ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಮೊಗೇನಹಳ್ಳಿ ಎಂ ರಾಮು ರವರಿಗೆ ಇಂದು ಬೆಳಿಗ್ಗೆ ಗಾಂಧಿಭವನದ ಮುಂಭಾಗ ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಸಂಘಸಂಸ್ಥೆಗಳ, ಹಲವಾರು ಮುಖಂಡರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಹಿರಿಯ ಪತ್ರಕರ್ತ ಹಾಗೂ ಅಂದಿನ ರೈತ ನಾಯಕರಾಗಿದ್ದ ಸು ತ ರಾಮೇಗೌಡ ಮಾತನಾಡಿ ಕಳೆದ 38 ವರ್ಷಗಳಿಂದ ರೈತಸಂಘದಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದವರು. ಮೊದಲಿಗೆ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ಅವರು ರೈತ ಸಂಘದ ಜೊತೆಗೂಡಿ ಕಲ್ಲು ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಮನೆಮಠ ತೊರೆದು, ಪ್ರಾಣದ ಹಂಗನ್ನು ತೊರೆದು ಹೋರಾಟದಲ್ಲಿ ಸುದೀರ್ಘವಾಗಿ ಭಾಗಿಯಾದ ಅಪರೂಪದ ಹೋರಾಟಗಾರ ಎಂದರು.
ಕಕಜವೇ ರಾಜ್ಯಾಧ್ಯಕ್ಷ ಎಲ್ ರಮೇಶ್ ಗೌಡ ಮಾತನಾಡಿ, ರಾಜ್ಯದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಹೋರಾಟದ ಛಾಪು ಮೂಡಿಸಿದ ರೈತನಾಯಕ ರಾಮು ರವರು. ಇಂತಹ ರೈತನಾಯಕರನ್ನು ಕಳೆದುಕೊಂಡ ರೈತಸಂಘ ಇಂದು ಬಡವಾಗಿದೆ. ಮುಂದಿನ ದಿನಗಳಲ್ಲಿ ರೈತಸಂಘ ಇನ್ನೂ ಹೆಚ್ಚಿನ ಹೋರಾಟಗಳಲ್ಲಿ ಭಾಗಿಯಾಗಬೇಕು. ಇಲ್ಲವಾದರೆ ರೈತ ಸಂಘ ಹೆಸರೇಳದಂತಾಗುತ್ತದೆ. ಇದಕ್ಕೆ ಎಲ್ಲರೂ ಒಗ್ಗೂಡಿ ಸಂಘವನ್ನು, ರೈತರನ್ನು ಉಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ಪತ್ರಕರ್ತ ಗೋ ರಾ ಶ್ರೀನಿವಾಸ ಮಾತನಾಡಿ, ರಾಮಣ್ಣ ನವರಿಗೆ ಒಂದು ನೋವಿತ್ತು. ಇಂದು ರಾಜ್ಯ ರೈತ ಸಂಘ ಎನ್ನುವುದು ಈಗ ಇಪ್ಪತ್ತಕ್ಕೂ ಹೆಚ್ಚು ಬಣಗಳಾಗಿವೆ. ಇದು ಒಗ್ಗೂಡದ ಹೊರತು ರೈತರ ಉದ್ಧಾರವಾಗಲಾರದು ಎಂಬ ಕೊರಗಿತ್ತು. ಈ ಕೊರಗನ್ನು ಹೋಗಲಾಡಿಸಿ ರೈತರನ್ನು ಮತ್ತು ಸಂಘವನ್ನು ಉಳಿಸುವ ಹೊಣೆ ಇಂದಿನ ರೈತ ಸಂಘದವರ ಮೇಲಿದೆ. ಇದನ್ನು ಉಳಿಬೆಳೆಸಿದರೆ ರಾಮಣ್ಣ ನವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ, ಆಣಿಗೆರೆ ಮಲ್ಲಯ್ಯ, ಸಿಂ ಲಿಂ ನಾಗರಾಜು, ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪತ್ರಕರ್ತ ಅಭಿಲಾಷ್ ತಿಟ್ಟಮಾರನಹಳ್ಳಿ, ಶಿಕ್ಷಕ ಯೋಗೇಶ್, ಕರವೇ ತಾಲ್ಲೂಕು ಅಧ್ಯಕ್ಷ ಕೋ ಪು ಸಾಗರ್ ಮತ್ತಿತರರು ಮಾತನಾಡಿದರು.
ಪಿ ಡಿ ರಾಜು, ಯೋಗೇಶ್ ಬೇವೂರು, ತಿಮ್ಮೇಶ್ ಪ್ರಭು, ನಿವೃತ್ತ ಅಧಿಕಾರಿಗಳಾದ ಬೆಳಕೆರೆ ರಾಜು, ರಾಮಚಂದ್ರು, ಮಾಸ್ತಮ್ಮವಾಣಿ ಮಂಜುನಾಥ, ಮಹೇಶ್ ಮೆಂಗಳ್ಳಿ, ರಾಜ್ ಟಿವಿ ಯ ಚೇತನ್ ಸೇರಿದಂತೆ ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜಿಲ್ಲೆಯ ರೈತ ನಾಯಕರು ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು