ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು
ಚನ್ನಪಟ್ಟಣ,: ನಿನ್ನೆ ಸಂಜೆ ಬೀಸಿದ ಫೋನಿ ಚಂಡಮಾರುತದಿಂದ ತಾಲ್ಲೂಕಿನ ಅನೇಕ ರೈತರ ಬದುಕು ಮಣ್ಣಾಗಿ ಹೋಗಿದೆ, ತಾಲ್ಲೂಕಿನ ಎಲೆ ಭೂಹಳ್ಳಿ ಎಂದೇ ಹೆಸರುವಾಸಿಯಾದ ಭೂಹಳ್ಳಿ ಗ್ರಾಮದ ಅನೇಕ ರೈತರ ವೀಳ್ಯದೆಲೆ ತೋಟಗಳು, ಹುಲುಸಾಗಿ ಬೆಳೆದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದು ರೈತರ ಕಣ್ಣಲ್ಲಿ ನೀರು ಹರಿಯುವಂತೆ ಮಾಡಿದೆ.
ಈಗಾಗಲೇ ಮಾವಿನ ಹಣ್ಣು ಬಹುತೇಕ ಕಟಾವು ಆಗಿದ್ದು, ಇರುವ ಕಾಯಿಗಳು ನೆಲಕಚ್ಚಿವೆ, ಹತ್ತಾರು ಮೀಟರ್ ಎತ್ತರಕ್ಕೆ ಹಬ್ಬಿಸಿದ್ದ ವೀಳ್ಯದೆಲೆ ಹಂಬುಗಳು ಊರುಗೋಲಾಗಿ ಬೆಳೆಸಿದ್ದ, ನುಗ್ಗೆಮರಗಳು, ಅಗಚೆ, ಇನ್ನಿತರ ಮರಗಳ ಸಮೇತ ನೆಲಕ್ಕುರುಳಿದ್ದು ಇಂದು ಬೆಳಿಗ್ಗೆ ಮನೆಮಂದಿಯೆಲ್ಲರೂ ತೆರವುಗೊಳಿಸಿ ಅಳದುಳಿದ ಹಂಬುಗಳನ್ನು ಎತ್ತಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದರು.
ಕೊಯ್ಲಿಗೆ ಬಂದ ಬಾಳೆ ಗಿಡಗಳು ಒಂದರ ಮೇಲೊಂದು ಬುಡ ಸಮೇತ ಬಿದ್ದು ಅತ್ತ ಕಾಯಿ ಅಲ್ಲದೇ ಇತ್ತ ಹಣ್ಣು ಆಗದಿರುವ ರೀತಿಯ ೩೦/೪೦ ಕಿಲೋ ತೂಗುವ ಬಾಳೆ ಗಿಡಗಳು ಬಿದ್ದು ರೈತನ ಬದುಕು ಮೂರಾಬಟ್ಟೆಯಾಗಿವೆ.
ಫಲ ನೀಡುತ್ತಿದ್ದ ತೆಂಗಿನ ಮರಗಳು ಕೆಲವು ಬುಡಸಮೇತ ಬಿದ್ದಿದ್ದರೇ ಮತ್ತು ಕೆಲವು ಅರ್ಧಕ್ಕೆ ಮುರಿದು ಬಿದ್ದಿವೆ, ಗಾಳಿಯ ಹೊಡೆತಕ್ಕೆ ಅನೇಕ ರೀತಿಯ ಮರಗಳು ಸಹ ಬಿದ್ದು ಅನ್ನದಾತನ ತಟ್ಟೆಗೆ ಮಣ್ಣು ಬಿದ್ದಿದೆ.
ಒಂದು ಕಡೆ ಕಾಡಾನೆಗಳ ಹಾವಳಿ, ವಿದ್ಯುತ್ ಕಣ್ಣಾಮುಚ್ಚಾಲೆ, ಇತ್ತೀಚೆಗೆ ಕುಸಿಯುತ್ತಿರುವ ಅಂತರ್ಜಲ ಮತ್ತು ವ್ಯವಸಾಯಕ್ಕೆ ಸಿಗದ ಕೂಲಿ ಕಾರ್ಮಿಕರು ಇವೆಲ್ಲದರ ನಡುವೆ ಬೆಳೆದ ಫಸಲು ಅತಿವೃಷ್ಟಿಯಿಂದ ಹೀಗಾದಾಗ *ವ್ಯವಸಾಯ ಎಂದರೆ ಮನೆ ಮಂದಿಯೆಲ್ಲಾ ಸಾಯ* ಎಂಬ ನಾಣ್ಣುಡಿ ಸತ್ಯ ಎಂಬುದು ಸಾಬೀತಾಗುತ್ತದೆ.
ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ರೈತನ ಬದುಕು ಹಸನು ಮಾಡುವಂತಹ ಕೃಷಿ ನೀತಿ ಇಲ್ಲದಿರುವುದು, ರೈತನ ಹೆಸರಿನಲ್ಲಿ ಅಧಿಕಾರ ಹಿಡಿಯುವ ರಾಜಕಾರಣಿಗಳ ಗೋಸುಂಬೆತನವನ್ನು ತೋರಿಸುತ್ತದೆ.
ರೈತರ ಹೆಸರೇಳಿಕೊಂಡು ಅಧಿಕಾರ ಹಿಡಿಯಲು ಹೊಂಚು ಹಾಕಿ ಸುಳ್ಳು ಭರವಸೆ ಕೊಟ್ಟು ನಂತರ ಮರೆಯುವ ಎಲ್ಲಾ ಪಕ್ಷದ *ಮಣ್ಣಿನ ಮಕ್ಕಳು* ಈಗ ಉಂಟಾಗಿರುವ ನಷ್ಟ ಭರಿಸುವುದರ ಜೊತೆಗೆ ಉತ್ತಮ ಕೃಷಿ ನೀತಿಯನ್ನು ತಜ್ಞರು ಮತ್ತು ರೈತರ ಜೊತೆ ಚರ್ಚಿಸಿ ಅನ್ನದಾತನ ಬದುಕು ಹಸನವಾಗುವಂತೆ ಮಾಡಲು ಆಸಕ್ತಿ ತೋರಲಿ.
ಗೋ ರಾ ಶ್ರೀನಿವಾಸ...
ಮೊ9845956139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು