ಎಚ್ಚರಿಕೆಯ ಜೊತೆಗೆ ಸಾಧಾರಣ ದಂಡಕ್ಕೆ ಚಾಲನೆ ನೀಡಿದ ಪೋಲಿಸರು
ಚನ್ನಪಟ್ಟಣ: ನಗರದ ಸುತ್ತಮುತ್ತಲಿನ ಬಹುತೇಕ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿ ಸಾಧಾರಣ ದಂಡ ಹಾಕುವ ಕೆಲಸವನ್ನು ಕಟ್ಟುನಿಟ್ಟಾಗಿ ನಡೆಸುತ್ತಿರುವುದು ಕಂಡುಬಂದಿತ್ತು.
ನಗರದ ಎಲ್ಲಾ ಪೋಲಿಸ್ ಠಾಣೆಗಳ ಮುಂಭಾಗ, ಬೆಂಗಳೂರು ಮೈಸೂರು ಹೆದ್ದಾರಿಯ ವೃತ್ತಗಳು ಹಾಗೂ ನಗರ ಪ್ರದೇಶದೊಳಗೆ ಬರುವ ಎಲ್ಲಾ ರಸ್ತೆಗಳಲ್ಲಿ ಹಲವಾರು ಪೋಲಿಸರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಚಾಲಕರಿಗೆ ಸಾಧಾರಣ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಈ ವೇಳೆ ಪತ್ರಿಕೆಯ ಜೊತೆ ಮಾತನಾಡಿದ ಸಂಚಾರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಡಿಮೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗುತ್ತಿದೆ, ನಾಳೆಯಿಂದ ಯಾವ ಮುಲಾಜಿಗೂ ಒಳಗಾಗದೇ ಕಟ್ಟುನಿಟ್ಟಾಗಿ ಕಾನೂನು ಪಾಲಿಸಲಾಗುವುದು ಎಂದು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು