Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು

Posted date: 18 May, 2020

Powered by:     Yellow and Red

ತಾಲ್ಲೂಕಿನಾದ್ಯಂತ ಬೀಸಿದ ಬಿರುಗಾಳಿಗೆ ನೆಲಕಚ್ಚಿದ ಬಾಳೆ, ಅಸುನೀಗಿದ ಕುರಿಗಳು

ಚನ್ನಪಟ್ಟಣ:ಮೇ/೧೭/೨೦/ಭಾನುವಾರ. ಹಲವಾರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಇಂದು ಸಂಜೆಯ ವೇಳೆಗೆ ಗುಡಗು, ಮಿಂಚಿನ ಜೊತೆಗೆ ಭಾರಿ ಗಾಳಿಯೊಂದಿಗೆ ತಾಲ್ಲೂಕಿನಾದ್ಯಂತ ಸುರಿದಿದ್ದಿರದಿಂದ, ರಸ್ತೆ ಬದಿಯ ಮರಗಳು ಮತ್ತು ತೋಟದಲ್ಲಿ ಬೆಳೆದಿದ್ದ ಬಾಳೆ ಮತ್ತಿತ್ತರ ಗಿಡ ಮರಗಳು ಹಾಗೂ ವಿದ್ಯುತ್ ಸಂಪರ್ಕ ಕಂಬಗಳು ಮುರಿದು ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ.


ನಗರದ ಮಂಗಳವಾರಪೇಟೆ ಯ ಮರಳು ಹೊಲದಲ್ಲಿ ವಿದ್ಯುತ್ ಸಂಪರ್ಕ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ನಿಂತಿದೆ. ಕಂಬಗಳು ಧರೆಗುರುಳಿರುವುದರಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.


ತಾಲ್ಲೂಕಿನ ಗೋವಿಂದಳ್ಳಿ‌ ಗ್ರಾಮದಲ್ಲಿ ಹಲವಾರು ರೈತರ ಕೊಯ್ಲಿಗೆ ಬಂದಿದ್ದ ಒಂದು ಸಾವಿರಕ್ಕೂ ಹೆಚ್ಚಿನ ಬಾಳೆ ಗಿಡಗಳ ನಡು ಮುರಿದಿದ್ದು, ಕೆಲ ಕಲ್ಪವೃಕ್ಷಗಳೂ ಸಹ ಬುಡ ಸಮೇತ ನೆಲಕಚ್ಚಿದ್ದು, ರೈತರಿಗೆ‌ ಲಕ್ಷಾಂತರ ರೂಪಾಯಿ ಲುಕ್ಸಾನಾಗಿದೆ.


ಇದೇ ಗ್ರಾಮದ ರೈತರೋರ್ವರಿಗೆ ಸೇರಿದ ಐದಕ್ಕೂ‌ ಹೆಚ್ಚಿನ ಕುರಿಗಳ ಮೇಲೆ ತೆಂಗಿನ ಮರ ಮುರಿದು ಹಾಗೂ ಭರಸಿಡಿಲು ಬಡಿದು ಸತ್ತು ಬಿದ್ದಿವೆ. ಮನುಷ್ಯರಿಗೆ ಸಂಬಂಧಿಸಿದಂತೆ ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑