Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು

Posted date: 30 Jul, 2020

Powered by:     Yellow and Red

ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ಪೇಟೆಗೆ ಬಂದ ತರಹೇವಾರಿ ಹೂವುಹಣ್ಣುಹಂಪಲು, ಖರೀದಿಗೆ ಮುಗಿಬಿದ್ದ ಭಕ್ತರು

ಚನ್ನಪಟ್ಟಣ:ಜು/30/20/ಗುರುವಾರ. ನಾಳೆ (ಜುಲೈ:30 ರ ಶುಕ್ರವಾರ) ವರಮಹಾಲಕ್ಷ್ಮಿ ದೇವಿಯ ಹಬ್ಬ. ಹಿಂದೂ ಭಕ್ತಾದಿಗಳು ಇರುವೆಲ್ಲೆಡೆಯೂ ಸಡಗರ, ಸಂಭ್ರಮ ಹಾಗೂ ಅವರವರ ಅಂತಸ್ತಿಗೆ ತಕ್ಕಂತೆ ದೇವಿಗೆ ಅಲಂಕರಿಸಿ, ನಗದು, ಒಡವೆ, ವಸ್ತ್ರಾಧಿಗಳನ್ನು ಇಟ್ಟು ಪೂಜಿಸುವ ಸಂಪ್ರದಾಯ ನಡೆದುಬಂದಿದೆಯಾದರೂ ಆಡಂಬರದ ಪೂಜೆ ಎನ್ನುವುದು ಮಾತ್ರ ಒಂದರೆದಶಕದಿಂದೀಚೆಗೆ ಎಲ್ಲೆಡೆ ವ್ಯಾಪಿಸಿದೆ. ಹಬ್ಬದ ಪ್ರಯುಕ್ತ ಗ್ರಾಹಕರು ಖರೀದಿಗೆ ಇಂದೇ ಮುಗಿಬಿದ್ದಿದ್ದಾರೆ.


*ಪೇಟೆ ತುಂಬೆಲ್ಲಾ ಹೂವುಹಣ್ಣುಹಂಪಲು*

ನಗರದ ಅಂಚೆಕಛೇರಿ ರಸ್ತೆ, ಮಹಾತ್ಮಗಾಂಧಿ ರಸ್ತೆ, ಜಯಚಾಮರಾಜೇಂದ್ರ ರಸ್ತೆ, ರೈಲ್ವೇ ನಿಲ್ದಾಣ ರಸ್ತೆ, ಬೆಂಗಳೂರು ಮೈಸೂರು ಹೆದ್ದಾರಿ ಬದಿ ಹಾಗೂ ಡಿ ಟಿ ರಾಮು ವೃತ್ತ ಸೇರಿದಂತೆ ನಗರದೆಲ್ಲೆಡೆಯೂ ತರಹೇವಾರಿ ಹೂ ಗುಚ್ಛಗಳು, ಬಹುತೇಕ ಎಲ್ಲಾ ರೀತಿಯ ಅಲಂಕಾರಿಕ ಹೂವು, ಬಾಳೆ ಕಂದುಗಳು, ಬಳೆಯ ಅಂಗಡಿಗಳು ಮತ್ತು ಹಣ್ಣುಗಳ ಜೊತೆಗೆ ಪ್ಲಾಸ್ಟಿಕ್ ನಿಂದ ಮಾಡಿದ ಹೂವು ಹಣ್ಣುಗಳು ಮಾರುಕಟ್ಟೆಗೆ ಬಂದಿವೆ.


*ಗಿರವಿ, ಸೀರೆ, ಪೂಜಾ ಅಂಗಡಿಗಳ ಬಳಿ ಗ್ರಾಹಕರು*

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಕೆಲವರು, ಅಕ್ಕಪಕ್ಕದ ಮನೆಯವರ ಪೂಜೆಯನ್ನು ನೋಡಿ, ದೇವಿಯ ವಿಗ್ರಹವನ್ನು ವಿಜೃಂಭಣೆಯಿಂದ ಪೂಜಿಸುವ ಮೂಲಕ ಆಚರಿಸುತ್ತಿದ್ದಾರೆ ! ನಾವು ಅವರಿಗಿಂತ ಹೆಚ್ಚಿನ ರೀತಿಯಲ್ಲಿ ಪೂಜಿಸಬೇಕೆಂದು ಪೂಜಿಸುವ ಹೊಟ್ಟಕಿಚ್ಚಿನ ಪೂಜೆಗಳೇ ಹೆಚ್ಚಾಗಿವೆ ಎಂದರೆ ತಪ್ಪಾಗಲರಾದು. ಆದ್ದರಿಂದ ಗಿರವಿ ಇಟ್ಟಿರುವ ಒಡವೆಗಳನ್ನು ಬಿಡಿಸಲು ಗಿರವಿ ಅಂಗಡಿಗಳ ಮುಂದೆ, ದೇವಿಗೆ ಉಡಿಸಲು ವಸ್ತ್ರ ಖರೀದಿ, ಅಲಂಕರಿಸಲು ಪೂಜಾ ಸಾಮಾಗ್ರಿಗಳ ಅಂಗಡಿಗಳ ಮುಂದೆ ಭಕ್ತ ಜನರು ಮುಗಿಬಿದ್ದಿದ್ದರು.


*ಭಕ್ತಿಯೇ ಎಲ್ಲಾ, ಕೊರೊನಾ ಭಯವೇ ಇಲ್ಲ*

ಪೂಜಾ ಸಾಮಗ್ರಿಗಳನ್ನು ಕೊಳ್ಳುವ ಜನರಲ್ಲೇನಕರಿಗೆ, ಕಡ್ಡಾಯ ಮಾಸ್ಕ್ ಧರಿಸಬೇಕೆನ್ನುವುದಾಗಲಿ, ಜನರಿಂದ ಜನಕ್ಕೆ ಅಂತರ ಕಾಯ್ದುಕೊಳ್ಳಬೇಕೆಂಬುವ ಮನಸ್ಥಿತಿಯಾಗಲಿ ಇಲ್ಲದಿರುವುದು, ಕೊರೊನಾ ಸೋಂಕಿನ ಬಗ್ಗೆ ನಮಗೆ ಭಯವಿಲ್ಲಾ ಎಂಬುದನ್ನು ಸಾರುವಂತಿತ್ತು. ಪೋಲೀಸರು ಮತ್ತು ಕೋವಿಡ್ ಗೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳುವಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ್ವಿಶತಕ ಮುಟ್ಟುತ್ತಿರುವ ಸೋಂಕಿತರು ಸಹಸ್ರ ಗಡಿ ದಾಟುವ ಸಮಯ ದೂರವಿಲ್ಲ.


*ಪತ್ರಿಕೆಯ ಕಳಕಳಿ*

ನಿಮ್ಮ ಭಕ್ತಿ, ನಿಮ್ಮ ಹಣ, ಭಕ್ತಿಯಿಂದ ಪೂಜಿಸಿ, ಕೊರೊನಾ ದಿಂದ ಜನರಷ್ಟೇ ಅಲ್ಲಾ, ದೇಶದ ಆರ್ಥಿಕತೆಯೇ ಬುಡಮೇಲಾಗುವ ಸ್ಥಿತಿ ಎದುರಾಗಿದೆ. ಅಂತಹದರಲ್ಲಿ, ಆಡಂಬರದ ಪೂಜೆ ಬೇಡ, ಬಾಗಿನ, ಕುಂಕುಮ ಎಂದು ಆಹ್ವಾನಿಸುವುದು ಬೇಡ, ನೀವು ಹೋಗದಿರುವುದು ಸಹ ಅಷ್ಟೇ ಕ್ಷೇಮ. *(ಹೆಚ್ಚು ಹಣ, ಒಡವೆ ಇಟ್ಟು ಪ್ರದರ್ಶಿಸಿದರೆ ನಾಳೆ ನೀವು ಕಂಬಿಯ ಹಿಂದೆ, ಪ್ರದರ್ಶನಕ್ಕಿಟ್ಟಿದ್ದು ಸರ್ಕಾರದ ಬೊಕ್ಕಸಕ್ಕೆ ಹೋದರು ಆಶ್ಚರ್ಯ ಪಡಬೇಕಾಗಿಲ್ಲ.)* ನಿಮ್ಮ ನಿಮ್ಮ ಮನೆಯಲ್ಲಿ ಆಡಂಬರವಿಲ್ಲದೆ ಭಕ್ತಿಯಿಂದ ಪೂಜಿಸಿ, ಶ್ರೀಮಂತರಾಗಲು ದುಡಿಮೆಯನ್ನು ಮಾಡಿ. ಕೊರೊನಾ ಓಡಿಸಲು ಪಣತೊಡಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑