ಮಂಗಳವಾರಪೇಟೆಯ ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ
ಮಂಗಳವಾರ ರಾತ್ರಿ ಚನ್ನಪಟ್ಟಣ ರೈಲ್ವೆ ಸ್ಟೇಷನ್ ನಲ್ಲಿ ಸುಮಾರು 20 ವರ್ಷದ, ಮಂಗಳವಾರಪೇಟೆ ಗ್ರಾಮದ ಶೃತಿ ಎಂಬಾಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ರೈಲ್ವೆ ಪೋಲೀಸರು ಮಹಜರು ಮಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವುದಾಗಿ ತಿಳಿದುಬಂದಿದೆ.
ರೈಲು ಬರುವ ಸಮಯದಲ್ಲಿ ಈಕೆ ಪ್ಲಾಟ್ ಫಾರಂನಿಂದ ಜಿಗಿದು ಹಳಿಯ ಮೇಲೆ ಬಿದ್ದ ತಕ್ಷಣ ರೈಲು ಹರಿದು ಹೋಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈಕೆ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ತನಿಖೆಯ ನಂತರ ಬಹಿರಂಗವಾಗಬೇಕಿದೆ.
ಈಕೆ ನಗರದ ಮಂಗಳವಾರಪೇಟೆ ಯ ಬಸವನಗುಡಿ ಬಳಿಯ ತಿಮ್ಮಯ್ಯ ಎಂಬುವವರ ಮಗಳು ಎಂದು ತಿಳಿದುಬಂದಿದ್ದು,
ಸಂಬಂಧಿಕರು ರೈಲ್ವೆ ಪೋಲೀಸರನ್ನು ಸಂಪರ್ಕಿಸದವಂತೆ ಸೂಚಿಸಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು