Tel: 7676775624 | Mail: info@yellowandred.in

Language: EN KAN

    Follow us :


ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ

Posted date: 03 Jul, 2020

Powered by:     Yellow and Red

ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ

ಚನ್ನಪಟ್ಟಣ:ಜು/೦೩/೨೦ಶುಕ್ರವಾರ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ (ಕೋವಿಡ್-೧೯) ಶಕ್ತಿ ಮೀರಿ ಪರೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅನುಮಾನ ಮತ್ತು ಆತಂಕಿತರಾಗಿ ಹಲವರು ಸೋಂಕನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸೋಂಕಿಗೆ ಸಂಬಂಧ ಪಟ್ಟ ಹಾಗೆ ಯಾವುದೇ ರೀತಿಯ ಲಕ್ಷಣಗಳು ಕಂಡು ಬರದಿದ್ದಲ್ಲಿ, ಅಂತಹವರು ಸ್ವಾಬ್ ತೆಗೆಸಬಾರದಾಗಿ ಡಾ.ಅಶ್ವತ್ಥ ನಾರಾಯಣ ಅವರು ಹೇಳಿ ದರು. ಅವರು ಇಂದು ನಗ ರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.


ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ರೋಗಿಗಳನ್ನು ಮಾತನಾಡಿಸಿ, ಆಸ್ಪತ್ರೆಯ ಸಿಬ್ಬಂದಿಗಳ ನಡುವಳಿಕೆ ಹಾಗೂ ಔಷಧೋಪಚಾರದ ಬಗ್ಗೆ ಮಾಹಿತಿ ಪಡೆದರು. ವೈದ್ಯಕೀಯ ಸಿಬ್ಬಂದಿಗಳ ಜೊತೆಯೂ ಸಮಾಲೋಚನೆ ನಡೆಸಿ, ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವಂತೆ ತಿಳಿ ಹೇಳಿದರು.


ಸಂದರ್ಭದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಸಚಿವರು, ಜಿಲ್ಲೆಗೆ ವಾರದಲ್ಲಿ ಒಂದು ದಿನವಾದರೂ ಭೇಟಿ ನೀಡುತ್ತೇನೆ, ಭೇಟಿ ನೀಡಿದಾಗ ತಾಲ್ಲೂಕು ಆಸ್ಪತ್ರೆಗಳಲ್ಲಿ ಭೇಟಿ ನೀಡಿ ಪರಿಶಿಲೀಸುತ್ತೇನೆ, ಆದರೆ ಇಲ್ಲಿನ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚನ್ನಪಟ್ಟಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ೫೦ ಹಾಸಿಗೆಗಳನ್ನು ಕಾಯ್ದಿ ರಿಸಲಾಗಿದೆ, ಆದರೆ ಇದು ವರೆಗೂ ಇಲ್ಲಿ ಯಾವುದೇ ರೋಗಿಗೂ ಚಿಕಿತ್ಸೆ ನೀಡಿಲ್ಲ, ವ್ಯಕ್ತಿಗೆ ಕೋವಿಡ್ ಪಾಸಿಟೀವ್ ವರದಿ ಬಂದ ನಂತರ ಅವರನ್ನು ರಾಮನಗರ ಕೋವಿಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಇನ್ನು ಕೋವಿಡ್ ಕೇಸುಗಳು ಹೆಚ್ಚಾದರೂ ಅದನ್ನು ನಿರ್ವಹಿಸಲು ಸರ್ಕಾರ ಸಜ್ಜಾಗಿದೆ ಎಂದರು.


ಹಲವಾರು ಸಾಂಸ್ಥಿಕ ಕ್ವಾರಂಟೈನ್ ಹಾಸ್ಟೆಲ್‌ಗಳಲ್ಲಿ ಶಂಕಿತರಿದ್ದು, ಅವರುಗಳಿಗೆ ಒಂದು ವಾರವಾದರೂ ಸ್ವಾಬ್ ತೆಗೆಯದೆ ನಿರ್ಲಕ್ಷ ಮಾಡಲಾಗುತ್ತಿದೆ ಹಾಗೂ ಸರಿಯಾದ ಊಟೋಪಚಾರದ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶಂಕಿತರೇ ವಿಷಯ ಹರಿಯ ಬಿಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಕುಟುಂಬದ ಶಂಕಿತರಲ್ಲಿ ಐದು ಮಂದಿಗೆ ಸ್ವಾಬ್ ತೆಗೆಯಲಾಗುತ್ತಿದೆ. ಹಾಗೂ ಸ್ವಲ್ಪ ಮಟ್ಟಿಗೆ ತಡವಾಗುತ್ತಿರುವುದು ಸತ್ಯ, ಆದರೆ ಯಾರನ್ನೂ ನಿರ್ಲಕ್ಷ ಮಾಡಿಲ್ಲ. ಊಟೋಪಚಾರವನ್ನು ಜಿಲ್ಲಾಡಳಿತ ಸೂಕ್ತವಾಗಿ ನಿರ್ವಹಿಸುತ್ತಿದ್ದು, ಈ ವಿಷಯದಲ್ಲಿ ರಾಜಿ ಇಲ್ಲ ಎಂದರು.

ಡಿ.ಕೆ.ಎಸ್ ಚಾರಿಟ ಬಲ್ ಟ್ರಸ್ಟ್ ಊಟ ನೀಡಲು ಮುಂದೆ ಬಂದಿದ್ದು ಸಂತೋಷಕರ, ಈ ವಿಷಯದಲ್ಲಿ ಯಾರು ಬೇಕಾದರೂ ಸಹಾಯ ಮಾಡಬಹುದು ಎಂದರು.


ಕೊರೊನಾ ಬಂದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡು, ಸೋಂಕಿತರು ಹೆಚ್ಚಾದ ನಂತರ ಸಡಿಲ ಮಾಡಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ವಿದೇಶದಿಂದ ಬಂದವರಿಗೆಲ್ಲರಿಗೂ ಪರೀಕ್ಷೆ ಮಾಡಿಸಲಾಗಿದ್ದು. ಅಂತರ್ ರಾಜ್ಯ, ಮತ್ತು ಅಂತರ್ ಜಿಲ್ಲಾ ಶಂಕಿತರಿಗೂ ಸಹ ಪರೀಕ್ಷೆ ನಡೆಸಲಾಗುತ್ತಿದೆ, ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಶೀಘ್ರವಾಗಿ ಪರೀಕ್ಷಿಸಿ ಉತ್ತಮ ಸೇವೆ ನೀಡುತ್ತೇವೆ. ಸರ್ಕಾರ ಮತ್ತು ವೈದ್ಯರು ಸೇರಿ ಶಂಕಿತರು ಮತ್ತು ಸೋಂಕಿತರಿಗೆ ಉತ್ತಮ ಸೇವೆ ನೀಡುತ್ತೇವೆ. ಯಾರಿಗೂ ತಾರತ್ಯಮ ಮಾಡುವುದಿಲ್ಲ ಎಂದರು. ಇದೊಂದು ಸೋಂಕಿನ ಖಾಯಿಲೆಯಾಗಿದ್ದು, ಹರಡುವಿಕೆ ಹೆಚ್ಚಾಗಿದೆ ಆದ ಕಾರಣ ಸಾರ್ವಜನಿಕರೇ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.


ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡದಿರುವ ಬಗ್ಗೆ ಗಮನಸೆಳೆದಾಗ, ಮಾರ್ಚ್ ತಿಂಗಳವರೆಗೂ ಸಂಬಳ ನೀಡಲಾಗಿದೆ, ಕೆಲಸವಿಲ್ಲದಾಗ ಸಂಬಳ ಕೊಡಲಾಗುವುದಿಲ್ಲ, ಕಾಲೇಜು ಪ್ರಾರಂಭವಾದ ನಂತರ ಮತ್ತೆ ಅವರನ್ನು ಸೇರ್ಪಡೆಗೊಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇತ್ತೀಚಿಗೆ ಬಿಜೆಪಿಯಲ್ಲಿ ಒಳ ಜಗಳ ಹೆಚ್ಚಾಗಿದ್ದು, ಮಧ್ಯರಾತ್ರಿಯಲ್ಲಿ ಒಂದಷ್ಟು ಸಚಿವರು ಸಭೆ ಸೇರಿದ್ದರು ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೂ ಅಂದು ಕಂದಾಯ ಸಚಿವ ಆರ್.ಅಶೋಕ್ ರವರ ಜನ್ಮದಿನವಿದ್ದುದ್ದರಿಂದ ಅವರಿಗೆ ಶುಭ ಕೋರಲು ಸಚಿವರು ಸೇರಿದ್ದಿರಬಹುದು.ಹಲವಾರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಅಶೋಕ್ ಅವರು ಸಮಯಕ್ಕೆ ಸರಿಯಾಗಿ ಸಿಗದಿದ್ದರಿಂದ ಅವರನ್ನು ಆ ಸಮಯದಲ್ಲಿ ಭೇಟಿ ಮಾಡಿರಬಹುದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.


ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ನ ಚಿಕಿತ್ಸೆಗಾಗಿ ಇಂತಿಷ್ಟೆ ಪ್ರಮಾಣದ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಆಸ್ಪತ್ರೆಗಳಿಗೆ ಸರ್ಕಾ ರದವತಿಯಿಂದಲೇ ರೋಗಿಗಳನ್ನು ದಾಖಲಿಸಲಾಗುವುದು. ಸ್ಥಳೀಯ ಆಡಳಿತದ ವತಿಯಿಂದ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಲಾಗುವುದರ ಜೊತೆಗೆ, ಬಡವರು ಶ್ರೀಮಂತರು ಎನ್ನದೆ ಎಲ್ಲ ರಿಗೂ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

ಕೋವಿಡ್-೧೯ ನಿಯಂತ್ರಣದಲ್ಲಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಕೋವಿಡ್ ಅನ್ನು ನಿಯಂತ್ರಿಸಲು ಸರ್ಕಾರ ಅಗತ್ಯವಿರುವ ಕ್ರಮ ಕೈಗೊಂಡಿದೆ. ಹಾಗೆಯೇ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.


ಭೇಟಿಯ ಸಮಯದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್, ಜಿಲ್ಲಾ ವೈದ್ಯಾಧಿಕಾರಿ ಡಾ.ನಿರಂಜನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜು, ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ.ವಿಜಯನರಸಿಂಹ, ಎಎಸ್‌ಪಿ ರಾಮರಾಜನ್ ಇನ್ನಿತರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑