ಕಮೀಷನರ್ ಸಾಹೆಬ್ರೇ ಇದಕ್ಕೆ ಮುಕ್ತಿ ಯಾವಾಗ ?ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಬೇಡ
ಚನ್ನಪಟ್ಟಣ:ಮೇ/೨೨/೨೦/ಶುಕ್ರವಾರ. ನಗರದ ನಗರಸಭೆ ವ್ಯಾಪ್ತಿಯ ಕೆಂಪೇಗೌಡ ಬಡಾವಣೆ ಹಾಗೂ ಸಿಎಂಸಿ ಲೇಔಟ್ ನಡುವೆ ನಾಲ್ಕು ಕೂಡು ರಸ್ತೆಯಿದ್ದು, ಈ ಕೂಡು ರಸ್ತೆಯಲ್ಲಿ ಶೆಟ್ಟಿಹಳ್ಳಿ ಕೆರೆ ಏರಿಯ ಕೆಳಗಿನ ರಾಜಕಾಲುವೆಗೆ ನಿರ್ಮಿಸಿರುವ ಸೇತುವೆ ಕುಸಿದು ವಾರವಾದರೂ ಸಹ ಯಾವುದೇ ಅಧಿಕಾರಿಗಳು ಇತ್ತ ಸುಳಿಯದೇ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಇಲಾಖೆಯ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಕೂಡು ರಸ್ತೆಯು ಸಂಪೂರ್ಣವಾಗಿ ರಾಜಕಾಲುವೆಯ ರಸ್ತೆಯಾಗಿದ್ದು, ಒಂದು ಸಿಎಂಸಿ ಲೇಔಟ್ ಗೆ, ಮತ್ತೊಂದು ಕೆಂಪೇಗೌಡ ಬಡಾವಣೆ ಮೂಲಕ ಚರ್ಚ್ ರಸ್ತೆಗೆ ತೆರಳಲಿದ್ದು, ಅದೇ ರಾಜಕಾಲುವೆ ರಸ್ತೆಯ ಮೂಲಕ ಚನ್ನಾಂಬಿಕ ಕಾಲೇಜಿನ ಬಳಿ ಸೇರಲಿದ್ದು, ಪ್ರತಿನಿತ್ಯವೂ ಸಹಸ್ರಾರು ಮಂದಿ ಓಡಾಡುತ್ತಿರುವುದು ಗಮನದಲ್ಲಿದ್ದರೂ, ಸಹ ನಗರಸಭೆಯ ಅಧಿಕಾರಿಗಳು ಶೀಘ್ರವಾಗಿ ಸರಿಪಡಿಸದಿರುವುದು ಯಾಕೆ ಎಂಬುದು ಸ್ಥಳೀಯ ನಿವಾಸಿಗಳ ಯಕ್ಷ ಪ್ರಶ್ನೆಯಾಗಿದೆ.
ಕೋಳಿ, ಮಾಂಸ, ಮೀನು ಹಾಗೂ ಹಲವಾರು ರೀತಿಯ ತ್ಯಾಜ್ಯಗಳಿಂದ ತುಂಬಿ ಸಂಪೂರ್ಣವಾಗಿ ತನ್ನ ನೈಜ ಸ್ವರೂಪವನ್ನೇ ಕಳೆದುಕೊಂಡು ದುರ್ವಾಸನೆ ಬೀರುತ್ತಿರುವ ಶೆಟ್ಟಿಹಳ್ಳಿ ಕೆರೆ ಒಂದೆಡೆಯಾದರೆ, ಅದರ ಸೋರಲು ಮತ್ತು ನಗರದ ಕೊಳಚೆ ನೀರು ರಾಜಕಾಲುವೆ ಮೂಲಕ ಹರಿದು ಬರುವ ನೀರಿನ ಗಬ್ಬುವಾಸನೆ ಒಂದೆಡೆ. ಇದರ ಜೊತೆಗೆ ಮೋರಿ ಕುಸಿದಿರುವುದರಿಂದ ನೀರು ನಿಂತು ರಸ್ತೆಯ ಮೇಲೆಲ್ಲಾ ಹರಿಯುವ ಮುನ್ನಾ ಹಾಗೂ ಸಾರ್ವಜನಿಕರು ಬಿದ್ದು ಪ್ರಾಣ ಕಳೆದುಕೊಳ್ಳುವ ಮುನ್ನವೇ ಸೇತುವೆಯನ್ನು ಮರು ನಿರ್ಮಿಸಿ, ಸಾರ್ವಜನಿಕರನ್ನು ಪ್ರಾಣಾಪಾಯದಿಂದ ರಕ್ಷಿಸುವ ಹೊಣೆ ಪೌರಾಯುಕ್ತರ ಮೇಲಿದೆ.
ಇದು ನನ್ನ ಗಮನಕ್ಕೆ ಬಂದಿಲ್ಲ, ಇಂಜಿನಿಯರ್ ರವರನ್ನು ಕಳುಹಿಸಿ ವರದಿ ತರಿಸಿಕೊಂಡು ನನ್ನ ವ್ಯಾಪ್ತಿಯಲ್ಲೇ ಮುಗಿಯುವುದಾದರೆ ಇಂದೇ ಸರಿಪಡಿಸಲು ಪ್ರಯತ್ನಿಸುತ್ತೇನೆ. ದೊಡ್ಡ ಮಟ್ಟದ್ದಾದರೆ ಟೆಂಡರ್ ಕರೆಯಬೆಕಾಗುತ್ತದೆ. ಪರೀಕ್ಷಿಸಿ ಕ್ರಮ ಕೈಗೊಳ್ಳುತ್ತೇನೆ.
*ಶಿವನಂಕಾರಿಗೌಡ. ಪೌರಾಯುಕ್ತರು, ನಗರಸಭೆ ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು