ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ
ಸಮಸ್ಯೆಗಳನ್ನು ಹಿಡಿದು ಜಗ್ಗಾಡಿದ ಸದಸ್ಯರು
ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯು ಒಂದು ಗಂಟೆ ತಡವಾಗಿ ಆರಂಭಗೊಂಡಿತ್ತು ಈ ಸಭೆಗೆ ಬಹುತೇಕ ಗ್ರಾಮ ಪಂಚಾಯತಿಗಳ ಮಹಿಳಾ ಅಧ್ಯಕ್ಷರಗಳು ಬಂದಿದ್ದು ವಿಶೇಷ ಎನಿಸಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರು ನನ್ನ ಕಚೇರಿಗೆ ಬಂದ ಯಾವುದೇ ಅರ್ಜಿ ೨೪ ಗಂಟೆಗಳಲ್ಲಿ ಇತ್ಯರ್ಥ ಆಗಬೇಕು, ಕಳೆದ ಬಾರಿ ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ನೂರಾರು ಅರ್ಜಿಗಳು ಮಾತ್ರ ಬಂದಿದ್ದು ಈ ಬಾರಿ ಜನತಾ ದರ್ಶನದಲ್ಲಿ ೨,೪೦೦ ಅರ್ಜಿಗಳು ಬಂದಿವೆ. ಅಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಿ ದ್ದೀರಿ ಎಂದು ತಿಳಿಯುತ್ತದೆ. ಸರಿಯಾಗಿ ಕೆಲಸ ಮಾಡಿದರೆ ಮಾಡಿ ಇಲ್ಲವಾದರೆ ಬೇರೆಡೆ ಹೋಗಿ, ನನಗೆ ಮಾನಸಿಕವಾಗಿ ಹಿಂಸೆ ಆಗಿದೆ, ಎಂದು ಗರಂ ಆಗಿ ಹೇಳಿದರು.
ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ಚರಂಡಿ ಸಮೇತ ಯಾವುದೇ ಸ್ವಚ್ಚತೆ ಇರಲಿಲ್ಲ, ಮುಖ್ಯಮಂತ್ರಿ ಗಳು ಕಿಡಿ ಕಿಡಿಯಾದರು.
ಇ-ಸ್ವತ್ತು ಕಂಪ್ಲೇಟ್ ಗಳು ಹೆಚ್ಚಾಗಿವೆ
ಒಂದೊಂದು ಅರ್ಜಿ ವರ್ಷವಾದರೂ ವಿಲೇವಾರಿ ಆಗಿಲ್ಲ ಯಾಕೆ ? ಹತ್ತು ದಿನಗಳಲ್ಲಿ ಇ ಸ್ವತ್ತು ಮಾಡಬಹುದು, ನೀವು ಅದಕ್ಕೆ ಒಂದು ಡೈರಿ ಇಟ್ಟು ಒಂದು ತಿಂಗಳೊಳಗಾಗಿ ಇ ಸ್ವತ್ತು ಮಾಡಿಕೊಡಿ ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷ ರಾಜಣ್ಣ ಸೂಚಿಸಿದರು.
ಅಂಧರ ಶಾಲೆ ಬಿಟ್ಟು ಎಲ್ಲಾ ಖಾಸಗಿ ಶಾಲೆಗಳು ಆಯಾಯ ಪಂಚಾಯತಿಗಳಿಗೆ ತೆರಿಗೆ ಕಟ್ಟಬೇಕು, ನೀರಿನ ತೆರಿಗೆ ಕ್ರಮಬದ್ಧವಾಗಿ ಸಂಗ್ರಹಿಸಬೇಕು, ಪಂಚಾ ಯತಿಗೆ ಯಾವ್ಯಾವ ಮೂಲ ಗಳಿಂದ ತೆರಿಗೆ ಸಂಗ್ರಹ ಮಾಡಬಹುದು ಎಂದು ತಿಳಿದುಕೊಂಡು ತೆರಿಗೆ ಸಂಗ್ರಹಿಸಿ ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಆದಾಯ ಹೆಚ್ಚಿಸಿ ಎಂದು ಅವರು ಖಡಕ್ ಆಗಿ ಸೂಚಿಸಿದರು.
*ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನುನೇಮಿಸಿ ಕೊಳ್ಳಲು ಸೂಚನೆ*
ಪ್ರತಿ ಗ್ರಾಮಪಂಚಾಯತಿಯಲ್ಲಿ ಇಬ್ಬರು ಸ್ವಚ್ಚತಾ ಕಾರ್ಮಿಕರನ್ನು ನೇಮಿಸಿಕೊಳ್ಳಿ, ಹದಿನೈದು ಸಾವಿರ ರೂ ಸಂಬಳ ನಿಗದಿ ಮಾಡಿ, ಹದಿನಾಲ್ಕನೇ ಹಣಕಾಸುಯೋಜನೆ ಅಡಿಯಲ್ಲಿ ಅವರಿಗೆ ಸಂಬ ಳ ನೀಡಿ, ಒಂದುಪಂಚಾಯ್ತಿ ಯಲ್ಲಿ ಐದ ರಿಂದ ಆರು ಹಳ್ಳಿಗಳಿ ಇರುತ್ತವೆ, ಪ್ರತಿ ಗ್ರಾಮಕ್ಕೂ ವಾರದಲ್ಲಿ ಒಂದು ದಿನ ಅವರು ಸ್ವಚ್ಚತೆ ಮಾಡಲಿ.
ಇದು ನಮ್ಮ ತಾಲ್ಲೂಕಿ ನಲ್ಲೇ ಪ್ರಥಮವಾಗಲಿ ಎಂದು ಗ್ರಾಮ ಪಂಚಾಯತಿ ಅಧಿಕಾರಿ ಗಳು ಮತ್ತು ಅಧ್ಯಕ್ಷ ರಿಗೆ ರಾಜಣ್ಣ ಸಲಹೆ ನೀಡಿದರು.
ನೀಲಕಂಠನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಭರತ್ ಮನವಿ ಮಾಡಿ, ಪರಿಶಿಷ್ಟ ಜಾತಿಯಲ್ಲಿ ಮರಣ ಹೊಂದಿದ್ದ ವ್ಯಕ್ತಿಗೆ ಶವ ಸಂಸ್ಕಾರಕ್ಜೆ ೫,೦೦೦ ರೂ ಕೊಡಬೇಕೆಂದು ಸರ್ಕಾರದ ಸುತ್ತೋಲೆ ಇದೆ, ಆದರೆ ಇದು ಪಾಲನೆ ಆಗುತ್ತಿಲ್ಲ, ಗಮನಹರಿಸಿ ಎಂದು ಮನವಿ ಮಾಡಿದರು.
ಮಳೂರುಪಟ್ಟಣ ತಾ ಪಂ ಸದಸ್ಯ ಸಿದ್ದರಾಮಯ್ಯ ಮನವಿ ಮಾಡಿ,ಪಿಡಿಓ ಗಳು ವಾರಕ್ಕೊಮ್ಮೆಯಾದರೂ ಗ್ರಾಮಗಳಿಗೆ ಭೇಟಿ ನೀಡಲಿ ಗ್ರಾಮಸಭೆ ಮತ್ತು ಸಾಮಾನ್ಯ ಸಭೆಗಳಲ್ಲಿ ಗ್ರಾಮದ ರಸ್ತೆ ಮತ್ತು ಸ್ವಚ್ಛತೆ ಬಗ್ಗೆಅರಿವುಮೂಡಿಸಿ ಎಂದರು.
ನಗರದ ಕೋಳಿ ಅಂಗಡಿ ಕಸಗಳೆಲ್ಲವೂ ಗ್ರಾಮದ ರಸ್ತೆ ಬದಿಗಳಲ್ಲಿ ಮತ್ತು ಕೆರೆ ಏರಿಗಳ ಮೇಲೆ ಬಂದು ಬೀಳುತ್ತಿದೆ, ನಗರ ಸಭೆಗೆ ಎಚ್ಚರಿಕೆ ನೀಡ ಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಸಭೆಗೆ ಮನವಿ ಮಾಡಿದರು.
ಹೀಗೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯು ಈ ಸಾರಿ ಸ್ವಲ್ಪ ಚುರುಕಿನಿಂದ ಸಂವಹನ ಗೊಂಡಿತ್ತು. ಸಂದರ್ಭದಲ್ಲಿ ಇಓ ಪ್ರತಿಕ್ರಿಯಿಸಿ ಪಿ.ಎಂ. ಐ.ಜಿ.ಡಿ ಯೋಜನೆಯಡಿ ೧೨೧೫ಮನೆಗಳು ಮಂಜೂ ರಾಗಿದ್ದು ಹಂಚಲು ಸಮಸ್ಯೆ ಯಾಗಿದೆ,ಜಾನುವಾರಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂ ಧಿಸಿದಂತೆ ಉತ್ತರಿಸಲು ಅಧಿಕಾರಿಗಳೇ ಬಂದಿರಲಿಲ್ಲ.
ತಾಲ್ಲೂಕಿನಾದ್ಯಾಂತ ೧೫೪ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ದ ವಾಗಿದೆ ಎಂದು ಅವರು ಪ್ರಕಟಿಸಿದರು. ನಂತರ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ನೌಕರರರ ಕೊರತೆ ಇದ್ದು ಆದಷ್ಟು ಬೇಗ ನೇಮಕಾತಿಯ ಮೂಲಕ ಸಮಸ್ಯೆ ಬಗೆ ಹರಿಸಲು ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಲಾಗಿದೆ. ಇದೇ ವೇಳೆ ಇಲಾಖೆಯ ಹಲವಾರು ಕಾಮಗಾರಿಗಳನ್ನು ಅನುಮೋದನೆ ಮಾಡಲಾಯಿತು. ಸಮಯಕ್ಕೆ ಸರಿಯಾಗಿ ಅನುದಾನ ಬಳಸ ಲಾಗದೆ ಹಿಂದಿರುಗಿಸ ಲಾಗಿದೆ ಎಂದು ಇಓ ಅವರು ವಿಷಾದದಿಂದನುಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮಾದಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಯ ಅಧ್ಯಕ್ಷರು ಹಾಗೂ ಉಪಾ ಧ್ಯ ಕ್ಷರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು