ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ಎರಡನೇ ಅವಧಿಯ ಅಧ್ಯಕ್ಷ/ಉಪಾಧ್ಯಕ್ಷರ ಮೀಸಲಾತಿ ನಿಗಧಿ
ರಾಮನಗರ, ಜೂ. 03: ರಾಮನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2023ರ ಸಂಬಂದ ಎರಡನೇ ಅವಧಿಗೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ/ಉಪಾಧ್ಯಕ್ಷರುಗಳ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗದ ಪತ್ರದ ನಿರ್ದೇಶದನ್ವಯ ನಿರ್ಧರಿಸುವ ಪ್ರಕ್ರಿಯೆಯನ್ನು ತಾಲ್ಲೂಕುವಾರು ನಿಗಧಿತ ದಿನಾಂಕಗಳಂತೆ ನಡೆಸಲು ಸಮಯ ನಿಗಧಿಪಡಿಸಲಾಗಿದೆ.
*ವಿವರ:*
ರಾಮನಗರ ತಾಲ್ಲೂಕಿನಲ್ಲಿ ಜೂ. 12ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣ, ಜಿಲ್ಲಾ ಪಂಚಾಯತ್ ರಾಮನಗರ. ಚನ್ನಪಟ್ಟಣ ತಾಲ್ಲೂಕಿಗೆ ಜೂ. 13ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪ, ಬಿ.ಎಂ. ರಸ್ತೆ, ಕೆಂಗಲ್, ಹಾರೋಹಳ್ಳಿ ತಾಲ್ಲೂಕಿಗೆ ಜೂ. 13ರಂದು ಮಧ್ಯಾಹ್ನ 3.30ಕ್ಕೆ ವಿದ್ಯಾಸಂಸ್ಥೆ ಸಭಾ ಭವನ, ಹಾರೋಹಳ್ಳಿ ಟೌನ್. ಕನಕಪುರ ತಾಲ್ಲೂಕಿಗೆ ಜೂ. 14ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಬಿ. ಕಲ್ಯಾಣ ಮಂಟಪ, ರೈಸ್ ಮಿಲ್, ಬೆಂಗಳೂರು ರಸ್ತೆ, ಕನಕಪುರ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಜೂ. 14ರಂದು ಮಧ್ಯಾಹ್ನ 3.30ಕ್ಕೆ ಆರ್.ಆರ್. ಪ್ಯಾಲೇಸ್, ಕೃಷಿ ಇಲಾಖೆ ಪಕ್ಕ, ನಟರಾಜ ಬಡಾವಣೆ, ಮಾಗಡಿ ಟೌನ್ ಇಲ್ಲಿ ನಡೆಸಲಾಗುವುದು.
ಮೀಸಲಾತಿ ಪ್ರಕ್ರಿಯೆಗೆ ಆಯಾ ತಾಲ್ಲೂಕು ತಹಶೀಲ್ದಾರರು ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು