ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?
ಪೂರ್ವ ಕಾಲದಲ್ಲಿ ಈ ಪ್ರಶ್ನೆಗೆ ಖಂಡಿತವಾಗಿಯೂ ಪ್ರವೇಶ ಮಾಡಬಾರದು ಎಂದಿತ್ತು, ಈ ಕಾಲದಲ್ಲಿ ಕೆಲವರು ಇದನ್ನು ವಿಮರ್ಶೆ ಮಾಡಿದ್ದಾರೆ.
ಅಂತ್ಯಕ್ರಿಯೆಗೆ ಹೋಗಿ ಬಂದವರು ಇಲ್ಲವೇ ಸ್ಮಶಾನದಿಂದ ಹಿಂತಿರುಗಿ ಬಂದವರು *ಶರೀರದ ಮೇಲೆ ಬಟ್ಟೆಗಳಿದ್ದಂತೆಯೇ* ಸ್ನಾನ ಮಾಡಬೇಕೆಂದು ಸಂಪ್ರದಾಯದ ನಂಬಿಕೆ. ಇಲ್ಲದಿದ್ದರೆ ಮರಣ ಹೊಂದಿದ್ದ ಆತ್ಮ ಅವನನ್ನು ಹಿಂಬಾಲಿಸುತ್ತದೆಂದು ಹೇಳುತ್ತಾರೆ. ಆತ್ಮ ಹಿಂಬಾಲಿಸುವುದು ಮೂರ್ಖತ್ವವೇ ಆಗಬಹುದು. ಆದರೆ ಈ ನಂಬಿಕೆಯ ಹಿಂದೆ ಒಂದು ಖಚಿತವಾದ ವಿಷಯ ಅಡಗಿದೆ.
ಅದೇನೆಂದರೆ ಒಬ್ಬ ವ್ಯಕ್ತಿ ಮರಣಿಸಿದ ನಂತರ ಮೃತ ಶರೀರದಿಂದ ಅನೇಕ ರೀತಿಯ *ವಿಷ ಕ್ರಿಮಿಗಳು* ಹೊರಗೆ ಬರುತ್ತಿರುತ್ತವೆ. ಅವು ದೇಹದ ಸುತ್ತಲೂ ಆವರಿಸಿರುತ್ತವೆ. ಯಾರು ಶವವನ್ನು ಮುಟ್ಟುತ್ತಾರೋ ಅವರ ಮೇಲೆ ಈ ವಿಷ ಕ್ರಿಮಿಗಳು ಮುತ್ತುತ್ತವೆ. ಈ ವಿಷ ಕ್ರಿಮಿಗಳನ್ನು ಹೋಗಲಾಡಿಸಲು ಹಾಕಿಕೊಂಡಿರುವ ಬಟ್ಟೆ ಸಹಿತ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಇಲ್ಲದಿದ್ದರೆ ಈ ಕ್ರಿಮಿಗಳು ಖಾಯಿಲೆಗಳನ್ನು ಉಂಟುಮಾಡುತ್ತವೆ.
ತಲೆಯ ಮೇಲಿಂದ ತಣ್ಣನೆಯ ನೀರು ಹಾಕಿಕೊಳ್ಳಿವುದರಿಂದ ಮೆದುಳಿನಿಂದ ಉತ್ಪತ್ತಿಯಾದ ಶಕ್ತಿ ತರಂಗಗಳು ಪೂರ್ತಿ ಶರೀರವನ್ನು ವ್ಯಾಪಿಸಿ ವಿಷಕ್ರಿಮಿಗಳನ್ನು ನಾಶಪಡಿಸುತ್ತವೆ. ಈ ಕ್ರಿಮಿಗಳು ಬಟ್ಟೆಗಳ ಮೇಲೆಯೂ ಇರುತ್ತಾವಾದ್ದರಿಂದ ಆ ಬಟ್ಟೆಗಳನ್ನು ಸಹ ಒದ್ದೆ ಮಾಡಿಕೊಂಡು ಸ್ನಾನ ಮಾಡಬೇಕೆಂದು ಹೇಳುತ್ತಾರೆ.
ಈ ರೀತಿಯಾಗಿ ಈ ನಂಬಿಕೆಯಲ್ಲಿ ಪರಿಶುಭ್ರತೆ ಮತ್ತು ಖಾಯಿಲೆಗಳಿಂದ ರಕ್ಷಿಸುವ ವಿಜ್ಞಾನದಾಯಕವಾದ ಸತ್ಯ ಅಡಗಿದೆ.
ಸಂಗ್ರಹ ಮತ್ತು ಪ್ರಚಾರ;
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು