Tel: 7676775624 | Mail: info@yellowandred.in

Language: EN KAN

    Follow us :


ಪಿಎಸೈ ಹುದ್ದೆ ಕೊಡಿಸುವ ಆಮೀಷ ಒಡ್ಡಿ 14 ಲಕ್ಷ ದೋಖಾ: ಚನ್ನಪಟ್ಟಣದಲ್ಲಿ ದೂರು ದಾಖಲು

Posted date: 17 Nov, 2021

Powered by:     Yellow and Red

ಪಿಎಸೈ ಹುದ್ದೆ ಕೊಡಿಸುವ ಆಮೀಷ ಒಡ್ಡಿ 14 ಲಕ್ಷ ದೋಖಾ: ಚನ್ನಪಟ್ಟಣದಲ್ಲಿ ದೂರು ದಾಖಲು

ಚನ್ನಪಟ್ಟಣ: ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ರೂ. ದೋಖಾ ಪ್ರಕರದಲ್ಲಿ ಮೂವರ ವಿರುದ್ದ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತಿದೆ.


ಬೆಂಗಳೂರು ದಕ್ಷಿಣ ತಾಲೂಕಿನ‌ ಕೆಂಗೇರಿ ಬಳಿಯ ರಾಮೋಹಳ್ಳಿಯ ಗೋವಿಂದರಾಜು ಮತ್ತು ದಿಲೀಪ್ ಎಂಬುವರಿಂದ ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ಹಣ ಪಡೆದು ನಮಗೆ ವಂಚನೆ ಮಾಡಿದ್ದಾರೆಂದು ದೂರು  ನೀಡಿದ್ದಾರೆ.


ಚನ್ನಪಟ್ಟಣ ನಗರದ ಅನ್ನಪೂರ್ಣೇಶ್ವರಿ ಬಡಾವಣೆಯ ಗಿರೀಶ್ ಉ ಬಚ್ಚನ್, ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯ ದ್ವಿತೀಯ ದರ್ಜೆ ಸಹಾಯಕ ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಾಗಿದ್ದು, ನಮ್ಮ ಬಳಿಯಿಂದ ಈ ಮೂವರು ಮಂದಿ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 36 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಾವು ಹಂತ ಹಂತವಾಗಿ ಹಣ ನೀಡುವುದಾಗಿ ಹೇಳಿ 14 ಲಕ್ಷ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ನಾವು 1 ಲಕ್ಷ, 2 ಲಕ್ಷ, 5 ಲಕ್ಷ ಹೀಗೆ ಹಂತ ಹಂತವಾಗಿ ಗಿರೀಶ್, ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ಗೆ 14 ಲಕ್ಷ ನೀಡಿದ್ದು, ಒಂದು ವರ್ಷ‌ ಕಳೆದರೂ ನಮ್ಮ‌ ಕೆಲಸ ಮಾಡಿ ಕೊಡಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಹಣ ಮರುಪಾವತಿ ಮಾಡಲು ಕೇಳಿದ್ದಕ್ಕೆ ಚೆಕ್ ನೀಡಿ ವಂಚಿಸಿದ್ದು, ಇದಲ್ಲದೇ ಈ ಬಗ್ಗೆ ನಾವು ಪ್ರಶ್ನಿಸಿದ್ದಕ್ಕೆ ನಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ.


ನೀವು ಪೊಲೀಸರಿಗೆ ದೂರು ನೀಡಿದರು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಧಮಕಿ ಹಾಕಿದ್ದಾರೆ. ಚನ್ನಪಟ್ಟಣ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑