ಚನ್ನಪಟ್ಟಣ ನಗರಸಭೆ ಮತ್ತು ಹೆದ್ದಾರಿ ಚರಂಡಿಗಳ ಕಳಪೆ ಕಾಮಗಾರಿ
ಚನ್ನಪಟ್ಟಣ ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಜೊತೆಗೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿರುವುದು ಸರಿಯಷ್ಟೇ, ನಗರಸಭೆಯ ವತಿಯಿಂದ ನಡೆದ ಒಳ ಚರಂಡಿ ಕಾಮಗಾರಿಗಳಲ್ಲಿ ರಸ್ತೆ ಮತ್ತು ಚರಂಡಿ (ಬಾಕ್ಸ್) ನಿರ್ಮಾಣವಾದ ನಂತರ ಮೇಲೆ ಸಿಮೆಂಟ್ ಸ್ಲ್ಯಾಬ್ ಗಳನ್ನು ಅಳವಡಿಸಿದ್ದಾರೆ, ಇದು ಕ್ರಮಬದ್ಧವಾಗಿ ಇಲ್ಲ, ಹಾಗೂ ಅಳವಡಿಸಿದ ನಂತರ ಸಿಮೆಂಟ್ ಹಾಕಿ ಮುಚ್ಚದೆ ಇರುವುದರಿಂದ ಪಾದಚಾರಿಗಳು, ಅಂಗಡಿ ಮತ್ತು ನಿವಾಸಿಗಳು ಓಡಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ.
ಇನ್ನೂ ಬೆಂಗಳೂರು ಮೈಸೂರು ಹೆದ್ದಾರಿಯ ಎರಡೂ ಬದಿಯಲ್ಲಿ ಸಿಮೆಂಟ್ ಸ್ಲ್ಯಾಬ್ ಅಳವಡಿಸಿ ನಂತರ ರಫ್ ಟೈಲ್ಸ್ ಹಾಕಿದ್ದಾರೆ, ಕೆಲವು ಕಡೆ ಸಣ್ಣ ಮಕ್ಕಳು ಹೋದರೆ ನೇರ ಚರಂಡಿಯೊಳಗೆ ಬೀಳುವುದು ಪಕ್ಕಾ ! ಅಷ್ಟು ದೊಡ್ಡ ದೊಡ್ಡ ಕಂದಕಗಳಿವೆ, ದೊಡ್ಡವರೂ ಸಹ ಓಡಾಡುವ ಸಂದರ್ಭದಲ್ಲಿ ತಪ್ಪಿ ಕಾಲಿಟ್ಟರೇ ಕಾಲು ಮುರಿದು ಆಸ್ಪತ್ರೆ ಸೇರುವುದು ಖಚಿತ.
ಇನ್ನು ಅಳವಡಿಸಿಸಿರುವ ಟೈಲ್ಸ್ ಗಳಿಗೆ ಕಡಿಮೆ ಪ್ರಮಾಣದ ಸಿಮೆಂಟ್ ಬಳಸಿ ಹಾಕಿರುವುದರಿಂದ ಈಗಾಗಲೇ ಎದ್ದು ಹೋಗಿವೆ.
ಚನ್ನಪಟ್ಟಣ ನಗರಸಭೆಯ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯು ಜಾರಿಯಲ್ಲಿ ಇಲ್ಲ. ನಗರದ ಯಾವ ಭಾಗಕ್ಕೆ ಹೋದರೂ ಸಹ ಚರಂಡಿಗಳು ಗಬ್ಬೆದ್ದು ನಾರುತ್ತಿವೆ.
ಈ ನಗರಗಳನ್ನು ಒಳಚರಂಡಿ ಯೋಜನೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಪ್ರತಿ ಬೀದಿಯಲ್ಲಿಯೂ ಒಳಚರಂಡಿ ಬಾವಿಗಳನ್ನು ತೋಡಿ ಅವುಗಳಿಗೆ ಪೈಪ್ಗಳನ್ನು ನಾಲ್ಕಾರು ವರ್ಷಗಳ ಹಿಂದೆಯೇ ಅಳವಡಿಸಲಾಗಿತ್ತು.
ಆದರೆ ಅವುಗಳ ಕಾರ್ಯಗತವು ಮರಿಚೀಕೆಯಾಗಿ ಉಳಿದಿದೆ. ಈಗ ಬಹುಪಾಲು ಎಲ್ಲಕಡೆಯೂ ಕಕ್ಕಸ್ ನೀರನ್ನು ಚರಂಡಿಗೆ ಹರಿಸಲಾಗುತ್ತಿದೆ.
ಈ ರೀತಿಯಲ್ಲಿ ಹರಿಯುವ ಕಕ್ಕಸ್ ನೀರು ಅದರ ಮೇಲೆ ಕಕ್ಕಸ್ ಲೀಲಾಜಾಲವಾಗಿ ತೇಲಾಡುತ್ತಿರುತ್ತದೆ.
ಹೊರಊರಿನಿಂದ ಬಂದವರು ಇದು ಏನು ಇಷ್ಟು ಗಬ್ಬು ವಾಸನೆ ಇಲ್ಲಿನ ನಾಗರೀಕರು ಯಾರಿಗೂ ಮೂಗು ಕೆಲಸ ಮಾಡುತ್ತಿಲ್ಲವೆ ಎಂದು ಪ್ರಶ್ನಿಸುತ್ತಾರೆ.
ಆಗ ಇವರಿಗೆ ಮೂಗಷ್ಟೇ ಕೆಲಸ ಮಾಡುತ್ತಿಲ್ಲ ಎಂದೇನಿಲ್ಲ ಇಲ್ಲಿನಜನರಿಗೆ ಬಾಯಿಯೂ ಇಲ್ಲ, ಕಿವಿಯೂಇಲ್ಲ, ಕಣ್ಣು ಇಲ್ಲವೇ ಇಲ್ಲ ಎಂದು ಹೇಳಿ ತೃಪ್ತಿಪಟ್ಟುಕೊಳ್ಳಬೇಕು.
ಇತ್ತಿಚೆಗೆ ಪೇಟೆ ಬೀದಿ ಎಂ.ಜಿ.ರಸ್ತೆಯ ಪಕ್ಕದ ಚರಂಡಿಗಳಿಗೂ ಸಹ ಸೀಮೆಂಟ್ ಸ್ಲಾಬ್ನ್ನು ಹಾಕಲಾಗಿದೆ.ಅವುಗಳನ್ನು ಕ್ರಮಬದ್ಧವಾಗಿ ಕೂರಿಸಿ ಸಿಮೇಂಟ್ ಹಾಕುವ ಕೆಲಸ ನಡೆದಿಲ್ಲ. ಒಂದು ರೀತಿಯಲ್ಲಿ ಈ ಸ್ಲಾಬ್ಗಳು ಸಂಗೀತ ಸ್ಲಾಬ್ಗಳಾಗಿ ಕೆಲಸ ಮಾಡುತ್ತಿವೆ.
ಈ ಸ್ಲಾಬ್ಗಳಲ್ಲಿ ಅಲ್ಲಲ್ಲೆ ತೂತುಗಳನ್ನು ಮಾಡಿರುವುದರಿಂದ ಚರಂಡಿಯಲ್ಲಿ ಹರಿಯುವ ಕಕ್ಕಸಿನ ವಾಸನೆ ಗೌವ್ವನೆ ಮೂಗಿಗೆ ಮುತ್ತುತ್ತದೆ.
ಬೇರೆ ಬೇರೆ ಜಾಗದಲ್ಲಿಯೂ ಇದೇಕಥೆ:
ನಗರದ ಸಣ್ಣಪುಟ್ಟ ಜನವಸತಿ ಪ್ರದೇಶದಲ್ಲಿಯೂ ಸಹ ಚನ್ನಾಗಿ ಇದ್ದ ಚರಂಡಿಗಳನ್ನು ಕಿತ್ತು ಹಾಕಿ ಬಾಕ್ಸ್ ಚರಂಡಿಗಳನ್ನು ಮಾಡಲಾಗಿದೆ.
ಈ ಚರಂಡಿಗಳಿಗೆ ಮೇಲ್ಗಡೆ ಸ್ಲಾಬ್ಗಳನ್ನು ಅಳವಡಿಸಿಲ್ಲ, ಮತ್ತೆ ಕೆಲವು ಕಡೆ ಅಳವಡಿಸಲಾಗಿದೆ. ಅವು ಸುಸಜ್ಜಿತ ವಾಗಿ ಸದ್ದು ಮಾಡದರೀತಿಯಲ್ಲಿ ಮಾಡಿಲ್ಲ. ಏನೋ ಕಾಟಾಚಾರಕ್ಕೆ ಮಾಡಲಾಗಿದೆ. ಅದರಮೇಲ್ಗಡೆ ವಾಹನ ಹರಿದು ಎಲ್ಲಿ ಕಳಚಿಕೊಳ್ಳಬಹುದು ಎಂದು ಕೆಲವುಕಡೆ ಮನೆಯವರೇ ಕಲ್ಲುಗಳು ಹಾಗೂ ಸಿಮೆಂಟ್ ಇಟ್ಟಿಗೆಗಳನ್ನು ಇಟ್ಟು ಆ ಭಾಗದಲ್ಲಿ ವಾಹನಗಳು ಓಡಾಡದ ರೀತಿಯಲ್ಲಿ ಮಾಡಿಕೊಂಡಿದ್ದಾರೆ. ಮೊದಲೇ ಕಿರಿದಾಗಿರುವ ರಸ್ತೆಗಳಲ್ಲಿ ಇದೊಂದು ರೀತಿಯ ಸಮಸ್ಯೆಯು ಹೆಗಲೇರಿದೆ.
ನಗರಸಭೆ ಏನಾದರು ಕಾಮಗಾರಿಯನ್ನು ಮಾಡಿದರೆ ಅದು ಜನಪಯೋಗಿಯಾಗುವ ರೀತಿಯಲ್ಲಿ ಮಾಡಬೇಕು.ಅದು ಬಿಟ್ಟುಜನರಿಗೆ ಹಿಂಸದಾಯಾಗುವ ಹಾಗುವ ರೀತಿಯಲ್ಲಿ ಮಾಡಿದರೆ ಅದು ತೆರಿಗೆದಾರರಿಗೆ ಮಾಡಿದ ಮೋಸ, ಹೀಗೆ ಮಾಡಿ ಖುಷಿ ಪಡುವಂತದ್ದು ಒಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿ.
ಈ ಕಾಮಗಾರಿಯನ್ನುಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಾವು ಚರಂಡಿ ಮಾಡಿ ಸ್ಲಾಬ್ಗಳನ್ನು ಇಡುವುದು ಅಷ್ಟೆ, ಅವುಗಳನ್ನು ಸುಸಜ್ಜಿತವಾಗಿ ಇಡಲು ಯೋಜನೆಯಲ್ಲಿ ಅವಕಾಶ ಮಾಡಿಲ್ಲ, ಎಂದು ಜಾರಿಕೊಳ್ಳುವ ಕೆಲಸವನ್ನು ಬಹಳ ಕ್ರಮಬದ್ಧವಾಗಿ ಮಾಡುತ್ತಿದ್ದಾರೆ.
ಕೇವಲ ಚರಂಡಿ ಮಾಡಿ ಮೇಲ್ಗಡೆ ಸ್ಲಾಬ್ಗಳನ್ನು ಹೇಗೆಂದರೆ ಹಾಗೆ ಎಸೆದು ಹೋಗುವ ಕೆಲಸವನ್ನು ಮಾಡಲಾಗಿದೆ.
ಅದಾವರೀತಿಯಗುಣಮಟ್ಟದಕಾಮಗಾರಿಯಾದಿತು? ಅದಾವ ರೀತಿಯ ಸುಧಾರಿತ ಕಾಮಗಾರಿಯಾದಿತು.
ಯಾವುದೇ ಒಂದು ಕಾಮಗಾರಿ ಮಾಡಿದರು ಜನಪಯೋಗಿ ಆದ ಹಾಗೂ ಸುಧಾರಿತವಾದ ಕಾಮಗಾರಿಯಾಗಬೇಕು ಅದು ಬಿಟ್ಟು ಹಿಂಸೆದಾಯಕವಾದ ಕಾಮಗಾರಿಯಾಗುವುದು ನಿಜಕ್ಕೂಅನ್ಯಾಯ.
ನಗರಸಭೆಗೆ ಯಾವ ಕಾಮಗಾರಿ ಹೇಗಿರಬೇಕು, ಅದು ಎಷ್ಟರ ಮಟ್ಟಿಗ ಜನೋಪಯೋಗಿಯಾದ ಕಾಮಗಾರಿ ಎಂಬ ಪ್ರಜ್ಞೆ ಇರಬೇಕು.ಅದು ಬಿಟ್ಟು ಹೀಗೆ ಅಡ್ಡಾದಿಡ್ಡಿ ಆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕು ?
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು