆ ದೇವಾಲಯ ಬಿಟ್ಟು ತಮ್ಮ ಸ್ವಂತ ಮನೆಗಾಗಲಿ, ಪರ ಊರಿಗಾಗಲಿ ಹೋಗುವುದಿಲ್ಲ, ಈ ಹತ್ತೊಂಬತ್ತು ದಿನಗಳು ಸಂಪೂರ್ಣವಾಗಿ ಬ್ರಹ್ಮಚಾರಿ ಬ್ರಾಹ್ಮಣ ರಂತೆಯೇ ನಡೆದುಕೊಂಡು ಬರುತ್ತಾರೆ. ದೇವಾಲಯದಲ್ಲಿ ಪೂಜೆ ನೆರವೇರಿಸುವವರು ಶುಚಿತ್ವದಿಂದ (ಮಡಿ ಮೈಲಿಗೆ) ಇರಬೇಕೆಂಬ ಉದ್ದೇಶದಿಂದಲೇ ಈ ಕಟ್ಟುಪಾಡುಗಳನ್ನು ಮಾಡಿದ್ದಾರೆ.
ಕೊಂಡ ಹಾಯುವ ಸಂದರ್ಭದಲ್ಲಿಯೂ ಸಹ ಈ ಆರು ಜನ ಸಹೋದರರ ಜೊತೆಗೆ ಒಕ್ಕಲಿಗ ಜನಾಂಗದ ಮೂರು ಮಂದಿಯೂ ಸಹ ಕೊಂಡ ಹಾಯುವುದು ವಿಶೇಷ.
ಏನಾದರಾಗಲಿ ಜಾತಿ ತಾರತಮ್ಯ ಮಾಡುವ ಇಂದಿನ ಕಾಲಕ್ಕೆ ಹೋಲಿಸಿದರೆ ಶತಶತಮಾನಗಳ ಹಿಂದೆಯೇ ದೇವಾಲಯದಲ್ಲಿ ದಲಿತರಿಗೆ ಮನ್ನಣೆ ನೀಡಿರುವುದು ಹಾಗೂ ಇಂದಿಗೂ ನಡೆದುಕೊಂಡು ಬರುತ್ತಿರುವುದು ಜಾತ್ಯಾತೀತೆಯ ಸಂಕೇತವೇ ಸರಿ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು