
ಜಿಲ್ಲೆಯಲ್ಲಿ ಮೂರು ದಿನ ಮಾವುಮೇಳ ಸಿಇಓ ಇಕ್ರಂ
ಚನ್ನಪಟ್ಟಣ: ಮೇ 11 22 : ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ ಜಿಲ್ಲೆಯಲ್ಲಿ ಎರಡು ಕಡೆ ಪ್ರತಿ ವರ್ಷದಂತೆ 2022/23ನೇ ಸಾಲಿನ ಮಾವು ಮೇಳವನ್ನು ಮೂರು ದಿನಗಳ ಕಾಲ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ತೋಟಗಾರಿಕೆಯ ಸಹಯೋಗದೊಂದಿಗೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದೇವಸ್ಥಾನದ ಮುಂಭಾಗ ಹಾಗೂ ಕನಕಪುರ-ಬೆಂಗಳೂರು ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇದೇ ತಿಂಗಳ

ಕೊಟ್ರು ಬಸವಪ್ಪ ನ ಕೊಂಡಕ್ಕೆ ಆಯತಪ್ಪಿ ಬಿದ್ದ ಅರ್ಚಕ
ಚನ್ನಪಟ್ಟಣ: ಮೇ 11 22. ತಾಲ್ಲೂಕಿನ ಮಂಕುಂದ ಗ್ರಾಮದ ಹೊರವಲಯದಲ್ಲಿರುವ "ಕೊಟ್ರು ಬಸವಪ್ಪ" ಕೊಂಡೊತ್ಸವ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆ ಅರ್ಚಕ ನಂದೀಶ್ (38) ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಮಂಕುಂದ, ಹರೂರು, ಮೊಗೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೊಟ್ರು ಬಸವಪ್ಪ ಸ್ವಾಮಿ ದೇವರ ಕೊಂಡೋತ್ಸವವೂ ಇಂದು ಭಕ್ತರ ಸಮ್ಮುಖದಲ್ಲಿ ಜರುಗ

ಕುಮಾರಸ್ವಾಮಿ ಬಿರುಗಾಳಿಯಂತೆ ಅವರು ಬಂದಕಡೆ ಏನೂ ಉಳಿಯಲ್ಲ ಸಿ ಪಿ ಯೋಗೇಶ್ವರ್
ಚನ್ನಪಟ್ಟಣ: ಮೇ 11 22. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಯವರು ಬಿರುಗಾಳಿ ಬಂದಂಗೆ ಬಂದ್ರು ಗೆದ್ರು ಹೋದ್ರು. ಅಂದರೆ ಬಿರುಗಾಳಿ ಬರುವುದು ಒಳ್ಳೆಯದಕ್ಕಲ್ಲಾ ಎಲ್ಲವನ್ನೂ ಬಾಚಿಕೊಂಡು ಹೋಗಲು ಎಂಬುದನ್ನು ಸಾಬೀತು ಪಡಿಸಿದರು. ನೀವುಗಳೆಲ್ಲರೂ ನಮ್ಮ ಕ್ಷೇತ್ರದಿಂದ ಮುಖ್ಯಮಂತ್ರಿ ಆಗ್ತಾರೆ ಅಂತ ನೀವೆಲ್ಲರೂ ಮತ ಹಾಕಿ ಗೆಲ್ಸಿದ್ರಿ ಅವರು ಮುಖ್ಯಮಂತ್ರಿ ಅಂತೂ ಆದರೂ ತಾಲ್ಲೂಕಿಗೆ ನಾಮ ಇಕ್ಕಿದರು

ಜೆ ಬ್ಯಾಡರಹಳ್ಳಿ ಪಂಚಾಯತಿ ಕಛೇರಿ ಜಗದಾಪುರ ಆಸ್ಪತ್ರೆಯಲ್ಲಿ ಕಳವು
ಚನ್ನಪಟ್ಟಣ: ಮೇ 09 22. ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಜೆ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಕಛೇರಿ ಮತ್ತು ಜಗದಾಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕಿಟಕಿ ಸರಳು ಹಾಗೂ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿದ್ದಾರೆ.ಜೆ ಬ್ಯಾಡರಹಳ್ಳಿ ಗ್ರಾಮ ಪಂಚಾಯತ

ಪ್ರತಿಭೆಗೆ ಮೂರು ಚಿನ್ನದ ಪದಕ
ಚನ್ನಪಟ್ಟಣ: ಮೀನುಗಾರಿಕೆ ವಿಜ್ಞಾನದ ಸ್ನಾತಕೋತ್ನರ ಪದವಿಯಲ್ಲಿ ತಾಲೂಕಿನ ಕುವರಿ ಕೆ.ಬಿ ಕುಶಲ ಮೂರು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ.ತಾಲೂಕಿನ ಕಳ್ಳಿಹೊಸೂರು ಗ್ರಾಮದ ಸುಮಾ ಹಾಗೂ ಬೋರೇಗೌಡ (ಬಜ್ಜಪ್ಪ)ನವರ ಪುತ್ರಿ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಈಕೆ ಬೀದರ್ ನ ಕರ್ನಾಟಕ ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯ

ಸ್ಮಶಾನ ದೂರದಲ್ಲಿದೆ ಎಂದು ತಹಶಿಲ್ದಾರ್ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಚನ್ನಪಟ್ಟಣ:ಏ.25: ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಇದ್ದರೂ ಇಲ್ಲದಂತಾಗಿದೆ. ಶವ ಸಂಸ್ಕಾರ ಮಾಡಲು ನಿಗದಿತ ಜಾಗ ಇರದ ಕಾರಣಕ್ಕೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಮೃತ ವ್ಯಕ್ತಿಯ ಶವವನ್ನು ಟ್ರ್ಯಾಕ್ಟರ್ನಲ್ಲಿ ಹಾಕಿಕೊಂಡು, ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲು ಹೊರಟಿದ್ದರು, ಗ್ರಾಮಸ್ಥರನ್ನು ಪಾರೆದೊಡ್ಡಿ ಗ್ರಾಮದ ಬಳಿ ಎಂಕೆ ದೊಡ್ಡಿ ಪೊಲೀಸರು ತಡೆ

ಅಂಬೇಡ್ಕರ್ ಹೆಸರೇಳಿ ಬದುಕುವುದು ಬೇಡ ಅವರ ದಾರಿಯಲ್ಲಿ ನಡೆಯೋಣಾ ಭೀಮರಾವ್ ಯಶವಂತರಾವ್ ಅಂಬೇಡ್ಕರ್
ಅಂಬೇಡ್ಕರ್ ರವರ ಹೆಸರೇಳಿಕೊಂಡು ಬದುಕುವ ಬದುಕು ನಮಗೆ ಬೇಡ. ಅವರ ಕ್ರಾಂತಿಯ ದಾರಿಯಲ್ಲಿ ನಾವೆಲ್ಲರೂ ಸಾಗಿ ಅವರ ಕನಸು-ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಜೈ ಭೀಮ್ ಎಂದರೆ ಅಂಬೇಡ್ಕರ್ ಅವರ ಕನಸು ಆಶಯಗಳು ಈಡೇರುವುದಿಲ್ಲ. ನಾವೆಲ್ಲರೂ ವಿದ್ಯಾವಂತರಾಗಿ, ಜಾಗೃತರಾಗಿ ಅಂಬೇಡ್ಕರ್ ರವರ ಚಿಂತನೆ, ವಿಚಾರಧಾರೆ, ಕ್ರಾಂತಿಯ ದಾರಿಯಲ್ಲಿ ನಡೆಯುವ ಮೂಲಕ ಅವರ ಕನಸು ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ

ಚನ್ನಪಟ್ಟಣದ ಕೋರ್ಟ್ ಪಕ್ಕದಲ್ಲಿನ ಓವರ್ ಟ್ಯಾಂಕ್ ನ ಪೈಪ್ ನಲ್ಲಿ ಸಿಕ್ಕ ಮಹಿಳೆಯ ಗುರುತಿನ ಚಹರೆ ಪತ್ತೆ ಹಚ್ಚಿದ ಪೋಲೀಸರು
ನಗರಿಗರು ಕುಡಿಯುವ ಬೃಹತ್ ನೀರಿನ ಟ್ಯಾಂಕ್ ನ ಪೈಪ್ ಗಳಲ್ಲಿ ಮಹಿಳೆಯ ಕಾಲು ಮತ್ತು ಮಾಂಸದ ಮುದ್ದೆ ಕಾಣಿಸಿಕೊಂಡು ಚನ್ನಪಟ್ಟಣ ನಗರದ ಜನತೆಯ ನಿದ್ದೆಗೆಡಿಸಿದ್ದ ಪ್ರಕರಣಕ್ಕೆ ಪೋಲೀಸರು ಟ್ವಿಸ್ಟ್ ನೀಡಿದ್ದಾರೆ. ನೀರಿನ ಪೈಪಿನಲ್ಲಿ ಸಿಕ್ಕ ಕಾಲು ಮತ್ತು ಮಾಂಸದ ಮುದ್ದೆ ತನಿಖೆ ಮತ್ತಷ್ಟು ಪ್ರಗತಿ ಕಂಡಿದ್ದು ಶೀಘ್ರದಲ್ಲೇ ಆರೋಪಿಗಳ ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ತಿಳಿಸಿದ್ದಾರೆ.

ಪ್ರತಿ ಹಳ್ಳಿಗಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ನಿ ನ್ಯಾ ನಾಗಮೋಹನದಾಸ್
ಚನ್ನಪಟ್ಟಣ: ಏ:20/22.ಬುಧವಾರ. ಜಾನಪದ ಎಂಬುದು ಒಂದು ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ, ತಾಲ್ಲೂಕಿಗೆ ಸಂಬಂಧಿಸಿದ್ದಲ್ಲಾ. ಪ್ರತಿ ಹಳ್ಳಿಹಳ್ಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ಆ ಜನಪದವೂ ರೈತನರಿಂದಲೇ ಹೆಚ್ಚು ಪ್ರಚಲಿತವಾಗಿದೆ. ಮುಂಜಾನೆ ಎದ್ದು ರಾಗಿ ಬೀಸುವಾಗ ಒಂದು ಹಾಡು. ಜಾನುವಾರು ಹೊಡೆದುಕೊಂಡು ಹೋಗುವಾಗ ಪದ, ನಾಟಿಮಾಡುವಾಗ, ಕೊಯ್ಲು ಮಾಡುವಾಗ, ಮಗುವಿಗೆ ಅನ್ನ ತಿನ್ನಿಸುವಾಗ ಮಗು

ಬುಧವಾರ ಚಕ್ಕೆರೆ ಶಿವಶಂಕರ್ ಗೆ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ
ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಪ್ರತಿವರ್ಷ ಕೊಡಮಾಡುವ ಜಾನಪದ ಚೂಡಾಮಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಜೆ.ಸಿ.ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಏ.20 ರ ಬುಧವಾರ ಸಂಜೆ 3.30ಕ್ಕೆ ಹಮ್ಮಿಕೊಂಡಿರುವುದಾಗಿ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ವರ್ಷ ನಮ್ಮ ಕೇಂದ್ರದ ವತಿಯಿಂದ ಜಾನಪದ ವಿದ