ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ
ಇಂದು ವಿಶ್ವ ತಂಬಾಕು ದಿನ, ಇದರ ಅರ್ಥ ತಂಬಾಕನ್ನು ಉತ್ತೇಜಿಸುವುದಲ್ಲ, ಬದಲಾಗಿ ನಿಷೇಧಿಸುವ ದಿನ, ಇಂದಿನ ಅನೇಕ ಮಹಾನ್ ರೋಗಗಳಿಗೆ ಕಾರಣವೇ ಈ ಧೂಮಪಾನ, ಇದು ಖುದ್ದು ಧೂಮಪಾನ ಮಾಡುವವರಿಗಿಂತಲೂ ಧೂಮಪಾನ ಮಾಡುವವರ ಸನಿಹದವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.
ಧೂಮಪಾನ ಮಾಡುವುದರಿಂದ ವ್ಯಾಪಾರ ವಹಿವಾಟು ಮತ್ತು ಖಾಸಗಿ ವೈದ್ಯರಿಗೆ ಮಾತ್ರ ಲಾಭ, ಧೂಮಪಾನ ಮಾಡುವ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಶಾಶ್ವತ ಮರಣ ಶಾಸನವೇ ಸರಿ, ಧೂಮಪಾನ ಮಾಡುವುದರಿಂದ ಆತನಿಗೆ ಬರುವ ಕಾಯಿಲೆಗಳನ್ನು ಗಮನಿಸಿ;
*ದೀರ್ಘಕಾಲದ ಶ್ವಾಸಕೋಶದ ತೊಂದರೆ*
*ರಕ್ತದ ಏರೋತ್ತಡ, ಹೃದಯ ಮತ್ತು ರಕ್ತ ನಾಳಗಳ ಕಾಯಿಲೆ*
*ಹಲ್ಲುಗಳ ಅನಾರೋಗ್ಯ ಮತ್ತು ಹಳದಿ ಬಣ್ಣ*
*ಹಲವು ರೀತಿಯ ಕ್ಯಾನ್ಸರ್*
*ನರಮಂಡಲದ ಹಾನಿ ಇದರಿಂದಾಗಿ ಲಕ್ವ ಹೊಡೆಯುವ ಸಾಧ್ಯತೆ*
*ಬರ್ಗರ್ ಕಾಯಿಲೆ*
*ಲೈಂಗಿಕ ಅನಾರೋಗ್ಯ*
*ಗರ್ಭಿಣಿ ಮತ್ತು ಶಿಶುವಿನ ಮೇಲೆ ದುಷ್ಪರಿಣಾಮ*
ತಾನು ಅನುಭವಿಸುವ ಇನ್ನೂ ಅನೇಕ ಕಾಯಿಲೆಗಳ ಜೊತೆಗೆ ಅನೇಕ ಸಂಗಡಿಗರ ಮೇಲೆಯೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳ ಹೇಳುತ್ತವೆ.
ತಂಬಾಕು ಅದರಲ್ಲೂ ಬೀಡಿ ಮತ್ತು ಸಿಗರೇಟ್ ನಲ್ಲಿ *ನಿಕೋಟಿನ್* *ಇಂಗಾಲದ ಮಾನಾಕ್ಸೈಡ್ ಟಾರ್ ಬೆಂಜೋಪೈರಸ್* ನಂತಹ ೪,೦೦೦ ಕ್ಕೂ ಹೆಚ್ಚು ರಾಸಾಯನಿಕ ಕೆಟ್ಟ ಅಂಶಗಳು ಶ್ವಾಸಮಾರ್ಗದ ಮೇಲೆ ಶೇಖರಣೆಗೊಳ್ಳುತ್ತವೆ, ಹೆಚ್ಚು ವರ್ಷಗಳ ಕಾಲ ಧೂಮಪಾನ ಮಾಡಿದಷ್ಟೂ ಕಾಯಿಲೆಗಳ ಜೊತೆಗೆ ಆಯಸ್ಸು ಕ್ಷೀಣಿಸುತ್ತಾ ಬರುತ್ತದೆ, ಒಂದು ಪ್ಯಾಕ್ ಸಿಗರೇಟ್ ಸೇದಿದರೆ ಎಂಟು ಔನ್ಸ್ ಅಂದರೆ ಒಂದು ಲೋಟದಷ್ಟು ಟಾರ್ ಅನ್ನು ಒಳಕ್ಕೆ ಎಳೆದುಕೊಳ್ಳುತ್ತಾರೆ.
ಎಲ್ಲಾ ರೀತಿಯ ತಂಬಾಕು ಅಂದರೆ *ಜಗಿಯುವ, ಒತ್ತರಿಸಿಕೊಳ್ಳುವ ಮತ್ತು ಸೇದುವ* ವ್ಯಕ್ತಿಗಳಿಗೆ ಕೇವಲ ಐದು ಸೆಕೆಂಡ್ ಗಳಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ, ಪ್ರತಿ ನಿಮಿಷಕ್ಕೆ ೧೦ ರಿಂದ ೧೫ ಬಾರಿ ಹೆಚ್ಚು ಬಡಿದುಕೊಳ್ಳಲು ಪ್ರಾರಂಭಿಸುತ್ತದೆ, *ಶ್ವಾಸಕೋಶ, ತುಟಿ, ಧ್ವನಿಪೆಟ್ಟಿಗೆ, ಬಾಯಿ, ಕೆನ್ನೆ, ಅನ್ನನಾಳ, ಮೂತ್ರಚೀಲ (urinary bladder) ಪ್ಯಾಂಕ್ರಿಯಾಸ್ (pancreas) ಕಾಯಿಲೆಗಳು ದವಡೆ ಮತ್ತು ತುಟಿಗಳಲ್ಲಿ ಒತ್ತರಿಸಿಕೊಳ್ಳುವವರ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ.*
ಬೀಡಿ ಸಿಗರೇಟಿನ ಹೊಗೆ ಮಾನವನಿಗೆ ಹಗೆ ಎಂಬ ಮಾತಿನಂತೆ ರಕ್ತದೊತ್ತಡ ಏರುವುದು, ರಕ್ತದೊಳಗೆ ಕೊಬ್ಬಿನ ಆಮ್ಲಗಳು ಸುರಿಯುವುದು, ಇದರಿಂದ ರಕ್ತ ಹೆಪ್ಪುಗಟ್ಟುವುದು, ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಹೃದಯಘಾತ, ಬಾಯಿಯ ದುರ್ವಾಸನೆ, ಜಠರದಲ್ಲಿ ಹುಣ್ಣು, ಹಲ್ಲು ಮತ್ತು ಒಸಡುಗಳು ಹಾನಿಯಾಗಿ ಶ್ವಾಸಕೋಶ ಮತ್ತು ಶ್ವಾಸನಾಳಗಳ ಸೋಂಕು ಹೆಚ್ಚಾಗುತ್ತದೆ.
ತಂದೆ ತಾಯಿ ಮತ್ತು ಪೋಷಕರು ಮಕ್ಕಳ ಮುಂದೆ ತಂಬಾಕು ಸೇವನೆ ಮಾಡಿದರೆ ಬಾಲ್ಯ ಮತ್ತು ಹರೆಯದಲ್ಲಿ ಮಕ್ಕಳು ಚಟ ಅಂಟಿಸಿಕೊಳ್ಳುತ್ತಾರೆ, ಇವರಲ್ಲಿ ಶಿಕ್ಷಕರ ಪಾತ್ರವೂ ದೊಡ್ಡದಿದೆ, ದೊಡ್ಡವರು ಚಟದಿಂದ ಮುಕ್ತರಾದರೆ ಮಾತ್ರ ಭವಿಷ್ಯದ ಪ್ರಜೆಗಳನ್ನು ಸಂರಕ್ಷಿಸಿಸಬಹುದಾಗಿದೆ.
ವೈದ್ಯರ ಮಾತಿನ ಮೇಲೆ ರೋಗಿಗಳಿಗೆ ತುಸು ನಂಬಿಕೆ ಹೆಚ್ಚು, ಅವರು ದೃಢವಾಗಿ ಹೇಳಿದರೆ ರೋಗಿಗಳು ಕೇಳುತ್ತಾರೆ, ಕಂಪೆನಿಗಳು ಲಾಭದ ದೃಷ್ಟಿಯಿಂದ ಇದನ್ನು ನೋಡದೆ ಭವಿಷ್ಯ ಭಾರತ ದೇಶದ ಹಿತದೃಷ್ಟಿಯಿಂದಲಾದರೂ ತಮ್ಮ ವಹಿವಾಟನ್ನು ಬದಲಾಯಿಸಿಕೊಳ್ಳಬೇಕು, ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳಯುವಂತೆ ಬೆಳೆದ ಬೆಳೆಗೆ ಖಾತ್ರಿ ನೀಡಿದರೆ ಲಾಭದ ತಂಬಾಕು ವ್ಯವಸಾಯ ನಿಲ್ಲಿಸುವುದರಲ್ಲಿ ಅನುಮಾನವೇ ಇಲ್ಲ.
ಕೆಲವು ಅಂಕಿ ಅಂಶಗಳ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರವು ತಂಬಾಕಿನಿಂದ ಬರುವ ಆದಾಯಕ್ಕಿಂತಲೂ ತಂಬಾಕು ನಿಷೇಧಿಸುವ ಜಾಹೀರಾತುಗಳು ಮತ್ತು ಅದರಿಂದುಂಟಾಗುವ ಕಾಯಿಲೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿವೆ, ಇದರ ಬದಲು ತಂಬಾಕು ಬೆಳೆ ನಿಷೇಧದ ಜೊತೆಗೆ ಉತ್ಪಾದಕ ಕಂಪೆನಿಗಳನ್ನು ಶಾಶ್ವತವಾಗಿ ಮುಚ್ಚಿಸಲು ಕ್ರಮಕೈಗೊಂಡರೆ ಈ ಮೇಲಿನ ಎಲ್ಲಾ ಕಾಯಿಲೆಗಳನ್ನು ಹತೋಟಿಗೆ ತಂದು ವಿಶ್ವದಲ್ಲೇ ಕ್ಯಾನ್ಸರ್ ಮುಕ್ತ ಭಾರತ ಮಾಡಬಹುದಾಗಿದೆ.
*ತಂಬಾಕು ಕೇವಲ ಸೇವಿಸುವ ವ್ಯಕ್ತಿಗಷ್ಟೇ ಅಲ್ಲದೆ ಅವಲಂಬಿತರು ಮತ್ತು ಅಭಿವೃದ್ಧಿಗೂ ಮಾರಕವೇ, ಈ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕೈಜೋಡಿಸಿ ತಂಬಾಕು ಮುಕ್ತ ಭಾರತ ನಿರ್ಮಿಸಲು ಬದ್ದರಾಗೋಣವೇ ?*
ಗೋ ರಾ ಶ್ರೀನಿವಾಸ..
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು