ನವ ಬೆಂಗಳೂರು ಬೇಡ, ರಾಮನಗರ ವೇ ಇರಲಿ ಹೋರಾಟಗಾರರ ಆಗ್ರಹ
ಚನ್ನಪಟ್ಟಣ: ನಮಗೆ ನವ ಬೆಂಗಳೂರು ಬೇಡಾ, ಈಗಿರುವ ರಾಮನಗರ ವೇ ಇರಲಿ ಎಂದು ನವಕರ್ನಾಟಕ ಯುವಶಕ್ತಿ, ಕರ್ನಾಟಕ ರಾಜ್ಯ ರೈತ ಸಂಘ ದ ಪದಾಧಿಕಾರಿಗಳು ಹಾಗೂ ಪ್ರಗತಿಪರ ಚಿಂತಕರು ಸಭೆ ಸೇರಿ ಚರ್ಚಿಸಿ ತೀರ್ಮಾನಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂಗವಾಗಿದ್ದ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕುಗಳನ್ನು ಒಟ್ಟಾಗಿ ಸೇರಿಸಿ ರಾಮನಗರ ಜಿಲ್ಲೆಯನ್ನು ದಶಕದ ಹಿಂದೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಘೋಷಣೆ ಮಾಡಿ ಅಧಿಕೃತಗೊಳಿಸಿದ್ದರು. ಈ ನೆಲದ ಮಣ್ಣಿನಲ್ಲಿ ಹುಟ್ಟು ಹೋರಾಟವೇ ಅಡಗಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತಹ ಕಲ್ಲುಗಳು, ಗೊಂಬೆಗಳು, ರೇಷ್ಮೆ, ದೇವಾಲಯಗಳು ಹಾಗೂ ಕೆಂಗಲ್ ಹನುಮಂತಯ್ಯ ನವರು ಕಟ್ಟಿಸಿದ ವಿಧಾನ ಸೌಧ, ಆರ್ಥಿಕ ತಜ್ಞ ವೆಂಕಟಗಿರಿಗೌಡ, ಪೂಜ್ಯ ಕರಿಯಪ್ಪ ನವರಂತಹವರು ಹುಟ್ಟಿದ, ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಶ್ರೀ ರಾಮ ಓಡಾಡಿದ ಎಂಬ ಈ ನೆಲವನ್ನು ಯಾವ ಕಾರಣಕ್ಕೂ ನವ ಬೆಂಗಳೂರು ಜಿಲ್ಲೆ ಮಾಡಬಾರದು ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಆಗ್ರಹಿಸಿದರು.
ಸಾಹಿತಿ ರಾಮಕೃಷ್ಣೇಗೌಡ ಮಾತನಾಡಿ, ನಮ್ಮ ರಾಮನಗರ ಕ್ಕೆ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಪುರಾತನ ಹಾಗೂ ಇತಿಹಾಸದಿಂದಲೂ ಉತ್ತಮ ಹೆಸರು ಪಡೆದಿದ್ದು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಬಲಿಕೊಡುವುದು ಬೇಡ ಎಂದರು.
ಹೋರಾಟಗಾರ ಕೆ ನ ಲಿಂಗೇಗೌಡ ಮಾತನಾಡಿ ಈಗಿರುವ ಬೃಹತ್ ಬೆಂಗಳೂರಿನಲ್ಲಿ ಕಸದ ರಾಶಿ ಹೆಚ್ಚಾಗಿದ್ದು ಅದನ್ನು ಈಗಿರುವ ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಬದಲಾಯಿಸಿ ಅಲ್ಲಿನ ಗಬ್ಬು ನಾರುವ ಕಸವನ್ನು ತಂದು ಸುರಿಯಲು ಮಾಡುತ್ತಿದ್ದು, ನಮ್ಮ ಗ್ರಾಮೀಣರ ಬದುಕನ್ನು ಕಿತ್ತುಕೊಳ್ಳುತ್ತಾರೆ. ಆದ್ದರಿಂದ ಎಲ್ಲಾ ಸಂಘಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿ ಇದನ್ನು ತಪ್ಪಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಎಂ ರಾಮು ಮಾತನಾಡಿ ಹುಟ್ಟು ಹೋರಾಟದ ನಾಡಾದ ನಮ್ಮ ಜಿಲ್ಲೆಯನ್ನು ಬೇರೆ ಹೆಸರಿನಿಂದ ಕರೆದು ಕೈಗಾರಿಕೆಗಳನ್ನು ತಂದು ನಮ್ಮ ವ್ಯವಸಾಯದ ಭೂಮಿಯನ್ನು ಕಿತ್ತುಕೊಂಡು ನಮ್ಮನ್ನು ಕಾರ್ಖಾನೆಯ ವಾಚ್ ಮನ್ ಗಳಾಗಿ ಮಾಡಿಕೊಳ್ಳುತ್ತಾರೆ, ಮುಂದಿನ ನಮ್ಮ ಪೀಳಿಗೆಗೆ ನಮ್ಮ ನೆಲದ ಸೊಗಡನ್ನು ಮರೆಮಾಚಲು, ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ರಾಜಕಾರಣಿಗಳು ಮಾಡಿರುವ ಸಂಚು ಇದು ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಸಿ ಕೆ ರಾಮೇಗೌಡ ಮತ್ತು ಪ್ರೊಫೆಸರ್ ಮಲ್ಲಯ್ಯ ನವರು ಮಾತನಾಡಿ ನಮ್ಮ ರಾಮನಗರ ಜಿಲ್ಲೆ ಇದೇ ಹೆಸರಿನಲ್ಲೇ ಇರಲಿ, ಇದೇ ಜಿಲ್ಲೆಯನ್ನು ಬೆಂಗಳೂರಿನಲ್ಲಿರುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಕೃಷಿ ಮತ್ತು ಇಲ್ಲಿನ ಸೊಗಡನ್ನು ಹಾಗೆಯೇ ಉಳಿಸಬೇಕೆಂದು ಆಗ್ರಹಿಸಿದರು.
ನಂತರ ಕೆನಲಿಗೌಡರು ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು