ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?
ಒದ್ದೆ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲವರು ಹೊಟ್ಟೆ ನೋವು ಬರುತ್ತದೆಂದು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಸ್ನಾನವಾದ ನಂತರ ಒದ್ದೆ ಬಟ್ಟೆಯಲ್ಲಿ ದೇವಾಲಯದೊಳಗೆ ಹೋಗುವುದು *ಹೆಚ್ಚು ಶುಭ್ರತೆಯನ್ನು ಶಾರೀರಿಕ ಮತ್ತು ಮಾನಸಿಕ ಶುದ್ಧತ್ವವನ್ನು ತಿಳಿಸುತ್ತದೆ.*
ದೇವಾಲಯ ಸಮೀಪದಲ್ಲಿನ ಕೊಳ, ನದಿ ಇಲ್ಲವೇ ಸ್ನಾನಘಟ್ಟದಲ್ಲಿ ಮುಳುಗು ಹಾಕಿಕೊಂಡು ದೇವರನ್ನು ಸಂದರ್ಶಿಸುವುದಕ್ಕೆ ಹೋಗುವುದನ್ನು ನಾವು ನೋಡಿದ್ದೇವೆ. ಸ್ನಾನ ದ ನಂತರ ಒದ್ದೆ ಬಟ್ಟೆ ಕಟ್ಟಿಕೊಳ್ಳುವುದರಿಂದ *ಹೊಟ್ಟೆ ನೋವು ಬರುತ್ತದೆಂದು ಭಾವಿಸುವುದು ತಪ್ಪು ಕಲ್ಪನೆ.*
ವಾಸ್ತವವಾಗಿ ಒದ್ದೆ ಬಟ್ಟೆಗಳನ್ನು ಸೊಂಟದ ಸುತ್ತಲೂ ಕಟ್ಟಿಕೊಳ್ಳುವುದರಿಂದ ಹೊಟ್ಟೆಗೆ ಹೆಚ್ಚು ಲಾಭವಾಗುತ್ತದೆ. *ನಾವು ತೆಗೆದುಕೊಳ್ಳುವ ಘನ ಮತ್ತು ದ್ರವ ಆಹಾರಗಳಲ್ಲಿ ವಿಷ ಪದಾರ್ಥಗಳು ಹೊಟ್ಟೆಯಲ್ಲಿಯೇ ಇದ್ದು ಅಜೀರ್ಣ ವ್ಯಾಧಿಗೆ ಎಡೆಯುಂಟು ಮಾಡುವ ಅವಕಾಶ ಇದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆಯ ಕಾರಣದಿಂದ ಹೊಟ್ಟೆಯಲ್ಲಿ ತಾಪವು ಬೆಳೆದು ವಿವಿಧ ರೋಗಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿರುತ್ತದೆ.*
ಒದ್ದೆ ಬಟ್ಟೆಯನ್ನು ಹೊಟ್ಟೆಯ ಮೇಲೆ ಕಟ್ಟಿಕೊಳ್ಳುವುದರಿಂದ ತಾಪವು ಕಡಿಮೆಯಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆಂದು ಆಧುನಿಕ ವೈದ್ಯಶಾಸ್ತ್ರವೂ ತಿಳಿಸುತ್ತದೆ.
ನಮ್ಮ ಪೂರ್ವಿಕರು ಭಕ್ತಿ ನಂಬಿಕೆಗಳ ಮರೆಯಲ್ಲಿ ನಮಗೆ ಆರೋಗ್ಯವನ್ನುಂಟು ಮಾಡುವ ನಿಯಮಗಳನ್ನು ಬಚ್ಚಿಟ್ಟಿರುವರೆಂದು ಅರ್ಥ ಮಾಡಿಕೊಳ್ಳುವುದು ಅವರ ದೀರ್ಘ ದೃಷ್ಟಿ ಮತ್ತು ಚತುರತೆಗೆ ನಿದರ್ಶನವಾಗಿವೆ.
*ಸಂಗ್ರಹ ಮತ್ತು ಪ್ರಚಾರ;
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು